<p><strong>ಯಲಬುರ್ಗಾ</strong>: ‘ಸಂಸ್ಥಾನ ಹಿರೇಮಠದ ಪೀಠಾಧಿಪತಿ ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಅವರ ಸಹೋದರರು ಭಕ್ತರೊಂದಿಗೆ ಸೌಹಾರ್ದದಿಂದ ನಡೆದುಕೊಳ್ಳುವುದರ ಜೊತೆಗೆ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು’ ಎಂದು ನಿವೃತ್ತ ಪ್ರಾಚಾರ್ಯ ಶರಣಪ್ಪ ಬೇಲೇರಿ ಹೇಳಿದರು.</p>.<p>ಪಟ್ಟಣದಲ್ಲಿ ಶ್ರೀಮಠದ ಭಕ್ತರು ಆಯೋಜಿಸಿದ್ದ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು,‘ಮಠ ಹಾಗೂ ಶ್ರೀಗಳ ಬಗ್ಗೆ ಗೌರವವಿದೆ. ಆದರೆ, ಮಠದ ಆಸ್ತಿಪಾಸ್ತಿ, ಲೆಕ್ಕಪತ್ರಗಳ ಕುರಿತು ಭಕ್ತರು ವಿಚಾರಿಸಿದಾಗ ಶ್ರೀಗಳು ಕೋಪಗೊಳ್ಳುವುದು ಸರಿಯಲ್ಲ. ಭಕ್ತರಿಂದ ಭಕ್ತರಿಗಾಗಿಯೇ ಇರುವ ಮಠಗಳು ಪಾರದರ್ಶಕವಾಗಿ ಇರಬೇಕು’ ಎಂದರು.</p>.<p>‘ಭಕ್ತರಿಲ್ಲದೆ ಮಠಗಳು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಮಠದ ಆಗುಹೋಗುಗಳ ಬಗ್ಗೆ ಭಕ್ತರು ವಿಚಾರಿಸಿದರೆ ಸೂಕ್ತ ರೀತಿಯಲ್ಲಿ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಮುಕ್ತವಾಗಿ ಚರ್ಚಿಸಲು ಬದ್ಧರಾಗಿರಬೇಕು. ಆದರೆ, ಸಂಸ್ಥಾನ ಹಿರೇಮಠದ ಈಗಿನ ಸ್ವಾಮೀಜಿ ಹಾಗೂ ಕುಟುಂಬದ ಸದಸ್ಯರು ಸೇರಿ ಭಕ್ತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಮಠದ ವಿಚಾರದಲ್ಲಿ ಕುಟುಂಬದ ಸದಸ್ಯರ ಹಸ್ತಕ್ಷೇಪ ತರವಲ್ಲ. ಹೀಗೆ ಮುಂದುವರಿದರೆ ಪರ್ಯಾಯ ವ್ಯವಸ್ಥೆಗೆ ಮುಂದಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.</p>.<p>ಮುಖಂಡ ದಾನನಗೌಡ ತೊಂಡಿಹಾಳ ಮಾತನಾಡಿ,‘ಒಂದು ವರ್ಷದಿಂದಲೂ ಸ್ವಾಮೀಜಿ ವಿರುದ್ಧ ಭಕ್ತರು ಮಾಡಿರುವ ಆರೋಪಗಳಿಗೆ ಬದ್ಧರಾಗಿದ್ದಾರೆ. ಸ್ವಾಮೀಜಿಯವರು ಭಕ್ತರೊಂದಿಗೆ ನೇರವಾದ ಚರ್ಚೆಗೆ ಬಂದು ಉತ್ತರ ಕೊಡಬೇಕು. ಭಕ್ತರು ಹೇಳಿದಂತೆ ನಡೆದುಕೊಳ್ಳುವುದು ಮುಖ್ಯ’ ಎಂದರು.</p>.<p>‘ಮುಂದಿನ ದಿನಗಳಲ್ಲಿ ಸ್ವಾಮೀಜಿಯವರನ್ನು ಬದಲಾಯಿಸಲು ಭಕ್ತರು ಹಿಂದೇಟು ಹಾಕುವುದಿಲ್ಲ. ಶ್ರೀಮಠಕ್ಕೆ ಅದರದೇ ಆದ ಗೌರವವಿದೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದರ ಬಗ್ಗೆ ಕಾಳಜಿ ತೋರಬೇಕಾಗಿದೆ. ಅದನ್ನು ಬಿಟ್ಟು, ಮಠದ ಸ್ಮಶಾನದಲ್ಲಿ ಶವ ಸಂಸ್ಕಾರಕ್ಕೆ ಅಡ್ಡಿಪಡಿಸುವುದು, ಶಾಲೆಯಲ್ಲಿ ಪಾಲಕರಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡುವುದು ಸರಿಯಲ್ಲ. ಈ ಹಿಂದಿನ ಲೆಕ್ಕಪತ್ರಗಳ ಬಗ್ಗೆ ಬಹಿರಂಗವಾಗಿ ಮಾಹಿತಿ ನೀಡಬೇಕು’ ಎಂದು ಆಗ್ರಹಿಸಿದರು.</p>.<p>ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಸಾಕಷ್ಟು ಜನರು ಸ್ವಾಮೀಜಿ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಹರಿಹಾಯ್ದರು.</p>.<p>‘ಮಠದ ಪರಂಪರೆ ಹಾಗೂ ಆಸ್ತಿ ಉಳಿಯಬೇಕಾದರೆ ಟ್ರಸ್ಟ್ ರಚಿಸಬೇಕು. ಅಕ್ರಮಗಳನ್ನು ಪತ್ತೆ ಮಾಡಿ ತಪ್ಪು ಮಾಡಿದವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು’ ಎಂದು ಒತ್ತಾಯಿಸಿದರು.</p>.<p>ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರಿಗೆ ಸೂಕ್ತ ಕ್ರಮಕ್ಕೆ ಮನವಿ ಸಲ್ಲಿಸಿದರು.</p>.<p>ವೀರನಗೌಡ ಬನ್ನಪ್ಪಗೌಡರ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಪ್ರಕಾಶ ನಾಶಿ, ಸಿಪಿಐ ಮೌನೇಶ್ವರ ಪಾಟೀಲ, ಮುಖಂಡರಾದ ಪ್ರಕಾಶ ಬೇಲೇರಿ, ಸುರೇಶಗೌಡ ಶಿವನಗೌಡರ, ಶಂಕರಪ್ಪ ಗಾಂಜಿ, ಅಕ್ಕಮಹಾದೇವಿ ಬನ್ನಪ್ಪಗೌಡರ, ಸುರೇಶ ನಡುವಲಮನಿ, ಸುಭಾಷ ಹೊಂಬಳ, ಈರಪ್ಪ ಕುಡಗುಂಟಿ ಹಾಗೂ ಶಿವಾನಂದ ಬಣಕಾರ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಬುರ್ಗಾ</strong>: ‘ಸಂಸ್ಥಾನ ಹಿರೇಮಠದ ಪೀಠಾಧಿಪತಿ ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಅವರ ಸಹೋದರರು ಭಕ್ತರೊಂದಿಗೆ ಸೌಹಾರ್ದದಿಂದ ನಡೆದುಕೊಳ್ಳುವುದರ ಜೊತೆಗೆ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು’ ಎಂದು ನಿವೃತ್ತ ಪ್ರಾಚಾರ್ಯ ಶರಣಪ್ಪ ಬೇಲೇರಿ ಹೇಳಿದರು.</p>.<p>ಪಟ್ಟಣದಲ್ಲಿ ಶ್ರೀಮಠದ ಭಕ್ತರು ಆಯೋಜಿಸಿದ್ದ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು,‘ಮಠ ಹಾಗೂ ಶ್ರೀಗಳ ಬಗ್ಗೆ ಗೌರವವಿದೆ. ಆದರೆ, ಮಠದ ಆಸ್ತಿಪಾಸ್ತಿ, ಲೆಕ್ಕಪತ್ರಗಳ ಕುರಿತು ಭಕ್ತರು ವಿಚಾರಿಸಿದಾಗ ಶ್ರೀಗಳು ಕೋಪಗೊಳ್ಳುವುದು ಸರಿಯಲ್ಲ. ಭಕ್ತರಿಂದ ಭಕ್ತರಿಗಾಗಿಯೇ ಇರುವ ಮಠಗಳು ಪಾರದರ್ಶಕವಾಗಿ ಇರಬೇಕು’ ಎಂದರು.</p>.<p>‘ಭಕ್ತರಿಲ್ಲದೆ ಮಠಗಳು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಮಠದ ಆಗುಹೋಗುಗಳ ಬಗ್ಗೆ ಭಕ್ತರು ವಿಚಾರಿಸಿದರೆ ಸೂಕ್ತ ರೀತಿಯಲ್ಲಿ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಮುಕ್ತವಾಗಿ ಚರ್ಚಿಸಲು ಬದ್ಧರಾಗಿರಬೇಕು. ಆದರೆ, ಸಂಸ್ಥಾನ ಹಿರೇಮಠದ ಈಗಿನ ಸ್ವಾಮೀಜಿ ಹಾಗೂ ಕುಟುಂಬದ ಸದಸ್ಯರು ಸೇರಿ ಭಕ್ತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಮಠದ ವಿಚಾರದಲ್ಲಿ ಕುಟುಂಬದ ಸದಸ್ಯರ ಹಸ್ತಕ್ಷೇಪ ತರವಲ್ಲ. ಹೀಗೆ ಮುಂದುವರಿದರೆ ಪರ್ಯಾಯ ವ್ಯವಸ್ಥೆಗೆ ಮುಂದಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.</p>.<p>ಮುಖಂಡ ದಾನನಗೌಡ ತೊಂಡಿಹಾಳ ಮಾತನಾಡಿ,‘ಒಂದು ವರ್ಷದಿಂದಲೂ ಸ್ವಾಮೀಜಿ ವಿರುದ್ಧ ಭಕ್ತರು ಮಾಡಿರುವ ಆರೋಪಗಳಿಗೆ ಬದ್ಧರಾಗಿದ್ದಾರೆ. ಸ್ವಾಮೀಜಿಯವರು ಭಕ್ತರೊಂದಿಗೆ ನೇರವಾದ ಚರ್ಚೆಗೆ ಬಂದು ಉತ್ತರ ಕೊಡಬೇಕು. ಭಕ್ತರು ಹೇಳಿದಂತೆ ನಡೆದುಕೊಳ್ಳುವುದು ಮುಖ್ಯ’ ಎಂದರು.</p>.<p>‘ಮುಂದಿನ ದಿನಗಳಲ್ಲಿ ಸ್ವಾಮೀಜಿಯವರನ್ನು ಬದಲಾಯಿಸಲು ಭಕ್ತರು ಹಿಂದೇಟು ಹಾಕುವುದಿಲ್ಲ. ಶ್ರೀಮಠಕ್ಕೆ ಅದರದೇ ಆದ ಗೌರವವಿದೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದರ ಬಗ್ಗೆ ಕಾಳಜಿ ತೋರಬೇಕಾಗಿದೆ. ಅದನ್ನು ಬಿಟ್ಟು, ಮಠದ ಸ್ಮಶಾನದಲ್ಲಿ ಶವ ಸಂಸ್ಕಾರಕ್ಕೆ ಅಡ್ಡಿಪಡಿಸುವುದು, ಶಾಲೆಯಲ್ಲಿ ಪಾಲಕರಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡುವುದು ಸರಿಯಲ್ಲ. ಈ ಹಿಂದಿನ ಲೆಕ್ಕಪತ್ರಗಳ ಬಗ್ಗೆ ಬಹಿರಂಗವಾಗಿ ಮಾಹಿತಿ ನೀಡಬೇಕು’ ಎಂದು ಆಗ್ರಹಿಸಿದರು.</p>.<p>ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಸಾಕಷ್ಟು ಜನರು ಸ್ವಾಮೀಜಿ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಹರಿಹಾಯ್ದರು.</p>.<p>‘ಮಠದ ಪರಂಪರೆ ಹಾಗೂ ಆಸ್ತಿ ಉಳಿಯಬೇಕಾದರೆ ಟ್ರಸ್ಟ್ ರಚಿಸಬೇಕು. ಅಕ್ರಮಗಳನ್ನು ಪತ್ತೆ ಮಾಡಿ ತಪ್ಪು ಮಾಡಿದವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು’ ಎಂದು ಒತ್ತಾಯಿಸಿದರು.</p>.<p>ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರಿಗೆ ಸೂಕ್ತ ಕ್ರಮಕ್ಕೆ ಮನವಿ ಸಲ್ಲಿಸಿದರು.</p>.<p>ವೀರನಗೌಡ ಬನ್ನಪ್ಪಗೌಡರ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಪ್ರಕಾಶ ನಾಶಿ, ಸಿಪಿಐ ಮೌನೇಶ್ವರ ಪಾಟೀಲ, ಮುಖಂಡರಾದ ಪ್ರಕಾಶ ಬೇಲೇರಿ, ಸುರೇಶಗೌಡ ಶಿವನಗೌಡರ, ಶಂಕರಪ್ಪ ಗಾಂಜಿ, ಅಕ್ಕಮಹಾದೇವಿ ಬನ್ನಪ್ಪಗೌಡರ, ಸುರೇಶ ನಡುವಲಮನಿ, ಸುಭಾಷ ಹೊಂಬಳ, ಈರಪ್ಪ ಕುಡಗುಂಟಿ ಹಾಗೂ ಶಿವಾನಂದ ಬಣಕಾರ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>