ಕಾರಟಗಿ: ಪಟ್ಟಣದ ಯುವಕನೊಬ್ಬ ಕಾಲುವೆ ಪಕ್ಕದ ಸಾಲೋಣಿ ಜಮೀನಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ವರದಿಯಾಗಿದೆ.
20ನೇ ವಾರ್ಡ್ನ ನಿವಾಸಿ ಸಲೀಂ ದಾವಲಸಾಬ ಮೇಸ್ತ್ರಿ ಕಳ್ಳಿಮನಿ (26) ಆತ್ಮಹತ್ಯೆ ಮಾಡಿಕೊಂಡವರು. ತಾಯಿ ನೂರಜಾನ ಬೇಗಂ ದೂರು ನೀಡಿದ್ದು, ಮಗನ ಮೃತದೇಹದ ಮೇಲೆ ಗಾಯಗಳಾಗಿದ್ದು, ಸಾವಿನ ಬಗ್ಗೆ ಸಂಶಯವಿದೆ ಎಂದು ತಿಳಿಸಿದ್ದಾರೆ.