<p><strong>ಗಂಗಾವತಿ</strong>: ಉತ್ತರ ಭಾರತ ಯಾತ್ರಾಸ್ಥಳಗಳ ದರ್ಶನದ ಪ್ರವಾಸ ಕೈಗೊಂಡಿದ್ದ ನಗರದ ವಿವಿಧ ಕುಟುಂಬಗಳ 15 ಜನ ಸದಸ್ಯರ ಪ್ರವಾಸಿಗರ ತಂಡ ಉತ್ತರಾಖಂಡ ಪ್ರವಾಹದಿಂದ ಪಾರಾಗಿ ಸುರಕ್ಷಿತವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.<br /> <br /> ನಗರದ ರಾಯ್ಕರ್, ಕಾಗಲ್ಕರ್ ಎಂಬ ಎರಡು ಕುಟುಂಬಗಳ ಒಟ್ಟು 15 ಜನ ಸದಸ್ಯರಿರುವ ತಂಡ ಉತ್ತರ ಭಾರತ ಯಾತ್ರಾ ಸ್ಥಳಗಳ ವೀಕ್ಷಣೆಗಾಗಿ ಜೂ. 16ರಂದು ನಗರದಿಂದ ಹೊರಟು 18ಕ್ಕೆ ಮಥುರಾ ಸೇರಿಕೊಂಡಿದ್ದರು.<br /> <br /> ಬಳಿಕ ಉತ್ತರಾಖಂಡ ರಾಜ್ಯದ ಆಗ್ರಾ, ಹರಿದ್ವಾರ, ಋಷಿಕೇಶಗಳಿಗೆ ತೆರಳಿ ಅಲ್ಲಿಂದ ಕೇದರನಾಥ, ರುದ್ರಪ್ರಯಾಗ, ಗೋವಿಂದಾಘಾಟ್, ಮೊದಲಾದ ಪ್ರವಾಸಿ ಸ್ಥಳಗಳಿಗೆ ಹೋಗುವ ಉದ್ದೇಶ ತಂಡ ಹೊಂದಿತ್ತು ಎಂದು ತಿಳಿದು ಬಂದಿದೆ.<br /> <br /> ಉತ್ತರಾಖಂಡದ ಬಹುತೇಕ ಜಿಲ್ಲೆಗಳಲ್ಲಿ ಅಕಾಲಿಕ ಸುರಿಯುತ್ತಿರುವ ಕುಂಭದ್ರೋಣ ಮಳೆಯ ಮಾಹಿತಿ ದೊರೆಯುತ್ತಿದ್ದಂತಯೆ ಯಾತ್ರೆಗೆ ವಿದಾಯ ಹೇಳಿ ಎಲ್ಲರೂ ತವರಿಗೆ ವಾಪಾಸಾಗುತ್ತಿದ್ದಾರೆ. ಈಗಾಗಲೆ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ಕುಟುಂಬ ಸದಸ್ಯ ಅಶೋಕ ರಾಯ್ಕರ್ ತಿಳಿಸಿದ್ದಾರೆ. <br /> <br /> ಅನಿಲ್ಕುಮಾರ, ಅನಿತಾ, ಚಾಂದಿನಿ, ಹರೀಶ್, ವೈಷ್ಣವಿ, ರವಿರಾಜ, ವಾಸಂತಿಬಾಯಿ, ರೇಶ್ಮಾ, ವಸುಂಧರಾ, ನಾಗಾರ್ಜುನ, ನಿರ್ಮಲ, ಗೀತಾ, ವಿನಯ್ ಕುಮಾರ, ಲಕ್ಷ್ಮಿಬಾಯಿ ಹಾಗೂ ಕುಮಾರಿ ಸ್ವಾತಿ ತಂಡದಲ್ಲಿದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ರಾಯ್ಕರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ</strong>: ಉತ್ತರ ಭಾರತ ಯಾತ್ರಾಸ್ಥಳಗಳ ದರ್ಶನದ ಪ್ರವಾಸ ಕೈಗೊಂಡಿದ್ದ ನಗರದ ವಿವಿಧ ಕುಟುಂಬಗಳ 15 ಜನ ಸದಸ್ಯರ ಪ್ರವಾಸಿಗರ ತಂಡ ಉತ್ತರಾಖಂಡ ಪ್ರವಾಹದಿಂದ ಪಾರಾಗಿ ಸುರಕ್ಷಿತವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.<br /> <br /> ನಗರದ ರಾಯ್ಕರ್, ಕಾಗಲ್ಕರ್ ಎಂಬ ಎರಡು ಕುಟುಂಬಗಳ ಒಟ್ಟು 15 ಜನ ಸದಸ್ಯರಿರುವ ತಂಡ ಉತ್ತರ ಭಾರತ ಯಾತ್ರಾ ಸ್ಥಳಗಳ ವೀಕ್ಷಣೆಗಾಗಿ ಜೂ. 16ರಂದು ನಗರದಿಂದ ಹೊರಟು 18ಕ್ಕೆ ಮಥುರಾ ಸೇರಿಕೊಂಡಿದ್ದರು.<br /> <br /> ಬಳಿಕ ಉತ್ತರಾಖಂಡ ರಾಜ್ಯದ ಆಗ್ರಾ, ಹರಿದ್ವಾರ, ಋಷಿಕೇಶಗಳಿಗೆ ತೆರಳಿ ಅಲ್ಲಿಂದ ಕೇದರನಾಥ, ರುದ್ರಪ್ರಯಾಗ, ಗೋವಿಂದಾಘಾಟ್, ಮೊದಲಾದ ಪ್ರವಾಸಿ ಸ್ಥಳಗಳಿಗೆ ಹೋಗುವ ಉದ್ದೇಶ ತಂಡ ಹೊಂದಿತ್ತು ಎಂದು ತಿಳಿದು ಬಂದಿದೆ.<br /> <br /> ಉತ್ತರಾಖಂಡದ ಬಹುತೇಕ ಜಿಲ್ಲೆಗಳಲ್ಲಿ ಅಕಾಲಿಕ ಸುರಿಯುತ್ತಿರುವ ಕುಂಭದ್ರೋಣ ಮಳೆಯ ಮಾಹಿತಿ ದೊರೆಯುತ್ತಿದ್ದಂತಯೆ ಯಾತ್ರೆಗೆ ವಿದಾಯ ಹೇಳಿ ಎಲ್ಲರೂ ತವರಿಗೆ ವಾಪಾಸಾಗುತ್ತಿದ್ದಾರೆ. ಈಗಾಗಲೆ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ಕುಟುಂಬ ಸದಸ್ಯ ಅಶೋಕ ರಾಯ್ಕರ್ ತಿಳಿಸಿದ್ದಾರೆ. <br /> <br /> ಅನಿಲ್ಕುಮಾರ, ಅನಿತಾ, ಚಾಂದಿನಿ, ಹರೀಶ್, ವೈಷ್ಣವಿ, ರವಿರಾಜ, ವಾಸಂತಿಬಾಯಿ, ರೇಶ್ಮಾ, ವಸುಂಧರಾ, ನಾಗಾರ್ಜುನ, ನಿರ್ಮಲ, ಗೀತಾ, ವಿನಯ್ ಕುಮಾರ, ಲಕ್ಷ್ಮಿಬಾಯಿ ಹಾಗೂ ಕುಮಾರಿ ಸ್ವಾತಿ ತಂಡದಲ್ಲಿದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ರಾಯ್ಕರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>