<p>ಕುಷ್ಟಗಿ: ಬದಲಾಗಿರುವ ರಾಜ್ಯ ಸರ್ಕಾರಿ ಕಚೇರಿ ವೇಳೆಗೆ ಸರಿಯಾಗಿ ಶಾಸಕರು ಇಲ್ಲಿಯ ಸಣ್ಣ ನೀರಾವರಿ ಕಚೇರಿಗೆ ಹೋದರೂ ಅಲ್ಲಿ ಅವರನ್ನು ಸ್ವಾಗತಿಸುವುದಕ್ಕೆ ಯಾರೊಬ್ಬ ನೌಕರರೂ ಇಲ್ಲದ ಪ್ರಸಂಗ ಸೋಮವಾರ ಬೆಳಿಗ್ಗೆ ನಡೆಯಿತು.<br /> <br /> ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರ ಮುಂದೆ ಪ್ರಸ್ತಾಪಿಸಿದ ಬಯ್ಯಾಪುರ, 8.30ರ ಸಮಯದಲ್ಲಿ ಸಣ್ಣ ನೀರಾವರಿ ವಿಭಾಗ ಮತ್ತು ಉಪವಿಭಾಗದ ಕಚೇರಿಗೆ ಹೋದರೆ ಅಲ್ಲಿ `ಡಿ~ದರ್ಜೆ ನೌಕರರು ಸಹ ಇರಲಿಲ್ಲ, ಒಳಗಿನ ಎಲ್ಲ ಬಾಗಿಲುಗಳೂ ಇನ್ನೂ ಮುಚ್ಚಿದ್ದವು ಎಂದರು.<br /> <br /> ಬರಗಾಲ ಪರಿಸ್ಥಿತಿಯಲ್ಲಿ ಸರ್ಕಾರಿ ನೌಕರರು ಹಗಲು ರಾತ್ರಿಯನ್ನದೇ ಸೇವೆ ಸಲ್ಲಿಸಿದರೂ ಸಮಯ ಸಾಲದಿರುವಾಗ ಅಧಿಕಾರಿಗಳು, ನೌಕರರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಈ ಪದ್ಧತಿ ಕೊನೆಗೊಳ್ಳಬೇಕು, ಇತರೆ ಶ್ರಮಜೀವಿಗಳಿಗಿಂತ ರಾಜ್ಯ ಸರ್ಕಾರಿ ನೌಕರರು ಪ್ರತ್ಯೇಕವೇನಲ್ಲ.<br /> <br /> ಹಾಗಾಗಿ ಎಲ್ಲೆಡೆಯಂತೆ ಕಚೇರಿ ವೇಳೆಯನ್ನು ಇಲ್ಲಿಯೂ ಮುಂದುವರೆಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಂತೆ ಕಾರ್ಯದರ್ಶಿಯವರನ್ನು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕುಷ್ಟಗಿ: ಬದಲಾಗಿರುವ ರಾಜ್ಯ ಸರ್ಕಾರಿ ಕಚೇರಿ ವೇಳೆಗೆ ಸರಿಯಾಗಿ ಶಾಸಕರು ಇಲ್ಲಿಯ ಸಣ್ಣ ನೀರಾವರಿ ಕಚೇರಿಗೆ ಹೋದರೂ ಅಲ್ಲಿ ಅವರನ್ನು ಸ್ವಾಗತಿಸುವುದಕ್ಕೆ ಯಾರೊಬ್ಬ ನೌಕರರೂ ಇಲ್ಲದ ಪ್ರಸಂಗ ಸೋಮವಾರ ಬೆಳಿಗ್ಗೆ ನಡೆಯಿತು.<br /> <br /> ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರ ಮುಂದೆ ಪ್ರಸ್ತಾಪಿಸಿದ ಬಯ್ಯಾಪುರ, 8.30ರ ಸಮಯದಲ್ಲಿ ಸಣ್ಣ ನೀರಾವರಿ ವಿಭಾಗ ಮತ್ತು ಉಪವಿಭಾಗದ ಕಚೇರಿಗೆ ಹೋದರೆ ಅಲ್ಲಿ `ಡಿ~ದರ್ಜೆ ನೌಕರರು ಸಹ ಇರಲಿಲ್ಲ, ಒಳಗಿನ ಎಲ್ಲ ಬಾಗಿಲುಗಳೂ ಇನ್ನೂ ಮುಚ್ಚಿದ್ದವು ಎಂದರು.<br /> <br /> ಬರಗಾಲ ಪರಿಸ್ಥಿತಿಯಲ್ಲಿ ಸರ್ಕಾರಿ ನೌಕರರು ಹಗಲು ರಾತ್ರಿಯನ್ನದೇ ಸೇವೆ ಸಲ್ಲಿಸಿದರೂ ಸಮಯ ಸಾಲದಿರುವಾಗ ಅಧಿಕಾರಿಗಳು, ನೌಕರರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಈ ಪದ್ಧತಿ ಕೊನೆಗೊಳ್ಳಬೇಕು, ಇತರೆ ಶ್ರಮಜೀವಿಗಳಿಗಿಂತ ರಾಜ್ಯ ಸರ್ಕಾರಿ ನೌಕರರು ಪ್ರತ್ಯೇಕವೇನಲ್ಲ.<br /> <br /> ಹಾಗಾಗಿ ಎಲ್ಲೆಡೆಯಂತೆ ಕಚೇರಿ ವೇಳೆಯನ್ನು ಇಲ್ಲಿಯೂ ಮುಂದುವರೆಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಂತೆ ಕಾರ್ಯದರ್ಶಿಯವರನ್ನು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>