ಸಾಗರ: ನಗರದ ಸೊರಬ ರಸ್ತೆಯ ಬೈಪಾಸ್ ವೃತ್ತದ ಬಳಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ಶುಕ್ರವಾರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿಯ ಶ್ರೀಧರ ನಗರ ಬಡಾವಣೆಯ ಅಬ್ದುಲ್ ಅಜೀಮ್ ಎಂಬಾತ ಬಂಧಿತ ಆರೋಪಿ. ಈತನಿಂದ 1 ಕೆ.ಜಿ 160 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಎಎಸ್ಪಿ ಯತೀಶ್ ಎನ್. ಅವರ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯ ಸಾಗರ್ ಕರ್, ಶ್ರೀಧರ, ಕಾಳಾನಾಯ್ಕ, ಸಂತೋಷ್ ನಾಯ್ಕ, ವಿಶ್ವನಾಥ್, ಮಲ್ಲೇಶ್, ಗುರುಬಸವರಾಜ್, ಮಲ್ಲನಗೌಡ ಕಾರ್ಯಾಚರಣೆ ನಡೆಸಿದರು.