ಅರ್ಕೇಶ್ವರ ನಗರದ ನಿವಾಸಿ ಎನ್.ಪುಟ್ಟಸ್ವಾಮಿ ಪರಿಹಾರ ಪಡೆದ ಗಾಯಾಳು. 2016 ಜೂ.6ರಂದು ಕಾರು ಡಿಕ್ಕಿಯಾಗಿ ಅವರ ಬಲಗಾಲಿನ ಮಂಡಿಚಿಪ್ಪು ಸ್ಥಾನಪಲ್ಲಟ, ಎಡಗಾಲಿನ ತೊಡೆ ಮುರಿದಿತ್ತು. ಚಿಕಿತ್ಸೆಯ ನಂತರ ತನಗಾದ ನಷ್ಟಕ್ಕೆ ಪರಿಹಾರ ನೀಡುವಂತೆ ಐಸಿಐಸಿಐ ಲ್ಯಾಂಬರ್ಡ್ ವಿಮಾ ಕಂಪನಿ ವಿರುದ್ಧ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಯಲಯದಲ್ಲಿ ಪ್ರಕರಣ ದಾಖಲು ಮಾಡಿದ್ದರು.