‘ನಗರದ ಹೃದಯ ಭಾಗದಲ್ಲಿ ಸುಂದರ ಹಸಿರು ವಾತಾವರಣ ಸೃಷ್ಟಿ ಸಿರುವ ತೋಟಗಾರಿಕೆ ಇಲಾಖೆಯ ಒಂದಿಂಚೂ ಭೂಮಿಯನ್ನು ಅನ್ಯ ಉದ್ದೇಶಕ್ಕೆ ನೀಡಬಾರದು. ತೋಟ ಗಾರಿಕೆ ಆಸ್ತಿ ಉಳಿಸಿಕೊಳ್ಳಲು ಜಿಲ್ಲೆ ಯಾದ್ಯಂತ ಹೋರಾಟ ರೂಪಿಸ ಲಾಗಿದ್ದು ಜಿಲ್ಲೆಯ ಎಲ್ಲಾ ಸಂಘಟನೆಗಳು ಕೈಜೋಡಿಸಬೇಕು. ಯಾವುದೇ ಪರ್ಯಾಯ ಭೂಮಿಯಲ್ಲಿ ಕೋರ್ಟ್ ನಿರ್ಮಾಣಕ್ಕೆ ಭೂಮಿ ಕೊಡಲಿ’ ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದರು. ಜೆಡಿಎಸ್ ಮುಖಂಡ ಜಿ.ಬಿ.ಶಿವಕುಮಾರ್, ರೈತ ನಾಯಕಿ ಸುನಂದಾ ಜಯರಾಂ ಇದ್ದರು.