ಕೆಆರ್ಎಸ್ ಸರ್ವೆ ನಂ. 86ರಲ್ಲಿರುವ ಏಳೆಂಟು ಮನೆಗಳನ್ನು ಆರೋಪಿಗಳು ಕೆಡವಿದ್ದರು. ಸದರಿ ಜಾಗ ತಮ್ಮದೆಂದು ಹೇಳಿ ಗುಡಿಸಲುಗಳನ್ನು ಜೆಸಿಬಿ ಯಂತ್ರ ಬಳಸಿ ಏಕಾಏಕಿ ಉರುಳಿಸಿದ್ದರು. ಗುಡಿಸಲು ಕೆಡವಿದ ಸಂಬಂಧ ಭೋವಿ ಜನಾಂಗದವರು ಜಿಲ್ಲಾಧಿಕಾರಿ ಮತ್ತು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ಸಂಬಂಧ ಪಾಂಡವಪುರ ಉಪ ವಿಭಾಗಾಧಿಕಾರಿ ಶೈಲಜಾ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.