ತಿ.ನರಸೀಪುರ: ವಿವಿಧೆಡೆ ಬೈಕ್ ಕಳವು ಮಾಡಿದ್ದ ಮೂವರು ಕಳ್ಳರನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿಯ ನಿಂಗ ಅಲಿಯಾಸ್ ನಿಂಗರಾಜು, ಶಿವು ಅಲಿಯಾಸ್ ಶಿವಕುಮಾರ್, ಬನ್ನೂರು ಹೋಬಳಿಯ ಅರವಟ್ಟಿಗೆ ಕೊಪ್ಪಲು ಗ್ರಾಮದ ಎಸ್.ರಾಮು ಬಂಧಿತ ಆರೋಪಿಗಳು.
ಬಂಧಿತರಿಂದ ಬೆಂಗಳೂರು ನಗರ, ಕೆ.ಎಂ.ದೊಡ್ಡಿ, ಕೊಳ್ಳೇಗಾಲ ತಾಲ್ಲೂಕಿನ ಪಾಳ್ಯ, ತಿ.ನರಸೀಪುರ ಠಾಣಾ ವ್ಯಾಪ್ತಿಯ ಮುತ್ತತ್ತಿ ಗ್ರಾಮಗಳಲ್ಲಿ ಕಳವು ಮಾಡಿದ್ದ ₹ 3.5 ಲಕ್ಷ ಮೌಲ್ಯದ 9 ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ತಿ.ನರಸೀಪುರ ಪೊಲೀಸರು ತಿಳಿಸಿದ್ದಾರೆ.