ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡಿದ್ದ ಬೆಳಕವಾಡಿ ಪೊಲೀಸರು ಸಂಶಯಗೊಂಡು ಸುರೇಶನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಈ ಹಿಂದೆ ತನ್ನ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲು ಹತ್ತಲು ಜಯಮ್ಮನೇ ಕಾರಣ ಎಂಬ ದ್ವೇಷ ಮತ್ತು ಹಣದ ವಿಚಾರದಲ್ಲಿದ್ದ ವೈಮನಸ್ಸಿನಿಂದ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.