ಮಂಡ್ಯ: ರಾಜ್ಯದಲ್ಲಿ ಭಾರತ್ ಜೋಡೊಪಾದಯಾತ್ರೆ 6ನೇ ದಿನಶುಕ್ರವಾರವೂ ಜನಸಾಗರ ಹರಿದುಬಂತು. ನಾಗಮಂಗಲ ತಾಲ್ಲೂಕಿನ ಕೆ.ಮಲ್ಲೇನಹಳ್ಳಿಯಿಂದ ಬೆಳಿಗ್ಗೆ 6.30ಕ್ಕೆ ಪಾದಯಾತ್ರೆ ಆರಂಭಗೊಂಡಿತು. ನಾಗಮಂಗಲ ಪಟ್ಟಣ ತಲುಪಿದಾಗ ಜನರ ಜೈಕಾರ ಮುಗಿಲುಮುಟ್ಟಿತು. ‘ಗೌಡರ ಗೌಡ ರಾಹುಲ್ ಗೌಡ’ ಘೋಷಣೆ ಕೇಳಿಬಂತು.
ಅಂಗವಿಕಲರು, ದಲಿತ ಸಂಘಟನೆಗಳ ಮುಖಂಡರು ಯಾತ್ರೆಯಲ್ಲಿ ಜೊತೆಯಾದರು. ತೊಳಲಿ ಗ್ರಾಮದ ಬಳಿ ತೆಂಗಿನ ತೋಟವೊಂದಕ್ಕೆ ತೆರಳಿದ ರಾಹುಲ್ ಗಾಂಧಿ ಎಳನೀರು ಕುಡಿದು ವಿಶ್ರಾಂತಿ ಪಡೆದರು. ರಾತ್ರಿ ಆದಿಚುಂಚನಗಿರಿಯಲ್ಲಿ ವಾಸ್ತವ್ಯ ಹೂಡಿದರು.