<p><strong>ಮಂಡ್ಯ:</strong> ‘ದ್ವೇಷ, ಅಸೂಯೆ, ಜಾತಿ, ಧರ್ಮ, ಅಸಮಾನತೆಯೇ ತುಂಬಿರುವ ಬಿಜೆಪಿಯ ಭಾರತವನ್ನು ನಾವು ತಿರಸ್ಕರಿಸಬೇಕು, ಸರ್ವ ಸಮಾನತೆಯ ಭಾರತ ನಮ್ಮದಾಗಬೇಕು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಪಾದಿಸಿದರು.</p>.<p>ಭಾರತ್ ಜೋಡೊ ಯಾತ್ರೆ ಅಂಗವಾಗಿ ಬೆಳ್ಳೂರಿನ ಬಸ್ನಿಲ್ದಾಣದ ವೃತ್ತದಲ್ಲಿ ಶುಕ್ರವಾರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯು ಬಡವರಿಗಾಗಿ ಒಂದು, ಶ್ರೀಮಂತರಿಗಾಗಿ ಇನ್ನೊಂದು ಭಾರತ ವನ್ನು ಸೃಷ್ಟಿಸಿದೆ’ ಎಂದು ಟೀಕಿಸಿದರು.</p>.<p>‘ಕರ್ನಾಟಕದಲ್ಲಿ ಮೂರು ಕರಾಳ ಕೃಷಿ ಕಾನೂನುಗಳು ಇನ್ನೂ ಇವೆ. ಅವು ಕೃಷಿಕರು, ಬಡವರು, ಯುವಜನರು, ಕಾರ್ಮಿಕರನ್ನು ನಾಶಮಾಡುವ ಅಸ್ತ್ರಗಳು. ಜಿಎಸ್ಟಿ, ನೋಟ್ ಬ್ಯಾನ್ ಮೂಲಕ ಬಿಜೆಪಿ ಬಡವರ ಹಣ ಲೂಟಿ ಮಾಡುತ್ತಿದೆ’ ಎಂದರು.</p>.<p>‘ವಿಶ್ವದ 2ನೇ ಶ್ರೀಮಂತ ಭಾರತೀಯ ಪ್ರಧಾನಿಗೆ ಹತ್ತಿರವಿದ್ದಾರೆ. ಕೆಲ ವರ್ಷಗಳ ಹಿಂದೆ ಪಟ್ಟಿಯಲ್ಲೇ ಇರದಿದ್ದ ಅವರು, ರಾಕೆಟ್ ವೇಗದಲ್ಲಿ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬಡ ಜನರ ಹಣ ಲೂಟಿ ಮಾಡುತ್ತಾ<br />ಶ್ರೀಮಂತನಾಗಿದ್ದಾರೆ’ ಎಂದರು.</p>.<p>‘ದೇಶದಲ್ಲಿ ಶ್ರೀಮಂತರಿಗೆ ಕನಸುಗಳಿವೆ, ಅವರಿಗೆ ವಿಮಾನ ನಿಲ್ದಾಣ, ಬಂದರು, ರಸ್ತೆ, ದೊಡ್ಡ ಸಂಸ್ಥೆಗಳು ಬೇಕಾಗಿವೆ. ಅವರು ಕೃಷಿ ವ್ಯವಸ್ಥೆ ನಿಯಂತ್ರಿಸುತ್ತಾರೆ, ನಿತ್ಯ ಶ್ರೀಮಂತರಾಗುತ್ತಿದ್ದಾರೆ. ಬಡವರ ಮಕ್ಕಳು ನಿರುದ್ಯೋಗಿಗಳಾಗುತ್ತಿದ್ದಾರೆ’ ಎಂದರು.</p>.<p><a href="https://www.prajavani.net/district/mandya/bharat-jodo-yatra-in-mandya-people-calls-rahul-gandhi-gowdara-gowda-978368.html" itemprop="url">ಮಂಡ್ಯ: 'ಗೌಡರ ಗೌಡ ರಾಹುಲ್ ಗೌಡ'! - ಜನರ ಜೈಕಾರ </a></p>.<p><strong>ರಾಗಿಗೆ ಎಂಎಸ್ಪಿ ಬೇಕು:</strong> ‘ಜನರ ಜೊತೆ ನಡೆಯುವಾಗ ಹಲವು ಸಮಸ್ಯೆಗಳು ಗಮನಕ್ಕೆ ಬಂದಿವೆ. ರಾಗಿ ಬೆಳೆಗೆ ಬೆಂಬಲ ಬೆಲೆ (ಎಂಎಸ್ಪಿ) ಬೇಕು. ಕಳೆದ ವರ್ಷ ಕ್ವಿಂಟಲ್ ರಾಗಿ ದರ ₹ 3,377 ಇತ್ತು, ಈ ವರ್ಷ ₹ 2 ಸಾವಿರಕ್ಕೆ ಕುಸಿದಿದೆ. ಎಕರೆಗೆ ಕೇವಲ 5 ಕ್ವಿಂಟಲ್ ರಾಗಿ ಖರೀದಿಸುವ ಮಿತಿ ಏಕೆ’ ಎಂದು ರಾಹುಲ್ ಪ್ರಶ್ನಿಸಿದರು.</p>.<p>‘ಕೃಷಿ ಉತ್ಪನ್ನಗಳಿಗೂ ಜಿಎಸ್ಟಿ ಹಾಕುವುದನ್ನು ರೈತರು ಪ್ರಶ್ನಿಸುತ್ತಿದ್ದಾರೆ. ರಸಗೊಬ್ಬರದ ಮೇಲೆ ಶೇ 5, ಟ್ರ್ಯಾಕ್ಟರ್ ಖರೀದಿಗೆ ಶೇ 12, ಕೀಟನಾಶಕಗಳಿಗೆ ಶೇ 18ರಷ್ಟು ಜಿಎಸ್ಟಿ ಇದೆ. ಅನ್ನನೀಡುವ ರೈತರು ತೆರಿಗೆ ಏಕೆ ಕಟ್ಟಬೇಕು’ ಎಂದು ಪ್ರಶ್ನಿಸಿದರು.</p>.<p>ಕವಿತಾ ಲಂಕೇಶ್ ಭಾಗಿ: ನಾಗಮಂಗಲ ತಾಲ್ಲೂಕು ಅಂಚೆಭೂವನಹಳ್ಳಿ ಬಳಿ ರಾಹುಲ್ ಅವರ ಜೊತೆಗೆ ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಮತ್ತು ಸಹೋದರಿ, ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಕೆಲಹೊತ್ತು ಹೆಜ್ಜೆ ಹಾಕಿದರು.</p>.<p><strong>‘ಬಸವಣ್ಣನ ಸಂದೇಶ ಮುಚ್ಚಿಡುವ ಪ್ರಯತ್ನ’</strong></p>.<p>‘ಶಾಂತಿ ಕರ್ನಾಟಕದ ಡಿಎನ್ಎ. ಯಾರನ್ನೂ ದ್ವೇಷಿಸಬೇಡ, ಯಾರನ್ನೂ ಹಿಂಸಿಸಬೇಡ ಎಂದು ಬಸವಣ್ಣ ಹೇಳಿದ್ದಾರೆ. ಅವರು ತೋರಿದ ಹಾದಿಯಲ್ಲೇ ನಾನೂ ನಡೆಯುತ್ತಿದ್ದೇನೆ. ಕರ್ನಾಟಕ ಸರ್ಕಾರ ಬಸವಣ್ಣನ ಸಂದೇಶವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ’ ಎಂದು ರಾಹುಲ್ ಗಾಂಧಿ ಆರೋಪಿಸಿದರು.</p>.<p>‘ಪಠ್ಯಪರಿಷ್ಕರಣೆ ನೆಪದಲ್ಲಿ ಬಸವಣ್ಣನ ಸಂದೇಶ ಮುಚ್ಚಿಡಲು ಪ್ರಯತ್ನಿಸಲಾಗುತ್ತಿದೆ. ದೇಶದ ಸಂಸ್ಕೃತಿ, ಇತಿಹಾಸ ಮುಚ್ಚಿಡಲು ಸಾಧ್ಯವೇ? ಕರ್ನಾಟಕದಲ್ಲಿ ಜನಸಾಗರವನ್ನು ಕಂಡಿದ್ದೇನೆ. ಹರಿಯುತ್ತಿರುವ ಜನಸಾಗರದಲ್ಲಿ ಜಾತಿ, ಧರ್ಮಗಳೆಂಬ ಭೇದವಿಲ್ಲ’ ಎಂದರು.</p>.<p><strong>ಫ್ಲೆಕ್ಸ್ನಲ್ಲಿ ಸಾವರ್ಕರ್ ಚಿತ್ರ: ದೂರು ದಾಖಲು</strong></p>.<p><strong>ಮಂಡ್ಯ: </strong>‘ಭಾರತ್ ಜೋಡೊ ಯಾತ್ರೆ ವೇಳೆ ಫ್ಲೆಕ್ಸ್ನಲ್ಲಿ ಸಾವರ್ಕರ್ ಚಿತ್ರ ಕಂಡುಬಂದಿದ್ದು, ಅದು ಬಿಜೆಪಿಯ ಕಿಡಿಗೇಡಿಗಳ ಕೃತ್ಯ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್ ಶುಕ್ರವಾರ ಪೊಲೀಸರಿಗೆ ದೂರುನೀಡಿದ್ದಾರೆ.</p>.<p><strong>‘ಜನರ ಆಶಯ ಮರೆತ ಬಿಜೆಪಿ’</strong></p>.<p><strong>ಕೊಪ್ಪಳ:</strong> ‘ಬಿಜೆಪಿಯನ್ನು ಬೆಳೆಸಿದ ಆರ್ಎಸ್ಎಸ್ ಮತ್ತು ಹಿಂದೂಪರ ಸಂಘಟನೆಗಳೇ ಈಗ ಆ ಪಕ್ಷವನ್ನು ವಿರೋಧಿಸುತ್ತಿವೆ’ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.</p>.<p>‘ಜನರ ಭಾವನೆ, ಆಶೋತ್ತರ ಮರೆತು ವ್ಯವಹಾರ ಮಾಡಲು ಅಧಿಕಾರಕ್ಕೆ ಬಂದ ಬಿಜೆಪಿಯವರು ಇಷ್ಟು ವರ್ಷ ಆಡಳಿತದಲ್ಲಿ ವ್ಯವಹಾರವನ್ನೇ ಮಾಡಿದ್ದಾರೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.</p>.<p>‘ರಾಹುಲ್ ಅವರನ್ನು ಪಪ್ಪು ಎಂದು ಟೀಕಿಸು ವವರಿಗೆ ಭವಿಷ್ಯದ ರಾಜಕಾರಣದ ಅರಿವಿಲ್ಲ. ಭಾರತ್ ಜೋಡೊ ಯಾತ್ರೆ ಮೂಲಕ ಕಾಂಗ್ರೆಸ್ ದೇಶವನ್ನು ಒಂದು ಮಾಡುತ್ತಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ‘ದ್ವೇಷ, ಅಸೂಯೆ, ಜಾತಿ, ಧರ್ಮ, ಅಸಮಾನತೆಯೇ ತುಂಬಿರುವ ಬಿಜೆಪಿಯ ಭಾರತವನ್ನು ನಾವು ತಿರಸ್ಕರಿಸಬೇಕು, ಸರ್ವ ಸಮಾನತೆಯ ಭಾರತ ನಮ್ಮದಾಗಬೇಕು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಪಾದಿಸಿದರು.</p>.<p>ಭಾರತ್ ಜೋಡೊ ಯಾತ್ರೆ ಅಂಗವಾಗಿ ಬೆಳ್ಳೂರಿನ ಬಸ್ನಿಲ್ದಾಣದ ವೃತ್ತದಲ್ಲಿ ಶುಕ್ರವಾರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯು ಬಡವರಿಗಾಗಿ ಒಂದು, ಶ್ರೀಮಂತರಿಗಾಗಿ ಇನ್ನೊಂದು ಭಾರತ ವನ್ನು ಸೃಷ್ಟಿಸಿದೆ’ ಎಂದು ಟೀಕಿಸಿದರು.</p>.<p>‘ಕರ್ನಾಟಕದಲ್ಲಿ ಮೂರು ಕರಾಳ ಕೃಷಿ ಕಾನೂನುಗಳು ಇನ್ನೂ ಇವೆ. ಅವು ಕೃಷಿಕರು, ಬಡವರು, ಯುವಜನರು, ಕಾರ್ಮಿಕರನ್ನು ನಾಶಮಾಡುವ ಅಸ್ತ್ರಗಳು. ಜಿಎಸ್ಟಿ, ನೋಟ್ ಬ್ಯಾನ್ ಮೂಲಕ ಬಿಜೆಪಿ ಬಡವರ ಹಣ ಲೂಟಿ ಮಾಡುತ್ತಿದೆ’ ಎಂದರು.</p>.<p>‘ವಿಶ್ವದ 2ನೇ ಶ್ರೀಮಂತ ಭಾರತೀಯ ಪ್ರಧಾನಿಗೆ ಹತ್ತಿರವಿದ್ದಾರೆ. ಕೆಲ ವರ್ಷಗಳ ಹಿಂದೆ ಪಟ್ಟಿಯಲ್ಲೇ ಇರದಿದ್ದ ಅವರು, ರಾಕೆಟ್ ವೇಗದಲ್ಲಿ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬಡ ಜನರ ಹಣ ಲೂಟಿ ಮಾಡುತ್ತಾ<br />ಶ್ರೀಮಂತನಾಗಿದ್ದಾರೆ’ ಎಂದರು.</p>.<p>‘ದೇಶದಲ್ಲಿ ಶ್ರೀಮಂತರಿಗೆ ಕನಸುಗಳಿವೆ, ಅವರಿಗೆ ವಿಮಾನ ನಿಲ್ದಾಣ, ಬಂದರು, ರಸ್ತೆ, ದೊಡ್ಡ ಸಂಸ್ಥೆಗಳು ಬೇಕಾಗಿವೆ. ಅವರು ಕೃಷಿ ವ್ಯವಸ್ಥೆ ನಿಯಂತ್ರಿಸುತ್ತಾರೆ, ನಿತ್ಯ ಶ್ರೀಮಂತರಾಗುತ್ತಿದ್ದಾರೆ. ಬಡವರ ಮಕ್ಕಳು ನಿರುದ್ಯೋಗಿಗಳಾಗುತ್ತಿದ್ದಾರೆ’ ಎಂದರು.</p>.<p><a href="https://www.prajavani.net/district/mandya/bharat-jodo-yatra-in-mandya-people-calls-rahul-gandhi-gowdara-gowda-978368.html" itemprop="url">ಮಂಡ್ಯ: 'ಗೌಡರ ಗೌಡ ರಾಹುಲ್ ಗೌಡ'! - ಜನರ ಜೈಕಾರ </a></p>.<p><strong>ರಾಗಿಗೆ ಎಂಎಸ್ಪಿ ಬೇಕು:</strong> ‘ಜನರ ಜೊತೆ ನಡೆಯುವಾಗ ಹಲವು ಸಮಸ್ಯೆಗಳು ಗಮನಕ್ಕೆ ಬಂದಿವೆ. ರಾಗಿ ಬೆಳೆಗೆ ಬೆಂಬಲ ಬೆಲೆ (ಎಂಎಸ್ಪಿ) ಬೇಕು. ಕಳೆದ ವರ್ಷ ಕ್ವಿಂಟಲ್ ರಾಗಿ ದರ ₹ 3,377 ಇತ್ತು, ಈ ವರ್ಷ ₹ 2 ಸಾವಿರಕ್ಕೆ ಕುಸಿದಿದೆ. ಎಕರೆಗೆ ಕೇವಲ 5 ಕ್ವಿಂಟಲ್ ರಾಗಿ ಖರೀದಿಸುವ ಮಿತಿ ಏಕೆ’ ಎಂದು ರಾಹುಲ್ ಪ್ರಶ್ನಿಸಿದರು.</p>.<p>‘ಕೃಷಿ ಉತ್ಪನ್ನಗಳಿಗೂ ಜಿಎಸ್ಟಿ ಹಾಕುವುದನ್ನು ರೈತರು ಪ್ರಶ್ನಿಸುತ್ತಿದ್ದಾರೆ. ರಸಗೊಬ್ಬರದ ಮೇಲೆ ಶೇ 5, ಟ್ರ್ಯಾಕ್ಟರ್ ಖರೀದಿಗೆ ಶೇ 12, ಕೀಟನಾಶಕಗಳಿಗೆ ಶೇ 18ರಷ್ಟು ಜಿಎಸ್ಟಿ ಇದೆ. ಅನ್ನನೀಡುವ ರೈತರು ತೆರಿಗೆ ಏಕೆ ಕಟ್ಟಬೇಕು’ ಎಂದು ಪ್ರಶ್ನಿಸಿದರು.</p>.<p>ಕವಿತಾ ಲಂಕೇಶ್ ಭಾಗಿ: ನಾಗಮಂಗಲ ತಾಲ್ಲೂಕು ಅಂಚೆಭೂವನಹಳ್ಳಿ ಬಳಿ ರಾಹುಲ್ ಅವರ ಜೊತೆಗೆ ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಮತ್ತು ಸಹೋದರಿ, ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಕೆಲಹೊತ್ತು ಹೆಜ್ಜೆ ಹಾಕಿದರು.</p>.<p><strong>‘ಬಸವಣ್ಣನ ಸಂದೇಶ ಮುಚ್ಚಿಡುವ ಪ್ರಯತ್ನ’</strong></p>.<p>‘ಶಾಂತಿ ಕರ್ನಾಟಕದ ಡಿಎನ್ಎ. ಯಾರನ್ನೂ ದ್ವೇಷಿಸಬೇಡ, ಯಾರನ್ನೂ ಹಿಂಸಿಸಬೇಡ ಎಂದು ಬಸವಣ್ಣ ಹೇಳಿದ್ದಾರೆ. ಅವರು ತೋರಿದ ಹಾದಿಯಲ್ಲೇ ನಾನೂ ನಡೆಯುತ್ತಿದ್ದೇನೆ. ಕರ್ನಾಟಕ ಸರ್ಕಾರ ಬಸವಣ್ಣನ ಸಂದೇಶವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ’ ಎಂದು ರಾಹುಲ್ ಗಾಂಧಿ ಆರೋಪಿಸಿದರು.</p>.<p>‘ಪಠ್ಯಪರಿಷ್ಕರಣೆ ನೆಪದಲ್ಲಿ ಬಸವಣ್ಣನ ಸಂದೇಶ ಮುಚ್ಚಿಡಲು ಪ್ರಯತ್ನಿಸಲಾಗುತ್ತಿದೆ. ದೇಶದ ಸಂಸ್ಕೃತಿ, ಇತಿಹಾಸ ಮುಚ್ಚಿಡಲು ಸಾಧ್ಯವೇ? ಕರ್ನಾಟಕದಲ್ಲಿ ಜನಸಾಗರವನ್ನು ಕಂಡಿದ್ದೇನೆ. ಹರಿಯುತ್ತಿರುವ ಜನಸಾಗರದಲ್ಲಿ ಜಾತಿ, ಧರ್ಮಗಳೆಂಬ ಭೇದವಿಲ್ಲ’ ಎಂದರು.</p>.<p><strong>ಫ್ಲೆಕ್ಸ್ನಲ್ಲಿ ಸಾವರ್ಕರ್ ಚಿತ್ರ: ದೂರು ದಾಖಲು</strong></p>.<p><strong>ಮಂಡ್ಯ: </strong>‘ಭಾರತ್ ಜೋಡೊ ಯಾತ್ರೆ ವೇಳೆ ಫ್ಲೆಕ್ಸ್ನಲ್ಲಿ ಸಾವರ್ಕರ್ ಚಿತ್ರ ಕಂಡುಬಂದಿದ್ದು, ಅದು ಬಿಜೆಪಿಯ ಕಿಡಿಗೇಡಿಗಳ ಕೃತ್ಯ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್ ಶುಕ್ರವಾರ ಪೊಲೀಸರಿಗೆ ದೂರುನೀಡಿದ್ದಾರೆ.</p>.<p><strong>‘ಜನರ ಆಶಯ ಮರೆತ ಬಿಜೆಪಿ’</strong></p>.<p><strong>ಕೊಪ್ಪಳ:</strong> ‘ಬಿಜೆಪಿಯನ್ನು ಬೆಳೆಸಿದ ಆರ್ಎಸ್ಎಸ್ ಮತ್ತು ಹಿಂದೂಪರ ಸಂಘಟನೆಗಳೇ ಈಗ ಆ ಪಕ್ಷವನ್ನು ವಿರೋಧಿಸುತ್ತಿವೆ’ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.</p>.<p>‘ಜನರ ಭಾವನೆ, ಆಶೋತ್ತರ ಮರೆತು ವ್ಯವಹಾರ ಮಾಡಲು ಅಧಿಕಾರಕ್ಕೆ ಬಂದ ಬಿಜೆಪಿಯವರು ಇಷ್ಟು ವರ್ಷ ಆಡಳಿತದಲ್ಲಿ ವ್ಯವಹಾರವನ್ನೇ ಮಾಡಿದ್ದಾರೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.</p>.<p>‘ರಾಹುಲ್ ಅವರನ್ನು ಪಪ್ಪು ಎಂದು ಟೀಕಿಸು ವವರಿಗೆ ಭವಿಷ್ಯದ ರಾಜಕಾರಣದ ಅರಿವಿಲ್ಲ. ಭಾರತ್ ಜೋಡೊ ಯಾತ್ರೆ ಮೂಲಕ ಕಾಂಗ್ರೆಸ್ ದೇಶವನ್ನು ಒಂದು ಮಾಡುತ್ತಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>