ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಶ್ರೇಷ್ಠ ಕೆಲಸ ಮಾಡಿದ್ದಾರೆ. ಪ್ರತ್ಯೇಕ ಕೃಷಿ ಬಜೆಟ್, ರೈತರ ಸಾಲ ಮನ್ನಾ ಮಾಡಿದ್ದಾರೆ, ಎಲ್ಲಾ ವರ್ಗದ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡರ ರೀತಿಯಲ್ಲಿ ಬೊಬ್ಬೊ ಒಡೆಯುವ ಕೆಲಸ ಮಾಡಿಲ್ಲ, ಒಂದು ವರ್ಗಕ್ಕೆ ಸೀಮಿತವಾದ ಯೋಜನೆ ಜಾರಿಗೊಳಿಸಿಲ್ಲ, ಕೇಂದ್ರದ ಯೋಜನೆಗೆ ತಮ್ಮ ಫೋಟೊ ಹಾಕಿಕೊಂಡಿಲ್ಲ’ ಎಂದು ಆರೋಪಿಸಿದರು.