<p><strong>ಮಂಡ್ಯ:</strong> ರಾಜ್ಯ ಸರ್ಕಾರ ಕೃಷ್ಣರಾಜ ಸಾಗರದ ಬಳಿ ಅನಗತ್ಯ ದುಂದುವೆಚ್ಚದ ‘ಕಾವೇರಿ ಆರತಿ’ ನಿಲ್ಲಿಸಿ, ಜಿಲ್ಲೆಯ ಕೆರೆ ಕಟ್ಟೆಗಳನ್ನು ತುಂಬಿಸಿ. ನಾಲೆಯ ಕಡೆ ಬಯಲಿಗೆ ನೀರು ಹರಿಸುವಂತೆ ಕನ್ನಡಪರ ಸಂಘಟನೆಗಳ ಮುಖಂಡರು ನಗರದಲ್ಲಿ ಸೋಮವಾರ ಮೇಣದ ದೀಪ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.</p>.<p>ಜಿಲ್ಲೆಯ ಜನ ಕಾವೇರಿ ಮಾತೆಯನ್ನು ನಿತ್ಯ ಸ್ಮರಿಸುತ್ತಾರೆ. ರಾಜ್ಯ ಸರ್ಕಾರ ಜನರ ಆಶಯ ಮತ್ತು ಅಗತ್ಯಗಳನ್ನು ಧಿಕ್ಕರಿಸಿ, ಉತ್ತರ ಭಾರತದ ಗಂಗಾರತಿ ಪದ್ಧತಿಯನ್ನು ತರಲು ಹೊರಟಿದೆ. ಇಂಥ ಅವೈಜ್ಞಾನಿಕ ಮತ್ತು ಪರಿಸರ ವಿರೋಧಿ ಯೋಜನೆಗಳಿಂದ ‘ಕೃಷ್ಣರಾಜ ಸಾಗರ’ ಖಾಸಗಿಯವರ ಒಡೆತನಕ್ಕೆ ಹೋಗಲಿದೆ. ಈ ಎರಡು ಯೋಜನೆಗಳ ಕ್ರಿಯಾಯೋಜನೆಯನ್ನು ಜನರ ಮುಂದಿಡದೆ ಜಿಲ್ಲೆಯ ರೈತರನ್ನು ಕತ್ತಲಲ್ಲಿಡಲಾಗಿದೆ ಎಂದು ದೂರಿದರು.</p>.<p>ಸಚಿವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ರೈತರು ಒಕ್ಕೊರಲಿನಿಂದ ಕಾವೇರಿ ಆರತಿಗೆ ತಮ್ಮ ಪ್ರತಿರೋಧ ತೋರಿದ್ದರು. ಈ ಕುರಿತು ರೈತರ ಅಹವಾಲನ್ನು ರಾಜ್ಯ ಸರ್ಕಾರದ ಗಮನಕ್ಕೆ ತರುವುದಾಗಿ ಸಚಿವರು ಭರವಸೆ ನೀಡಿದ್ದರು. ಆದರೂ ಕಾವೇರಿ ಆರತಿಗೆ ಸಂಬಂಧಿಸಿದ ಕಾಮಗಾರಿಯನ್ನು ಆರಂಭಿಸಿರುವುದು ರೈತರಿಗೆ ಬಗೆದ ದ್ರೋಹ ಎಂದು ಕಿಡಿಕಾರಿದರು.</p>.<p>‘ಮೇಣದ ದೀಪದ ಪ್ರದರ್ಶನದ ಮೂಲಕ ಸಾಂಕೇತಿಕ ಎಚ್ಚರಿಕೆ ನೀಡಲಾಗಿದೆ. ಅನಿವಾರ್ಯ ಎನಿಸಿದರೆ ವರುಣಾ ಚಳವಳಿ ಮಾದರಿಯಲ್ಲಿ ಕಾವೇರಿ ಆರತಿ ಕಾಮಗಾರಿ ತಡೆಯಲು ಸಹ ಸಿದ್ಧ’ ಎಂಬ ಸಂದೇಶ ಸಾರಿದರು.</p>.<p>ಪ್ರತಿಭಟನಾ ಜಾಥಾದಲ್ಲಿ ಮಂಗಲ ಲಂಕೇಶ್, ಜೆ. ರಾಮಯ್ಯ, ಎಂ.ವಿ. ಕೃಷ್ಣ, ಬೂದನೂರು ಸಿದ್ದರಾಜು, ಕರುನಾಡ ಸೇವಕರು ಸಂಘಟನೆಯ ಎಂ.ಬಿ. ನಾಗಣ್ಣಗೌಡ, ಬೂದನೂರು ಮನು, ಕರ್ನಾಟಕ ರಕ್ಷಣಾ ವೇದಿಕೆಯ ಎಚ್.ಡಿ. ಜಯರಾಂ, ಮುದ್ದೇಗೌಡ, ವೆಂಕಟೇಶ್ (ಆಟೊ), ಆಲಕೆರೆ ಸಂಜು ಮುಂತಾದವರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ರಾಜ್ಯ ಸರ್ಕಾರ ಕೃಷ್ಣರಾಜ ಸಾಗರದ ಬಳಿ ಅನಗತ್ಯ ದುಂದುವೆಚ್ಚದ ‘ಕಾವೇರಿ ಆರತಿ’ ನಿಲ್ಲಿಸಿ, ಜಿಲ್ಲೆಯ ಕೆರೆ ಕಟ್ಟೆಗಳನ್ನು ತುಂಬಿಸಿ. ನಾಲೆಯ ಕಡೆ ಬಯಲಿಗೆ ನೀರು ಹರಿಸುವಂತೆ ಕನ್ನಡಪರ ಸಂಘಟನೆಗಳ ಮುಖಂಡರು ನಗರದಲ್ಲಿ ಸೋಮವಾರ ಮೇಣದ ದೀಪ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.</p>.<p>ಜಿಲ್ಲೆಯ ಜನ ಕಾವೇರಿ ಮಾತೆಯನ್ನು ನಿತ್ಯ ಸ್ಮರಿಸುತ್ತಾರೆ. ರಾಜ್ಯ ಸರ್ಕಾರ ಜನರ ಆಶಯ ಮತ್ತು ಅಗತ್ಯಗಳನ್ನು ಧಿಕ್ಕರಿಸಿ, ಉತ್ತರ ಭಾರತದ ಗಂಗಾರತಿ ಪದ್ಧತಿಯನ್ನು ತರಲು ಹೊರಟಿದೆ. ಇಂಥ ಅವೈಜ್ಞಾನಿಕ ಮತ್ತು ಪರಿಸರ ವಿರೋಧಿ ಯೋಜನೆಗಳಿಂದ ‘ಕೃಷ್ಣರಾಜ ಸಾಗರ’ ಖಾಸಗಿಯವರ ಒಡೆತನಕ್ಕೆ ಹೋಗಲಿದೆ. ಈ ಎರಡು ಯೋಜನೆಗಳ ಕ್ರಿಯಾಯೋಜನೆಯನ್ನು ಜನರ ಮುಂದಿಡದೆ ಜಿಲ್ಲೆಯ ರೈತರನ್ನು ಕತ್ತಲಲ್ಲಿಡಲಾಗಿದೆ ಎಂದು ದೂರಿದರು.</p>.<p>ಸಚಿವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ರೈತರು ಒಕ್ಕೊರಲಿನಿಂದ ಕಾವೇರಿ ಆರತಿಗೆ ತಮ್ಮ ಪ್ರತಿರೋಧ ತೋರಿದ್ದರು. ಈ ಕುರಿತು ರೈತರ ಅಹವಾಲನ್ನು ರಾಜ್ಯ ಸರ್ಕಾರದ ಗಮನಕ್ಕೆ ತರುವುದಾಗಿ ಸಚಿವರು ಭರವಸೆ ನೀಡಿದ್ದರು. ಆದರೂ ಕಾವೇರಿ ಆರತಿಗೆ ಸಂಬಂಧಿಸಿದ ಕಾಮಗಾರಿಯನ್ನು ಆರಂಭಿಸಿರುವುದು ರೈತರಿಗೆ ಬಗೆದ ದ್ರೋಹ ಎಂದು ಕಿಡಿಕಾರಿದರು.</p>.<p>‘ಮೇಣದ ದೀಪದ ಪ್ರದರ್ಶನದ ಮೂಲಕ ಸಾಂಕೇತಿಕ ಎಚ್ಚರಿಕೆ ನೀಡಲಾಗಿದೆ. ಅನಿವಾರ್ಯ ಎನಿಸಿದರೆ ವರುಣಾ ಚಳವಳಿ ಮಾದರಿಯಲ್ಲಿ ಕಾವೇರಿ ಆರತಿ ಕಾಮಗಾರಿ ತಡೆಯಲು ಸಹ ಸಿದ್ಧ’ ಎಂಬ ಸಂದೇಶ ಸಾರಿದರು.</p>.<p>ಪ್ರತಿಭಟನಾ ಜಾಥಾದಲ್ಲಿ ಮಂಗಲ ಲಂಕೇಶ್, ಜೆ. ರಾಮಯ್ಯ, ಎಂ.ವಿ. ಕೃಷ್ಣ, ಬೂದನೂರು ಸಿದ್ದರಾಜು, ಕರುನಾಡ ಸೇವಕರು ಸಂಘಟನೆಯ ಎಂ.ಬಿ. ನಾಗಣ್ಣಗೌಡ, ಬೂದನೂರು ಮನು, ಕರ್ನಾಟಕ ರಕ್ಷಣಾ ವೇದಿಕೆಯ ಎಚ್.ಡಿ. ಜಯರಾಂ, ಮುದ್ದೇಗೌಡ, ವೆಂಕಟೇಶ್ (ಆಟೊ), ಆಲಕೆರೆ ಸಂಜು ಮುಂತಾದವರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>