ಎಐಎಸ್ಎಫ್: ಏಪ್ರಿಲ್ 23ರಿಂದ ಪರೀಕ್ಷೆ ಪ್ರಾರಂಭವಾಗಲಿವೆ. ಆದರೆ, ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಸಮಯಾವಕಾಶ ಕಡಿಮೆ ಇದೆ. ಇದರಿಂದ ತುಂಬಾ ಅನನುಕೂಲವಾಗುತ್ತಿದೆ. ಹೀಗಾಗಿ ವಿಧಾನ ಸಭಾ ಚುನಾವಣೆ ಮುಗಿದ ಬಳಿಕ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್ ಅವರಿಗೂ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.ಸಂಘಟನೆ ಜಿಲ್ಲಾ ಸಂಚಾಲಕ ಚಂದ್ರಶೇಖರ್, ಎ.ಮಿಥುನ್, ಆರ್.ಕಿರಣ್, ಎಂ.ಆರ್.ದರ್ಶನ್, ಅಶ್ವತ್ಥ್, ತಿಪ್ಪೇಸ್ವಾಮಿ, ಶ್ರೀನಿವಾಸ್, ಪುಟ್ಟರಾಜು, ಯಶವಂತ್, ರೋಹಿತ್, ವಿ.ಕುಸುಮ, ಸಿ.ಎಂ.ಶ್ರೀರಕ್ಷಾ, ಎಸ್.ಲೀಲಾವತಿ, ಟಿ.ಕೆ.ಪ್ರಿಯಾಂಕ, ಎನ್.ಎಸ್.ಪೂಜಾ, ಸಂದೀಪ್, ಬಿ ನಂದೀಶ್, ನಂದನರಾಜ್, ಅಶೋಕ್ ಇದ್ದರು.