‘ಸ್ವಾತಂತ್ರ್ಯ ನಂತರ ಸಂವಿಧಾನ ನೀಡಿದ ಕಾರ್ಮಿಕ ಹಕ್ಕುಗಳನ್ನು ಅರ್ಹರಿಗೆ ತಲುಪಿಸಲು 1970 ರಲ್ಲಿ ಸಿಐಟಿಯು ಪ್ರಾರಂಭವಾಯಿತು. ಅಂದಿನಿಂದ ಎಲ್ಲಾ ಕಾರ್ಮಿಕರನ್ನು ಒಂದುಗೂಡಿಸಿ ಐಕ್ಯತೆ ಹಾಗೂ ಸಂಘರ್ಷದ ಮೂಲಕ ಹಕ್ಕುಗಳನ್ನು ಪಡೆಯುಲು ಶ್ರಮಿಸುತ್ತಿದೆ. ಆದರೆ ಕೇಂದ್ರ ಸರ್ಕಾರ ಕಾರ್ಮಿಕರನ್ನು ಕೂಲಿಗಳು, ಹಮಾಲಿಗಳು, ದಿನಗೂಲಿಗಳು, ನಿರ್ವಹಣಾಕಾರರು, ನೌಕರರು, ಅಧಿಕಾರಿಗಳು ಎಂದು ವಿಂಗಡಿಸಲು ಮುಂದಾಗಿರುವುದು ದರಂತವಾಗಿದೆ. ಇದಕ್ಕೆ ಅವಕಾಶ ನೀಡದೆ ಕಾರ್ಮಿಕರೆಲ್ಲರೂ ಸಿಐಟಿಯು ಅಡಿಯಲ್ಲಿ ಐಕ್ಯತೆ ಪ್ರದರ್ಶನ ಮಾಡುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ಕಾಪಾಡಿಕೊಳ್ಳಬೇಕು’ ಎಂದರು.