ಕೊನ್ನಾಪುರ ಗ್ರಾಮದ ರಾಮಚಂದ್ರ ಎಂಬುವರು ತಮ್ಮ ಮೂರು ಎಕರೆ ಜಮೀನಿನಲ್ಲಿ ನೂರಾರು ತೆಂಗಿನ ಗಿಡಗಳನ್ನು ಬೆಳೆಸಿದ್ದರು. ಭೀಮನ ಕಂಡಿ ಅರಣ್ಯ ತಪ್ಪಲಿನಿಂದ ಬಂದ ನಾಲ್ಕು ಕಾಡಾನೆಗಳು ತೆಂಗಿನ ಗಿಡಗಳನ್ನು ಮುರಿದು, ಸುಳಿ ತಿಂದು, ತುಳಿದು ಹಾಕಿವೆ. ಜಮೀನಿನಲ್ಲಿ ಬೆಳೆದಿದ್ದ ರಾಗಿ, ಕಡ್ಲೆಕಾಯಿ ಫಸಲನ್ನು ಹಾಳು ಮಾಡಿವೆ.