ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ದಶಪಥ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವೆಡೆ ರಸ್ತೆ, ಕಾಲುವೆಗಳು, ಪೈಪ್ಲೈನ್ಗಳು ಒಡೆದು ಹೋಗಿವೆ. ಕಾಮಗಾರಿಗೆ ಬೇಕಾದ ವಸ್ತುಗಳ ಸಾಗಣೆಗೆ ಭಾರಿ ವಾಹನಗಳು ಓಡಾಡುವ ಕಾರಣ ಪೈಪ್ಲೈನ್ಗಳು ಹಾಳಾಗಿವೆ. ಹೀಗಾಗಿ ನೀರು ಸಾರಾಗವಾಗಿ ಹರಿದು ಹೋಗಲು ಸಾಧ್ಯವಾಗದೇ ರಸ್ತೆ, ಜಮೀನುಗಳಿಗೆ ನುಗ್ಗುತ್ತಿದೆ.