<p><strong>ಶ್ರೀರಂಗಪಟ್ಟಣ</strong>: ತಾಲ್ಲೂಕಿನ ಚಿನ್ನಾಯಕನಹಳ್ಳಿ ಬಡಾವಣೆಯಲ್ಲಿ ಕೇಂದ್ರ ಪುರಸ್ಕೃತ ಜಲ ಜೀವನ ಮಿಷನ್ (ಜೆಜೆಎಂ) ಯೋಜನೆಯಡಿ ಮನೆ ಮನೆಗೆ ಶುದ್ಧ ನೀರು ತಲುಪುತ್ತಿದೆ ಎಂದು ಫಲಕಗಳನ್ನು ಹಾಕಲಾಗಿದೆ. ಆದರೆ ಈ ಯೋಜನೆಯಡಿ ಇದುವರೆಗೆ ಒಂದು ಮನೆಗೂ ನೀರು ಕೊಟ್ಟಿಲ್ಲ ಎಂಬ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.</p>.<p>ಗ್ರಾಮದ ಪ್ರವೇಶ ದ್ವಾರ ಮತ್ತು ಸರ್ಕಾರಿ ಶಾಲೆಯ ಕಾಂಪೌಂಡ್ಗಳ ಮೇಲೆ ಜಲ ಜೀವನ ಮಿಷನ್ ಯೋಜನೆಯಡಿ, 2021–22ನೇ ಸಾಲಿನಲ್ಲಿ, ₹45 ಲಕ್ಷ ವೆಚ್ಚದಲ್ಲಿ ಜೆಜೆಎಂ ಯೋಜನೆ ಕಾರ್ಯಗತವಾಗಿದೆ ಎಂದು ಫಲಕಗಳು ಹೇಳುತ್ತವೆ.</p>.<p>‘ಈ ಬಡಾವಣೆಯಲ್ಲಿ 112 ಮನೆಗಳಿದ್ದು, ಎಲ್ಲ ಮನೆಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜಾಗುತ್ತಿದೆ ಎಂದು ಅವುಗಳಲ್ಲಿ ನಮೂದಿಸಲಾಗಿದೆ. ವಿಪರ್ಯಾಸವೆಂದರೆ ಈ ಯೋಜನೆಯಡಿ ಯಾವೊಂದು ಮನೆಗೂ ನಲ್ಲಿಗಳನ್ನು ಅಳವಡಿಸಿಲ್ಲ. ಇನ್ನು ಮನೆ ಮನೆಗೆ ನೀರು ಬರಲು ಹೇಗೆ ಸಾಧ್ಯ. ನೀವೇ ನೋಡಿ’ ಎಂದು ಗ್ರಾಮದ ಮುಖಂಡ ಆಟೋ ಶಿವರಾಮು ಮನೆ ಮನೆಗೆ ಕರೆದೊಯ್ದು ತೋರಿಸಿದರು.</p>.<p>‘ಚಿನ್ನಾಯಕನಹಳ್ಳಿ ಬಡಾವಣೆಯಲ್ಲಿ ಗ್ರಾಮ ಪಂಚಾಯಿತಿ ದಾಖಲೆಗಳ ಪ್ರಕಾರ 44 ಮನೆಗಳಿವೆ. ಇತರ 70ಕ್ಕೂ ಹೆಚ್ಚು ಮನೆಗಳಿಗೆ ಹಕ್ಕುಪತ್ರ ಕೊಟ್ಟಿಲ್ಲ. ನಾವು ಹಕ್ಕುಪತ್ರ ಕೇಳಿದರೆ ಮನೆ ಮನೆಗೆ ನೀರು ಕೊಟ್ಟಿದ್ದೇವೆ ಎಂದು ಬೋರ್ಡ್ ಹಾಕಿದ್ದಾರೆ. ಸರ್ಕಾರದ ಹತ್ತಾರು ಲಕ್ಷ ರೂಪಾಯಿ ಹಣ ಅಪವ್ಯಯವಾಗಿದೆ. ಈ ಬಡಾವಣೆಯಲ್ಲಿ ಓವರ್ ಹೆಡ್ ಟ್ಯಾಂಕ್ ಕೂಡ ಇಲ್ಲ. ಹೀಗಿರುವಾಗ ಮನೆ ಮನೆಗೆ ನೀರು ಹರಿಯಲು ಹೇಗೆ ಸಾಧ್ಯ’ ಎಂದು ಶಿವರಾಮು ಪ್ರಶ್ನಿಸಿದರು.</p>.<p>‘ನಮ್ಮ ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ಮನೆ ಮನೆಗೆ ಶುದ್ಧ ನೀರು ಕೊಡುವುದಾಗಿ ಹೇಳಿ ಪೈಪ್ಲೈನ್ ಮಾಡಿದ್ದಾರೆ. ಅದೂ ಅರ್ಧ ಬೀದಿಗೆ ಮಾತ್ರ ಪೈಪ್ಗಳನ್ನು ಹಾಕಿ ನಿಲ್ಲಿಸಿದ್ದಾರೆ. ಆದರೆ ಇದುವರೆಗೆ ಯಾವ ಮನೆಗೂ ನಲ್ಲಿಗಳನ್ನು ಹಾಕಿಲ್ಲ. ಈ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಹಲವು ಬಾರಿ ಕೇಳಿದ್ದು, ಸಬೂಬು ಹೇಳುತ್ತಲೇ ಇದ್ದಾರೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಜಯಮ್ಮ ಬೇಸರ ವ್ಯಕ್ತಪಡಿಸಿದರು.</p>.<p>‘ಚಿನ್ನಾಯಕನಹಳ್ಳಿ ಬಡಾವಣೆಯಲ್ಲಿ ಜೆಜೆಎಂ ಯೋಜನೆ ಅನುಷ್ಠಾನ ಸಂಬಂಧ ಪೈಪ್ಲೈನ್ ಕಾಮಗಾರಿ ನಡೆದಿದೆ. ಆದರೆ ಅರಣ್ಯ ಇಲಾಖೆಯ ಆಕ್ಷೇಪದಿಂದಾಗಿ ನಲ್ಲಿಗಳನ್ನು ಅಳವಡಿಸಿ ನೀರು ಕೊಡಲು ಆಗಿಲ್ಲ. ಈ ಯೋಜನೆಯ ಗುತ್ತಿಗೆದಾರ ಹಣ ಪಡೆಯುವ ಉದ್ದೇಶದಿಂದ ಮನೆ ಮನೆಗೆ ನೀರು ಕೊಟ್ಟಿದ್ದೇವೆ ಎಂಬ ತಪ್ಪು ಫಲಕಗಳನ್ನು ಹಾಕಿಸಿದ್ದಾನೆ. ಆ ಫಲಕಗಳನ್ನು ತೆಗೆಸಲಾಗುವುದು’ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀರಂಗಪಟ್ಟಣ</strong>: ತಾಲ್ಲೂಕಿನ ಚಿನ್ನಾಯಕನಹಳ್ಳಿ ಬಡಾವಣೆಯಲ್ಲಿ ಕೇಂದ್ರ ಪುರಸ್ಕೃತ ಜಲ ಜೀವನ ಮಿಷನ್ (ಜೆಜೆಎಂ) ಯೋಜನೆಯಡಿ ಮನೆ ಮನೆಗೆ ಶುದ್ಧ ನೀರು ತಲುಪುತ್ತಿದೆ ಎಂದು ಫಲಕಗಳನ್ನು ಹಾಕಲಾಗಿದೆ. ಆದರೆ ಈ ಯೋಜನೆಯಡಿ ಇದುವರೆಗೆ ಒಂದು ಮನೆಗೂ ನೀರು ಕೊಟ್ಟಿಲ್ಲ ಎಂಬ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.</p>.<p>ಗ್ರಾಮದ ಪ್ರವೇಶ ದ್ವಾರ ಮತ್ತು ಸರ್ಕಾರಿ ಶಾಲೆಯ ಕಾಂಪೌಂಡ್ಗಳ ಮೇಲೆ ಜಲ ಜೀವನ ಮಿಷನ್ ಯೋಜನೆಯಡಿ, 2021–22ನೇ ಸಾಲಿನಲ್ಲಿ, ₹45 ಲಕ್ಷ ವೆಚ್ಚದಲ್ಲಿ ಜೆಜೆಎಂ ಯೋಜನೆ ಕಾರ್ಯಗತವಾಗಿದೆ ಎಂದು ಫಲಕಗಳು ಹೇಳುತ್ತವೆ.</p>.<p>‘ಈ ಬಡಾವಣೆಯಲ್ಲಿ 112 ಮನೆಗಳಿದ್ದು, ಎಲ್ಲ ಮನೆಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜಾಗುತ್ತಿದೆ ಎಂದು ಅವುಗಳಲ್ಲಿ ನಮೂದಿಸಲಾಗಿದೆ. ವಿಪರ್ಯಾಸವೆಂದರೆ ಈ ಯೋಜನೆಯಡಿ ಯಾವೊಂದು ಮನೆಗೂ ನಲ್ಲಿಗಳನ್ನು ಅಳವಡಿಸಿಲ್ಲ. ಇನ್ನು ಮನೆ ಮನೆಗೆ ನೀರು ಬರಲು ಹೇಗೆ ಸಾಧ್ಯ. ನೀವೇ ನೋಡಿ’ ಎಂದು ಗ್ರಾಮದ ಮುಖಂಡ ಆಟೋ ಶಿವರಾಮು ಮನೆ ಮನೆಗೆ ಕರೆದೊಯ್ದು ತೋರಿಸಿದರು.</p>.<p>‘ಚಿನ್ನಾಯಕನಹಳ್ಳಿ ಬಡಾವಣೆಯಲ್ಲಿ ಗ್ರಾಮ ಪಂಚಾಯಿತಿ ದಾಖಲೆಗಳ ಪ್ರಕಾರ 44 ಮನೆಗಳಿವೆ. ಇತರ 70ಕ್ಕೂ ಹೆಚ್ಚು ಮನೆಗಳಿಗೆ ಹಕ್ಕುಪತ್ರ ಕೊಟ್ಟಿಲ್ಲ. ನಾವು ಹಕ್ಕುಪತ್ರ ಕೇಳಿದರೆ ಮನೆ ಮನೆಗೆ ನೀರು ಕೊಟ್ಟಿದ್ದೇವೆ ಎಂದು ಬೋರ್ಡ್ ಹಾಕಿದ್ದಾರೆ. ಸರ್ಕಾರದ ಹತ್ತಾರು ಲಕ್ಷ ರೂಪಾಯಿ ಹಣ ಅಪವ್ಯಯವಾಗಿದೆ. ಈ ಬಡಾವಣೆಯಲ್ಲಿ ಓವರ್ ಹೆಡ್ ಟ್ಯಾಂಕ್ ಕೂಡ ಇಲ್ಲ. ಹೀಗಿರುವಾಗ ಮನೆ ಮನೆಗೆ ನೀರು ಹರಿಯಲು ಹೇಗೆ ಸಾಧ್ಯ’ ಎಂದು ಶಿವರಾಮು ಪ್ರಶ್ನಿಸಿದರು.</p>.<p>‘ನಮ್ಮ ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ಮನೆ ಮನೆಗೆ ಶುದ್ಧ ನೀರು ಕೊಡುವುದಾಗಿ ಹೇಳಿ ಪೈಪ್ಲೈನ್ ಮಾಡಿದ್ದಾರೆ. ಅದೂ ಅರ್ಧ ಬೀದಿಗೆ ಮಾತ್ರ ಪೈಪ್ಗಳನ್ನು ಹಾಕಿ ನಿಲ್ಲಿಸಿದ್ದಾರೆ. ಆದರೆ ಇದುವರೆಗೆ ಯಾವ ಮನೆಗೂ ನಲ್ಲಿಗಳನ್ನು ಹಾಕಿಲ್ಲ. ಈ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಹಲವು ಬಾರಿ ಕೇಳಿದ್ದು, ಸಬೂಬು ಹೇಳುತ್ತಲೇ ಇದ್ದಾರೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಜಯಮ್ಮ ಬೇಸರ ವ್ಯಕ್ತಪಡಿಸಿದರು.</p>.<p>‘ಚಿನ್ನಾಯಕನಹಳ್ಳಿ ಬಡಾವಣೆಯಲ್ಲಿ ಜೆಜೆಎಂ ಯೋಜನೆ ಅನುಷ್ಠಾನ ಸಂಬಂಧ ಪೈಪ್ಲೈನ್ ಕಾಮಗಾರಿ ನಡೆದಿದೆ. ಆದರೆ ಅರಣ್ಯ ಇಲಾಖೆಯ ಆಕ್ಷೇಪದಿಂದಾಗಿ ನಲ್ಲಿಗಳನ್ನು ಅಳವಡಿಸಿ ನೀರು ಕೊಡಲು ಆಗಿಲ್ಲ. ಈ ಯೋಜನೆಯ ಗುತ್ತಿಗೆದಾರ ಹಣ ಪಡೆಯುವ ಉದ್ದೇಶದಿಂದ ಮನೆ ಮನೆಗೆ ನೀರು ಕೊಟ್ಟಿದ್ದೇವೆ ಎಂಬ ತಪ್ಪು ಫಲಕಗಳನ್ನು ಹಾಕಿಸಿದ್ದಾನೆ. ಆ ಫಲಕಗಳನ್ನು ತೆಗೆಸಲಾಗುವುದು’ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>