<p><strong>ಮೇಲುಕೋಟೆ</strong>: ಮಾರ್ಚ್ 24ರಂದು ನಡೆಯುವ ವೈರಮುಡಿ ಕಿರೀಟ ಧಾರಣಾ ಮಹೋತ್ಸವಕ್ಕೆ ಪೂರಕವಾಗಿ, ಪ್ರಾಯಶ್ಚಿತಪೂರ್ವಕವಾಗಿ ಮೇಲುಕೋಟೆ ದೇವಾಲಯದಲ್ಲಿ ಚೆಲುವನಾರಾಯಣಸ್ವಾಮಿಗೆ ಶುಕ್ರವಾರ ಸಹಸ್ರಕಳಶಾಭಿಷೇಕ ನೆರವೇರಿತು.</p>.<p>ಕೊರೊನಾದಿಂದಾಗಿ ಕಳೆದ ವರ್ಷ ವೈರಮುಡಿ ಬ್ರಹ್ಮೋತ್ಸವ ಸ್ಥಗಿತಕೊಂಡಿತ್ತು. ಈ ಕಾರಣದಿಂದ ಈ ಬಾರಿಯ ಜಾತ್ರಾ ಮಹೋತ್ಸವಕ್ಕೂ ಮುನ್ನ ಅಮ್ಮನವರ ಸನ್ನಿಧಿಯ ಮುಂಭಾಗ 25 ಆರಾಧನೆಯೊಂದಿಗೆ 600 ದ್ರವ್ಯಗಳಿಂದ ರಾಮಾನುಜರು, ಆಳ್ವಾರರು ಮತ್ತು ಶ್ರೀದೇವಿ-ಭೂದೇವಿ ಸಮೇತ ವಿರಾಜಮಾನನಾದ ಉತ್ಸವಮೂರ್ತಿ ಚೆಲುವನಾರಾಯಣಸ್ವಾಮಿಗೆ ಸಹಸ್ರ ಕಳಶಾಭಿಷೇಕ ನೆರವೇರಿಸಲಾಯಿತು.</p>.<p>ವೇದಘೋಷ ದೊಂದಿಗೆ ನೆರವೇರಿದಸಹಸ್ರ ಕಳಶಾಭಿಷೇಕದಲ್ಲಿ ಯದುಗಿರಿ ಯತಿರಾಜ ಶ್ರೀಮನ್ನಾರಾ ಯಣ ಜೀಯರ್, ಮೈಸೂರು ರಾಜಗುರು ಪರಕಾಲಶ್ರೀ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಭಾಗಿಯಾದರು.</p>.<p>ದಶಕಗಳ ಕಾಲ ದೇವರ ಅರ್ಚನಾವೃತ್ತಿ ಮಾಡಿದ ಸಂಪತ್ಕುಮಾರ ಭಟ್ಟರ್ ಸ್ವಾಮಿಗೆ ಅಭಿಷೇಕ ಮಾಡಿದರು.</p>.<p>ದೇವಾಲಯದ ಆಡಳಿತಾಧಿಕಾರಿ, ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್ ಪ್ರಮೋದ್ ಪಾಟೀಲ್, ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಮಂಗಳಮ್ಮ ಸಮಕ್ಷಮದಲ್ಲಿ ಬೆಳಿಗ್ಗೆ 8 ಗಂಟೆಗೆ ಕಳಶಾರಾಧನೆಯೊಂದಿಗೆ ಆರಂಭವಾದ ಮಹಾಭಿಷೇಕ ಸಂಜೆವರೆಗೂ ನೆರವೇರಿತು.</p>.<p>ಚೆಲುವನಾರಾಯಣನಿಗೆ 25 ಬಗೆಯ ಪುಷ್ಪಗಳು, ಒಣಹಣ್ಣುಗಳು, ವಿವಿಧ ಬಗೆಯ ಆಲಂಕಾರಿಕ ಕಿರೀಟವನ್ನು ತೊಡಿಸಿ ಸಾವಿರ ಕಳಶಗಳಿಂದ ಅಭಿಷೇಕ ನೆರವೇರಿ ಸಲಾಯಿತು. ಮೂಲಮೂರ್ತಿ ಚೆಲ್ವತಿರುನಾರಾಯಣಸ್ವಾಮಿಗೆ ಕುಂಭದ ತೀರ್ಥಪ್ರೋಕ್ಷಣೆ ಮಾಡಿ ಅಭಿಷೇಕದ ವಿಧಿವಿಧಾನಗಳನ್ನು ನೆರವೇರಿಸಲಾಯಿತು.</p>.<p>ಉತ್ಸವಮೂರ್ತಿ ಚೆಲುವನಾರಾ ಯಣಸ್ವಾಮಿಗೆ ಸಹಸ್ರಕ ಳಶಾಭಿಷೇಕದ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಮೂಲಮೂರ್ತಿಯ ದರ್ಶನಕ್ಕೆ ಭಕ್ತರು ಮತ್ತು ಗಣ್ಯರಿಗೆ ಅವಕಾಶ ಮಾಡಿಕೊಡಲಾಗಿತ್ತು. ಸಹಸ್ರಕಳಶಾಭಿಷೇಕದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೇಲುಕೋಟೆ</strong>: ಮಾರ್ಚ್ 24ರಂದು ನಡೆಯುವ ವೈರಮುಡಿ ಕಿರೀಟ ಧಾರಣಾ ಮಹೋತ್ಸವಕ್ಕೆ ಪೂರಕವಾಗಿ, ಪ್ರಾಯಶ್ಚಿತಪೂರ್ವಕವಾಗಿ ಮೇಲುಕೋಟೆ ದೇವಾಲಯದಲ್ಲಿ ಚೆಲುವನಾರಾಯಣಸ್ವಾಮಿಗೆ ಶುಕ್ರವಾರ ಸಹಸ್ರಕಳಶಾಭಿಷೇಕ ನೆರವೇರಿತು.</p>.<p>ಕೊರೊನಾದಿಂದಾಗಿ ಕಳೆದ ವರ್ಷ ವೈರಮುಡಿ ಬ್ರಹ್ಮೋತ್ಸವ ಸ್ಥಗಿತಕೊಂಡಿತ್ತು. ಈ ಕಾರಣದಿಂದ ಈ ಬಾರಿಯ ಜಾತ್ರಾ ಮಹೋತ್ಸವಕ್ಕೂ ಮುನ್ನ ಅಮ್ಮನವರ ಸನ್ನಿಧಿಯ ಮುಂಭಾಗ 25 ಆರಾಧನೆಯೊಂದಿಗೆ 600 ದ್ರವ್ಯಗಳಿಂದ ರಾಮಾನುಜರು, ಆಳ್ವಾರರು ಮತ್ತು ಶ್ರೀದೇವಿ-ಭೂದೇವಿ ಸಮೇತ ವಿರಾಜಮಾನನಾದ ಉತ್ಸವಮೂರ್ತಿ ಚೆಲುವನಾರಾಯಣಸ್ವಾಮಿಗೆ ಸಹಸ್ರ ಕಳಶಾಭಿಷೇಕ ನೆರವೇರಿಸಲಾಯಿತು.</p>.<p>ವೇದಘೋಷ ದೊಂದಿಗೆ ನೆರವೇರಿದಸಹಸ್ರ ಕಳಶಾಭಿಷೇಕದಲ್ಲಿ ಯದುಗಿರಿ ಯತಿರಾಜ ಶ್ರೀಮನ್ನಾರಾ ಯಣ ಜೀಯರ್, ಮೈಸೂರು ರಾಜಗುರು ಪರಕಾಲಶ್ರೀ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಭಾಗಿಯಾದರು.</p>.<p>ದಶಕಗಳ ಕಾಲ ದೇವರ ಅರ್ಚನಾವೃತ್ತಿ ಮಾಡಿದ ಸಂಪತ್ಕುಮಾರ ಭಟ್ಟರ್ ಸ್ವಾಮಿಗೆ ಅಭಿಷೇಕ ಮಾಡಿದರು.</p>.<p>ದೇವಾಲಯದ ಆಡಳಿತಾಧಿಕಾರಿ, ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್ ಪ್ರಮೋದ್ ಪಾಟೀಲ್, ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಮಂಗಳಮ್ಮ ಸಮಕ್ಷಮದಲ್ಲಿ ಬೆಳಿಗ್ಗೆ 8 ಗಂಟೆಗೆ ಕಳಶಾರಾಧನೆಯೊಂದಿಗೆ ಆರಂಭವಾದ ಮಹಾಭಿಷೇಕ ಸಂಜೆವರೆಗೂ ನೆರವೇರಿತು.</p>.<p>ಚೆಲುವನಾರಾಯಣನಿಗೆ 25 ಬಗೆಯ ಪುಷ್ಪಗಳು, ಒಣಹಣ್ಣುಗಳು, ವಿವಿಧ ಬಗೆಯ ಆಲಂಕಾರಿಕ ಕಿರೀಟವನ್ನು ತೊಡಿಸಿ ಸಾವಿರ ಕಳಶಗಳಿಂದ ಅಭಿಷೇಕ ನೆರವೇರಿ ಸಲಾಯಿತು. ಮೂಲಮೂರ್ತಿ ಚೆಲ್ವತಿರುನಾರಾಯಣಸ್ವಾಮಿಗೆ ಕುಂಭದ ತೀರ್ಥಪ್ರೋಕ್ಷಣೆ ಮಾಡಿ ಅಭಿಷೇಕದ ವಿಧಿವಿಧಾನಗಳನ್ನು ನೆರವೇರಿಸಲಾಯಿತು.</p>.<p>ಉತ್ಸವಮೂರ್ತಿ ಚೆಲುವನಾರಾ ಯಣಸ್ವಾಮಿಗೆ ಸಹಸ್ರಕ ಳಶಾಭಿಷೇಕದ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಮೂಲಮೂರ್ತಿಯ ದರ್ಶನಕ್ಕೆ ಭಕ್ತರು ಮತ್ತು ಗಣ್ಯರಿಗೆ ಅವಕಾಶ ಮಾಡಿಕೊಡಲಾಗಿತ್ತು. ಸಹಸ್ರಕಳಶಾಭಿಷೇಕದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>