<p><strong>ಮಂಡ್ಯ</strong>: ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ಶಿಥಿಲವಾಗಿದ್ದ ಗೇಟುಗಳನ್ನು ಬದಲಿಸಿ, ಹೊಸ ಗೇಟುಗಳನ್ನು ಅಳವಡಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಗೇಟುಗಳ ನಿರ್ವಹಣೆಗೆ ಆಧುನಿಕವಾದ ‘ಸ್ಕಾಡಾ ತಂತ್ರಜ್ಞಾನ’ ಅಳವಡಿಸಿಕೊಳ್ಳಲಾಗಿದೆ. </p>.<p>‘ನೀರು ಹರಿಸುವ ಮೇಲ್ವಿಚಾರಣಾ ನಿಯಂತ್ರಣ ಮತ್ತು ಡೇಟಾ ಸ್ವಾಧೀನ ವ್ಯವಸ್ಥೆಯೇ ಸ್ಕಾಡಾ’ (SCADA). ರಿಮೋಟ್ ತಂತ್ರಜ್ಞಾನದ ಮೂಲಕ ನೀರು ಪೋಲಾಗುವುದನ್ನು ತಡೆಗಟ್ಟುವುದು ಮತ್ತು ವೈಜ್ಞಾನಿಕವಾಗಿ ನೀರಿನ ಹಂಚಿಕೆಯೇ ಪ್ರಮುಖ ಉದ್ದೇಶ. </p>.<p>‘ಮೊದಲು ಪ್ರತಿ ಗೇಟನ್ನು ಸಿಬ್ಬಂದಿಯೇ ನಿರ್ವಹಿಸಬೇಕಿತ್ತು. ಹೊಸ ತಂತ್ರಜ್ಞಾನದಿಂದ ನಿಯಂತ್ರಣ ಕೊಠಡಿಯಲ್ಲೇ ಕುಳಿತು ಎಲ್ಲ ಗೇಟುಗಳನ್ನು ಸ್ವಯಂಚಾಲಿತವಾಗಿ ಏರಿಳಿಸಲಾಗುತ್ತಿದೆ. ಪ್ರವಾಹದ ಸಂದರ್ಭದಲ್ಲಿ ಗೇಟುಗಳನ್ನು ತುರ್ತಾಗಿ ತೆರೆಯಬಹುದು’ ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ಗಳು. </p>.<p>ತಂತ್ರಜ್ಞಾನಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳ ಅಳವಡಿಕೆ ಪೂರ್ಣಗೊಂಡಿದ್ದು, ಯಶಸ್ವಿಯಾಗಿ ಚಾಲನೆ ಮಾಡಲಾಗುತ್ತಿದೆ. ‘ಕಂಟ್ರೋಲ್ ರೂಂ’ ನಿರ್ಮಾಣ ಕಾರ್ಯ ಇನ್ನು 2–3 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. </p>.<p><strong>ಗೇಟುಗಳ ಆಧುನೀಕರಣ</strong></p>.<p>1932ರಲ್ಲಿ ನಿರ್ಮಾಣವಾದ ಅಣೆಕಟ್ಟೆಯು ಶತಮಾನದ ಹೊಸ್ತಿಲಲ್ಲಿದ್ದು, ಗೇಟುಗಳು 80 ವರ್ಷಗಳಷ್ಟು ಹಳೆಯದಾದ್ದರಿಂದ, ಶಿಥಿಲಗೊಂಡು ನೀರು ಸೋರಿಕೆಯಾಗುತ್ತಿತ್ತು. ಹೀಗಾಗಿ ಆಧುನೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು.</p>.<p>2011ರಲ್ಲಿ +80 ಅಡಿ ಮಟ್ಟದ 16 ಹೊಸ ಗೇಟುಗಳನ್ನು ₹8.50 ಕೋಟಿ ವೆಚ್ಚದಲ್ಲಿ ಅಳವಡಿಸಲಾಗಿತ್ತು. 2013–14ರಲ್ಲಿ ನೀರಾವರಿಗೆ ಸಂಬಂಧಿಸಿದ ವಿಶ್ವೇಶ್ವರಯ್ಯ ಕಾಲುವೆಗಳ +60 ಅಡಿ ಮಟ್ಟದ 3 ಗೇಟು, +50 ಅಡಿ ಮಟ್ಟದ 3 ಗೇಟುಗಳನ್ನು ₹2.70 ಕೋಟಿ ವೆಚ್ಚದಲ್ಲಿ ಬದಲಿಸಲಾಗಿತ್ತು. </p>.<p>ಪ್ರವಾಹ ಬಂದಾಗ ಉಪಯೋಗಿಸುವಂತಹ ನದಿ ಪಾತ್ರದ ದಕ್ಷಿಣ ಭಾಗದಲ್ಲಿರುವ +103 ಅಡಿ ಮಟ್ಟದ 48 ಗೇಟುಗಳು, +106 ಅಡಿ ಮಟ್ಟದ 40 ಗೇಟುಗಳು ಹಾಗೂ +114 ಅಡಿ ಮಟ್ಟದ 48 ಗೇಟುಗಳನ್ನು ₹65.60 ಕೋಟಿ ವೆಚ್ಚದಲ್ಲಿ ಹೊಸದಾಗಿ ಅಳವಡಿಸಲು 2019ರಲ್ಲಿ ಆಧುನೀಕರಣ ಕಾಮಗಾರಿ ಆರಂಭವಾಗಿ, ಇತ್ತೀಚೆಗೆ ಪೂರ್ಣಗೊಂಡಿದೆ. </p>.<p><strong>ಶಾಶ್ವತವಾಗಿ ಮುಚ್ಚಿದ ಗೇಟು</strong></p>.<p>‘ನಾಲ್ಕು ಟರ್ಬೈನ್ ಗೇಟುಗಳು +53 ಅಡಿ ಎತ್ತರದಲ್ಲಿದ್ದು, ವಿದ್ಯುತ್ ಉತ್ಪಾದನೆ ಸಾಧ್ಯವಿಲ್ಲವೆಂಬುದನ್ನು ಪರಿಗಣಿಸಿ, ನಿರ್ಮಾಣ ಕಾಲದಲ್ಲೇ ಶಾಶ್ವತವಾಗಿ ಮುಚ್ಚಲಾಗಿದೆ. ಹೂಳು ತೆಗೆಯಲು ನಿರ್ಮಿಸಿದ್ದ +12 ಅಡಿ ಮಟ್ಟದ 8 ಗೇಟುಗಳನ್ನೂ ತಾಂತ್ರಿಕ ಕಾರಣದಿಂದ ಮುಚ್ಚಲಾಗಿದೆ. ಅದನ್ನು ಸರಿದೂಗಿಸಲು +60 ಅಡಿ ಮಟ್ಟದಲ್ಲಿರುವ ವರುಣ ನಾಲೆಯ ಕ್ರಾಸ್ ರೆಗ್ಯುಲೇಟರ್ ಮೂಲಕ ನೀರನ್ನು ಹರಿಸಲಾಗುತ್ತಿದೆ’ ಎಂದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ. </p>.<p>ಹೊಸ ಗೇಟುಗಳನ್ನು ಅಳವಡಿಸುವ ಮೂಲಕ ಕೆಆರ್ಎಸ್ ಅಣೆಕಟ್ಟೆಯನ್ನು ಬಲಪಡಿಸಿದ್ದೇವೆ. ಅನುದಾನ ಲಭ್ಯತೆ ಆಧಾರದಲ್ಲಿ ಪ್ರತಿ ವರ್ಷ ಅಗತ್ಯ ನಿರ್ವಹಣಾ ಕಾಮಗಾರಿ ನಡೆಸುತ್ತಿದ್ದೇವೆ</p><p>–ವಿ.ಜಯಂತ್ ಕಾರ್ಯಪಾಲಕ ಎಂಜಿನಿಯರ್ ಕಾವೇರಿ ನೀರಾವರಿ ನಿಗಮ </p>.<p><strong>ಕಂಬ ಬಲಪಡಿಸಲು ₹10 ಕೋಟಿಗೆ ಬೇಡಿಕೆ</strong></p><p>‘ಆರ್ಬಿಎಲ್ಎಲ್ ಕಾಲುವೆ ಗೇಟುಗಳನ್ನು ಆಧುನೀಕರಣಗೊಳಿಸಲು ಅಗತ್ಯವಿರುವ ₹2.50 ಕೋಟಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದೇವೆ. ಇದರಿಂದ 50 ಕ್ಯೂಸೆಕ್ ಸೋರಿಕೆಯ ನೀರನ್ನು ತಡೆಯಬಹುದಾಗಿದೆ. ಕೆಆರ್ಎಸ್ ಡ್ಯಾಂ ಗೇಟುಗಳ ಅಕ್ಕಪಕ್ಕದಲ್ಲಿರುವ ಕಂಬಗಳನ್ನು ಬಲಪಡಿಸುವ ಕಾಮಗಾರಿ ಕೈಗೊಳ್ಳಲು ₹10 ಕೋಟಿ ಅನುದಾನಕ್ಕೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ’ ಎಂದು ನಿಗಮದ ಎಂಜಿನಿಯರ್ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ</strong>: ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ಶಿಥಿಲವಾಗಿದ್ದ ಗೇಟುಗಳನ್ನು ಬದಲಿಸಿ, ಹೊಸ ಗೇಟುಗಳನ್ನು ಅಳವಡಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಗೇಟುಗಳ ನಿರ್ವಹಣೆಗೆ ಆಧುನಿಕವಾದ ‘ಸ್ಕಾಡಾ ತಂತ್ರಜ್ಞಾನ’ ಅಳವಡಿಸಿಕೊಳ್ಳಲಾಗಿದೆ. </p>.<p>‘ನೀರು ಹರಿಸುವ ಮೇಲ್ವಿಚಾರಣಾ ನಿಯಂತ್ರಣ ಮತ್ತು ಡೇಟಾ ಸ್ವಾಧೀನ ವ್ಯವಸ್ಥೆಯೇ ಸ್ಕಾಡಾ’ (SCADA). ರಿಮೋಟ್ ತಂತ್ರಜ್ಞಾನದ ಮೂಲಕ ನೀರು ಪೋಲಾಗುವುದನ್ನು ತಡೆಗಟ್ಟುವುದು ಮತ್ತು ವೈಜ್ಞಾನಿಕವಾಗಿ ನೀರಿನ ಹಂಚಿಕೆಯೇ ಪ್ರಮುಖ ಉದ್ದೇಶ. </p>.<p>‘ಮೊದಲು ಪ್ರತಿ ಗೇಟನ್ನು ಸಿಬ್ಬಂದಿಯೇ ನಿರ್ವಹಿಸಬೇಕಿತ್ತು. ಹೊಸ ತಂತ್ರಜ್ಞಾನದಿಂದ ನಿಯಂತ್ರಣ ಕೊಠಡಿಯಲ್ಲೇ ಕುಳಿತು ಎಲ್ಲ ಗೇಟುಗಳನ್ನು ಸ್ವಯಂಚಾಲಿತವಾಗಿ ಏರಿಳಿಸಲಾಗುತ್ತಿದೆ. ಪ್ರವಾಹದ ಸಂದರ್ಭದಲ್ಲಿ ಗೇಟುಗಳನ್ನು ತುರ್ತಾಗಿ ತೆರೆಯಬಹುದು’ ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ಗಳು. </p>.<p>ತಂತ್ರಜ್ಞಾನಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳ ಅಳವಡಿಕೆ ಪೂರ್ಣಗೊಂಡಿದ್ದು, ಯಶಸ್ವಿಯಾಗಿ ಚಾಲನೆ ಮಾಡಲಾಗುತ್ತಿದೆ. ‘ಕಂಟ್ರೋಲ್ ರೂಂ’ ನಿರ್ಮಾಣ ಕಾರ್ಯ ಇನ್ನು 2–3 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. </p>.<p><strong>ಗೇಟುಗಳ ಆಧುನೀಕರಣ</strong></p>.<p>1932ರಲ್ಲಿ ನಿರ್ಮಾಣವಾದ ಅಣೆಕಟ್ಟೆಯು ಶತಮಾನದ ಹೊಸ್ತಿಲಲ್ಲಿದ್ದು, ಗೇಟುಗಳು 80 ವರ್ಷಗಳಷ್ಟು ಹಳೆಯದಾದ್ದರಿಂದ, ಶಿಥಿಲಗೊಂಡು ನೀರು ಸೋರಿಕೆಯಾಗುತ್ತಿತ್ತು. ಹೀಗಾಗಿ ಆಧುನೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು.</p>.<p>2011ರಲ್ಲಿ +80 ಅಡಿ ಮಟ್ಟದ 16 ಹೊಸ ಗೇಟುಗಳನ್ನು ₹8.50 ಕೋಟಿ ವೆಚ್ಚದಲ್ಲಿ ಅಳವಡಿಸಲಾಗಿತ್ತು. 2013–14ರಲ್ಲಿ ನೀರಾವರಿಗೆ ಸಂಬಂಧಿಸಿದ ವಿಶ್ವೇಶ್ವರಯ್ಯ ಕಾಲುವೆಗಳ +60 ಅಡಿ ಮಟ್ಟದ 3 ಗೇಟು, +50 ಅಡಿ ಮಟ್ಟದ 3 ಗೇಟುಗಳನ್ನು ₹2.70 ಕೋಟಿ ವೆಚ್ಚದಲ್ಲಿ ಬದಲಿಸಲಾಗಿತ್ತು. </p>.<p>ಪ್ರವಾಹ ಬಂದಾಗ ಉಪಯೋಗಿಸುವಂತಹ ನದಿ ಪಾತ್ರದ ದಕ್ಷಿಣ ಭಾಗದಲ್ಲಿರುವ +103 ಅಡಿ ಮಟ್ಟದ 48 ಗೇಟುಗಳು, +106 ಅಡಿ ಮಟ್ಟದ 40 ಗೇಟುಗಳು ಹಾಗೂ +114 ಅಡಿ ಮಟ್ಟದ 48 ಗೇಟುಗಳನ್ನು ₹65.60 ಕೋಟಿ ವೆಚ್ಚದಲ್ಲಿ ಹೊಸದಾಗಿ ಅಳವಡಿಸಲು 2019ರಲ್ಲಿ ಆಧುನೀಕರಣ ಕಾಮಗಾರಿ ಆರಂಭವಾಗಿ, ಇತ್ತೀಚೆಗೆ ಪೂರ್ಣಗೊಂಡಿದೆ. </p>.<p><strong>ಶಾಶ್ವತವಾಗಿ ಮುಚ್ಚಿದ ಗೇಟು</strong></p>.<p>‘ನಾಲ್ಕು ಟರ್ಬೈನ್ ಗೇಟುಗಳು +53 ಅಡಿ ಎತ್ತರದಲ್ಲಿದ್ದು, ವಿದ್ಯುತ್ ಉತ್ಪಾದನೆ ಸಾಧ್ಯವಿಲ್ಲವೆಂಬುದನ್ನು ಪರಿಗಣಿಸಿ, ನಿರ್ಮಾಣ ಕಾಲದಲ್ಲೇ ಶಾಶ್ವತವಾಗಿ ಮುಚ್ಚಲಾಗಿದೆ. ಹೂಳು ತೆಗೆಯಲು ನಿರ್ಮಿಸಿದ್ದ +12 ಅಡಿ ಮಟ್ಟದ 8 ಗೇಟುಗಳನ್ನೂ ತಾಂತ್ರಿಕ ಕಾರಣದಿಂದ ಮುಚ್ಚಲಾಗಿದೆ. ಅದನ್ನು ಸರಿದೂಗಿಸಲು +60 ಅಡಿ ಮಟ್ಟದಲ್ಲಿರುವ ವರುಣ ನಾಲೆಯ ಕ್ರಾಸ್ ರೆಗ್ಯುಲೇಟರ್ ಮೂಲಕ ನೀರನ್ನು ಹರಿಸಲಾಗುತ್ತಿದೆ’ ಎಂದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ. </p>.<p>ಹೊಸ ಗೇಟುಗಳನ್ನು ಅಳವಡಿಸುವ ಮೂಲಕ ಕೆಆರ್ಎಸ್ ಅಣೆಕಟ್ಟೆಯನ್ನು ಬಲಪಡಿಸಿದ್ದೇವೆ. ಅನುದಾನ ಲಭ್ಯತೆ ಆಧಾರದಲ್ಲಿ ಪ್ರತಿ ವರ್ಷ ಅಗತ್ಯ ನಿರ್ವಹಣಾ ಕಾಮಗಾರಿ ನಡೆಸುತ್ತಿದ್ದೇವೆ</p><p>–ವಿ.ಜಯಂತ್ ಕಾರ್ಯಪಾಲಕ ಎಂಜಿನಿಯರ್ ಕಾವೇರಿ ನೀರಾವರಿ ನಿಗಮ </p>.<p><strong>ಕಂಬ ಬಲಪಡಿಸಲು ₹10 ಕೋಟಿಗೆ ಬೇಡಿಕೆ</strong></p><p>‘ಆರ್ಬಿಎಲ್ಎಲ್ ಕಾಲುವೆ ಗೇಟುಗಳನ್ನು ಆಧುನೀಕರಣಗೊಳಿಸಲು ಅಗತ್ಯವಿರುವ ₹2.50 ಕೋಟಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದೇವೆ. ಇದರಿಂದ 50 ಕ್ಯೂಸೆಕ್ ಸೋರಿಕೆಯ ನೀರನ್ನು ತಡೆಯಬಹುದಾಗಿದೆ. ಕೆಆರ್ಎಸ್ ಡ್ಯಾಂ ಗೇಟುಗಳ ಅಕ್ಕಪಕ್ಕದಲ್ಲಿರುವ ಕಂಬಗಳನ್ನು ಬಲಪಡಿಸುವ ಕಾಮಗಾರಿ ಕೈಗೊಳ್ಳಲು ₹10 ಕೋಟಿ ಅನುದಾನಕ್ಕೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ’ ಎಂದು ನಿಗಮದ ಎಂಜಿನಿಯರ್ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>