<p><strong>ಮಂಡ್ಯ:</strong> ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಜಲಾಶಯವು ಕಳೆದ 80 ವರ್ಷಗಳಲ್ಲಿ (1946–2025) ಮೇ ತಿಂಗಳಲ್ಲೇ 4ನೇ ಬಾರಿಗೆ 100 ಅಡಿ ತಲುಪಿದೆ. </p>.<p>ಸಾಮಾನ್ಯವಾಗಿ ಜೂನ್ ಅಂತ್ಯದಿಂದ ಜುಲೈ ಅಂತ್ಯದ ನಡುವಿನ ಅವಧಿಯಲ್ಲಿ ಕೆಆರ್ಎಸ್ ಡ್ಯಾಂ ನೀರಿನ ಮಟ್ಟ 100 ಅಡಿಗೆ ಏರಿಕೆಯಾಗುತ್ತಿತ್ತು. ಈ ಬಾರಿ ಮೇ 30ರಂದೇ ದಾಖಲೆ ಮಟ್ಟದ ನೀರು ಸಂಗ್ರಹವಾಗಿದೆ. ಮೊದಲ ಬಾರಿಗೆ 1954ರಲ್ಲಿ ಮೇ 22ರಂದು, 1961ರಲ್ಲಿ ಮೇ 28ರಂದು, 2022ರಲ್ಲಿ ಮೇ 11ರಂದು ನೀರಿನ ಮಟ್ಟ ನೂರು ಅಡಿ ಮುಟ್ಟಿತ್ತು. </p>.<h2>ನಿರಂತರ ಮಳೆ:</h2>.<p>ಕೊಡಗು ಜಿಲ್ಲೆಯ ಭಾಗಮಂಡಲ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೆ.ಆರ್.ಎಸ್. ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಗುರುವಾರ 22,788 ಕ್ಯೂಸೆಕ್ ಮತ್ತು ಶುಕ್ರವಾರ 19,448 ಕ್ಯೂಸೆಕ್ ಒಳಹರಿವು ಇದ್ದು, ಹೊರಹರಿವಿನ ಪ್ರಮಾಣ 670 ಕ್ಯೂಸೆಕ್ ಇದೆ. </p>.<p>ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು, 49.452 ಟಿಎಂಸಿ ಅಡಿ ನೀರಿನ ಸಾಮರ್ಥ್ಯ ಹೊಂದಿದೆ. ಶುಕ್ರವಾರ ಜಲಾಶಯದಲ್ಲಿ 22.888 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಯಾಗಲು ಇನ್ನೂ 27 ಟಿಎಂಸಿ ಅಡಿ ನೀರು ಹರಿದು ಬರಬೇಕಿದೆ. 8 ಟಿ.ಎಂ.ಸಿ ಅಡಿ ನೀರನ್ನು ‘ಡೆಡ್ ಸ್ಟೋರೇಜ್’ ಎಂದು ಪರಿಗಣಿಸಲಾಗುತ್ತದೆ. ಉಳಿದ ನೀರನ್ನು ಮಾತ್ರ ಕುಡಿಯಲು ಮತ್ತು ಕೃಷಿ ಚಟುವಟಿಕೆಗೆ ಬಳಸಬಹುದು.</p>.<h2>ಒಂದೇ ದಿನ 4 ಅಡಿ ನೀರು: </h2>.<p>ಕಾವೇರಿ ಕೊಳ್ಳದಲ್ಲಿ ನಿರಂತರವಾಗಿ ಮಳೆ ಸುರಿದ ಪರಿಣಾಮ ಜಲಾಶಯಕ್ಕೆ ಮಂಗಳವಾರ ಒಂದೇ ದಿನದಲ್ಲಿ 4 ಅಡಿಗಳಷ್ಟು ನೀರು ಹರಿದು ಬಂದಿತ್ತು. ಕಳೆದ 4 ದಿನಗಳಿಂದ ನಿತ್ಯ ಸರಾಸರಿ 20 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. </p>.<p>‘ಕನ್ನಂಬಾಡಿ ಕಟ್ಟೆ ತುಂಬಿದರೆ ಸಹಜವಾಗಿಯೇ ಅನ್ನದಾತರಿಗೆ ಸಂತಸವಾಗುತ್ತದೆ. ಈ ಬಾರಿ ನಾಲೆ ಅಭಿವೃದ್ಧಿ ನಡೆಯುತ್ತಿರುವುದರಿಂದ ನೀರು ಸರಾಗವಾಗಿ ಹರಿದು ಕಾವೇರಿ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರಿಗೆ ನೀರು ಸಿಗುತ್ತದೆ ಎಂಬ ಆಶಾಭಾವ ಮೂಡಿದೆ. ಕಬ್ಬು, ಭತ್ತ, ರಾಗಿ ಬೆಳೆಯಲು ಅನುಕೂಲವಾಗುತ್ತದೆ’ ಎಂದು ಮಳವಳ್ಳಿಯ ರೈತ ಕೆ.ಎಸ್. ದ್ಯಾಪೇಗೌಡ ಸಂತಸ ಹಂಚಿಕೊಂಡರು. </p>.<div><blockquote>ಕೆಆರ್ಎಸ್ ಅಣೆಕಟ್ಟೆಯ 90 ವರ್ಷಗಳ ಇತಿಹಾಸದಲ್ಲಿ 2024ರಲ್ಲಿ ಮೊದಲ ಬಾರಿಗೆ 154 ದಿನ ಅಣೆಕಟ್ಟೆ ಭರ್ತಿಯಾಗಿತ್ತು. ಈ ವರ್ಷ ಮೇ ತಿಂಗಳಲ್ಲೇ 100 ಅಡಿ ನೀರು ಬಂದಿರುವುದು ಸಂತಸ ತಂದಿದೆ</blockquote><span class="attribution"> – ಜಯಂತ್ ವಿ. ಕಾರ್ಯಪಾಲಕ ಎಂಜಿನಿಯರ್ ಕಾವೇರಿ ನೀರಾವರಿ ನಿಗಮ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಜಲಾಶಯವು ಕಳೆದ 80 ವರ್ಷಗಳಲ್ಲಿ (1946–2025) ಮೇ ತಿಂಗಳಲ್ಲೇ 4ನೇ ಬಾರಿಗೆ 100 ಅಡಿ ತಲುಪಿದೆ. </p>.<p>ಸಾಮಾನ್ಯವಾಗಿ ಜೂನ್ ಅಂತ್ಯದಿಂದ ಜುಲೈ ಅಂತ್ಯದ ನಡುವಿನ ಅವಧಿಯಲ್ಲಿ ಕೆಆರ್ಎಸ್ ಡ್ಯಾಂ ನೀರಿನ ಮಟ್ಟ 100 ಅಡಿಗೆ ಏರಿಕೆಯಾಗುತ್ತಿತ್ತು. ಈ ಬಾರಿ ಮೇ 30ರಂದೇ ದಾಖಲೆ ಮಟ್ಟದ ನೀರು ಸಂಗ್ರಹವಾಗಿದೆ. ಮೊದಲ ಬಾರಿಗೆ 1954ರಲ್ಲಿ ಮೇ 22ರಂದು, 1961ರಲ್ಲಿ ಮೇ 28ರಂದು, 2022ರಲ್ಲಿ ಮೇ 11ರಂದು ನೀರಿನ ಮಟ್ಟ ನೂರು ಅಡಿ ಮುಟ್ಟಿತ್ತು. </p>.<h2>ನಿರಂತರ ಮಳೆ:</h2>.<p>ಕೊಡಗು ಜಿಲ್ಲೆಯ ಭಾಗಮಂಡಲ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೆ.ಆರ್.ಎಸ್. ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಗುರುವಾರ 22,788 ಕ್ಯೂಸೆಕ್ ಮತ್ತು ಶುಕ್ರವಾರ 19,448 ಕ್ಯೂಸೆಕ್ ಒಳಹರಿವು ಇದ್ದು, ಹೊರಹರಿವಿನ ಪ್ರಮಾಣ 670 ಕ್ಯೂಸೆಕ್ ಇದೆ. </p>.<p>ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು, 49.452 ಟಿಎಂಸಿ ಅಡಿ ನೀರಿನ ಸಾಮರ್ಥ್ಯ ಹೊಂದಿದೆ. ಶುಕ್ರವಾರ ಜಲಾಶಯದಲ್ಲಿ 22.888 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಯಾಗಲು ಇನ್ನೂ 27 ಟಿಎಂಸಿ ಅಡಿ ನೀರು ಹರಿದು ಬರಬೇಕಿದೆ. 8 ಟಿ.ಎಂ.ಸಿ ಅಡಿ ನೀರನ್ನು ‘ಡೆಡ್ ಸ್ಟೋರೇಜ್’ ಎಂದು ಪರಿಗಣಿಸಲಾಗುತ್ತದೆ. ಉಳಿದ ನೀರನ್ನು ಮಾತ್ರ ಕುಡಿಯಲು ಮತ್ತು ಕೃಷಿ ಚಟುವಟಿಕೆಗೆ ಬಳಸಬಹುದು.</p>.<h2>ಒಂದೇ ದಿನ 4 ಅಡಿ ನೀರು: </h2>.<p>ಕಾವೇರಿ ಕೊಳ್ಳದಲ್ಲಿ ನಿರಂತರವಾಗಿ ಮಳೆ ಸುರಿದ ಪರಿಣಾಮ ಜಲಾಶಯಕ್ಕೆ ಮಂಗಳವಾರ ಒಂದೇ ದಿನದಲ್ಲಿ 4 ಅಡಿಗಳಷ್ಟು ನೀರು ಹರಿದು ಬಂದಿತ್ತು. ಕಳೆದ 4 ದಿನಗಳಿಂದ ನಿತ್ಯ ಸರಾಸರಿ 20 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. </p>.<p>‘ಕನ್ನಂಬಾಡಿ ಕಟ್ಟೆ ತುಂಬಿದರೆ ಸಹಜವಾಗಿಯೇ ಅನ್ನದಾತರಿಗೆ ಸಂತಸವಾಗುತ್ತದೆ. ಈ ಬಾರಿ ನಾಲೆ ಅಭಿವೃದ್ಧಿ ನಡೆಯುತ್ತಿರುವುದರಿಂದ ನೀರು ಸರಾಗವಾಗಿ ಹರಿದು ಕಾವೇರಿ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರಿಗೆ ನೀರು ಸಿಗುತ್ತದೆ ಎಂಬ ಆಶಾಭಾವ ಮೂಡಿದೆ. ಕಬ್ಬು, ಭತ್ತ, ರಾಗಿ ಬೆಳೆಯಲು ಅನುಕೂಲವಾಗುತ್ತದೆ’ ಎಂದು ಮಳವಳ್ಳಿಯ ರೈತ ಕೆ.ಎಸ್. ದ್ಯಾಪೇಗೌಡ ಸಂತಸ ಹಂಚಿಕೊಂಡರು. </p>.<div><blockquote>ಕೆಆರ್ಎಸ್ ಅಣೆಕಟ್ಟೆಯ 90 ವರ್ಷಗಳ ಇತಿಹಾಸದಲ್ಲಿ 2024ರಲ್ಲಿ ಮೊದಲ ಬಾರಿಗೆ 154 ದಿನ ಅಣೆಕಟ್ಟೆ ಭರ್ತಿಯಾಗಿತ್ತು. ಈ ವರ್ಷ ಮೇ ತಿಂಗಳಲ್ಲೇ 100 ಅಡಿ ನೀರು ಬಂದಿರುವುದು ಸಂತಸ ತಂದಿದೆ</blockquote><span class="attribution"> – ಜಯಂತ್ ವಿ. ಕಾರ್ಯಪಾಲಕ ಎಂಜಿನಿಯರ್ ಕಾವೇರಿ ನೀರಾವರಿ ನಿಗಮ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>