<p><strong>ಮಂಡ್ಯ</strong>: ಕೆ.ಆರ್.ಪೇಟೆ ತಾಲ್ಲೂಕು ಮೂಡನಹಳ್ಳಿ ಗ್ರಾಮದ ತೋಟದ ಮನೆಗೆ ನುಗ್ಗಿದ್ದ ಚಿರತೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಯಶಸ್ವಿಯಾಗಿದ್ದಾರೆ.</p>.<p>ಗ್ರಾಮದ ನಿಂಗೇಗೌಡರ ತೋಟದ ಮನೆಗೆ ಬುಧವಾರ ತಡ ರಾತ್ರಿ ಚಿರತೆ ನುಗ್ಗಿತ್ತು. ಈ ವೇಳೆ ನಿಂಗೇಗೌಡ ಹಾಗೂ ಪತ್ನಿ ಮನೆಯಲ್ಲೇ ಮಲಗಿದ್ದರು. ಕೊಟ್ಟಿಗೆಯಲ್ಲಿದ್ದ ಮೇಕೆಗಳ ಮೇಲೆ ದಾಳಿ ನಡೆಸಿದಾಗ ನಿಂಗೇಗೌಡ ಹಾಗೂ ಪತ್ನಿ ಉಪಾಯದಿಂದ ಹೊರ ಬರಲು ಯತ್ನಿಸಿದ್ದರು, ಈ ವೇಳೆ ಚಿರತೆ ಅವರ ಮೇಲೂ ದಾಳಿ ಮಾಡಿತ್ತು. ಅದರೂ ಅವರು ಹೊರಗೆ ಓಡಿ ಬರುವಲ್ಲಿ ಯಶಸ್ವಿಯಾಗಿದ್ದರು.</p>.<p>ಹೊರಗೆ ಬಂದ ತಕ್ಷಣ ನಿಂಗೇಗೌಡರು ಮನೆಯ ಚಿಲಕ ಹಾಕಿ ಚಿರತೆಯನ್ನು ಕೂಡಿ ಹಾಕಿದ್ದರು. ಘಟನೆಯಲ್ಲಿ ನಿಂಗೇಗೌಡರ ಬೆನ್ನು, ಸೊಂಟಕ್ಕೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪತ್ನಿಗೂ ತರಚಿದ ಗಾಯಗಳಾಗಿವೆ.</p>.<p>ಮನೆಯೊಳಗಿದ್ದ 6 ಮೇಕೆಯಲ್ಲಿ ಒಂದನ್ನು ಚಿರತೆ ಕೊಂದು ಹಾಕಿದೆ. ಗುರುವಾರ ಮುಂಜಾನೆ ಮನೆ ಸುತ್ತಲೂ ಜನ ಸೇರಿಕೊಳ್ಳುತ್ತಿದ್ದಂತೆ ಬಂಧಿಯಾಗಿದ್ದ ಚಿರತೆ ಭಯದಿಂದ ಅಡಗಿ ಕುಳಿತಿತ್ತು.</p>.<p>ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಬರುವ ಲಸಿಕೆ ಹಾರಿಸಿ ಚಿರತೆ ಸೆರೆ ಹಿಡಿದರು.</p>.<p>ಚಿರತೆ ಅಡಗಿ ಕುಳಿತಿದ್ದ, ಅರಣ್ಯ ಇಲಾಖೆ ಸೆರೆಹಿಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ</strong>: ಕೆ.ಆರ್.ಪೇಟೆ ತಾಲ್ಲೂಕು ಮೂಡನಹಳ್ಳಿ ಗ್ರಾಮದ ತೋಟದ ಮನೆಗೆ ನುಗ್ಗಿದ್ದ ಚಿರತೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಯಶಸ್ವಿಯಾಗಿದ್ದಾರೆ.</p>.<p>ಗ್ರಾಮದ ನಿಂಗೇಗೌಡರ ತೋಟದ ಮನೆಗೆ ಬುಧವಾರ ತಡ ರಾತ್ರಿ ಚಿರತೆ ನುಗ್ಗಿತ್ತು. ಈ ವೇಳೆ ನಿಂಗೇಗೌಡ ಹಾಗೂ ಪತ್ನಿ ಮನೆಯಲ್ಲೇ ಮಲಗಿದ್ದರು. ಕೊಟ್ಟಿಗೆಯಲ್ಲಿದ್ದ ಮೇಕೆಗಳ ಮೇಲೆ ದಾಳಿ ನಡೆಸಿದಾಗ ನಿಂಗೇಗೌಡ ಹಾಗೂ ಪತ್ನಿ ಉಪಾಯದಿಂದ ಹೊರ ಬರಲು ಯತ್ನಿಸಿದ್ದರು, ಈ ವೇಳೆ ಚಿರತೆ ಅವರ ಮೇಲೂ ದಾಳಿ ಮಾಡಿತ್ತು. ಅದರೂ ಅವರು ಹೊರಗೆ ಓಡಿ ಬರುವಲ್ಲಿ ಯಶಸ್ವಿಯಾಗಿದ್ದರು.</p>.<p>ಹೊರಗೆ ಬಂದ ತಕ್ಷಣ ನಿಂಗೇಗೌಡರು ಮನೆಯ ಚಿಲಕ ಹಾಕಿ ಚಿರತೆಯನ್ನು ಕೂಡಿ ಹಾಕಿದ್ದರು. ಘಟನೆಯಲ್ಲಿ ನಿಂಗೇಗೌಡರ ಬೆನ್ನು, ಸೊಂಟಕ್ಕೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪತ್ನಿಗೂ ತರಚಿದ ಗಾಯಗಳಾಗಿವೆ.</p>.<p>ಮನೆಯೊಳಗಿದ್ದ 6 ಮೇಕೆಯಲ್ಲಿ ಒಂದನ್ನು ಚಿರತೆ ಕೊಂದು ಹಾಕಿದೆ. ಗುರುವಾರ ಮುಂಜಾನೆ ಮನೆ ಸುತ್ತಲೂ ಜನ ಸೇರಿಕೊಳ್ಳುತ್ತಿದ್ದಂತೆ ಬಂಧಿಯಾಗಿದ್ದ ಚಿರತೆ ಭಯದಿಂದ ಅಡಗಿ ಕುಳಿತಿತ್ತು.</p>.<p>ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಬರುವ ಲಸಿಕೆ ಹಾರಿಸಿ ಚಿರತೆ ಸೆರೆ ಹಿಡಿದರು.</p>.<p>ಚಿರತೆ ಅಡಗಿ ಕುಳಿತಿದ್ದ, ಅರಣ್ಯ ಇಲಾಖೆ ಸೆರೆಹಿಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>