ಇದು ₹18.5 ಕೋಟಿ ವೆಚ್ಚದ ಏತ ನೀರಾವರಿ ಯೋಜನೆಯಾಗಿದ್ದು, 2012–13ನೇ ಸಾಲಿನಲ್ಲಿ ಚಾಲನೆ ನೀಡಲಾಗಿತ್ತು. ಆದರೆ, ಕೆಲವು ಕಾರಣ ಗಳಿಂದ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ನೀರು ಬರುವ ಮಾರ್ಗದ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಡೆತಡೆ ನಿವಾರಿಸಲಾಗಿದೆ. ಈ ಯೋಜನೆಯ ಮೂಲಕ ತೂಬಿನಕೆರೆ, ಜಕ್ಕನಹಳ್ಳಿ, ಉರಮಾರ ಕಸಲಗೆರೆ, ಆಲಗೂಡು, ಎಲೆಚಾಕನಹಳ್ಳಿ, ಕಾಳೇನಹಳ್ಳಿ ಕೆರೆಗಳಿಗೆ ಲೋಕಪಾವನಿ ನದಿಯ ನೀರು ಹರಿದು ಬರಲಿದೆ. ಕೆರೆಗಳು ಭರ್ತಿಯಾದರೆ ಕೊಳವೆ ಬಾವಿಗಳ ಅಂತರ್ಜಲ ವೃದ್ಧಿಯಾಗಿ ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಬೇಸಿಗೆಯಲ್ಲಿ ಜನರು ಎದುರಿಸುತ್ತಿದ್ದ ನೀರಿನ ಬವಣೆ ನಿವಾರಣೆ ಯಾಗಲಿದೆ ಎಂದು ಅವರು ತಿಳಿಸಿದರು.