ಮದ್ದೂರು: ‘ನಿಜ ಹೇಳಬೇಕೆಂದರೆ ಕಾಂಗ್ರೆಸ್ ಪಕ್ಷದಿಂದಲೇ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರಿಗೆ ಅಪಮಾನವಾಗಿದೆ ’ಎಂದು ಛಲವಾದಿ ಮಹಾಸಭಾ ಅಧ್ಯಕ್ಷ ಕೆ. ಶಿವರಾಂ ತಿಳಿಸಿದರು.
ಪಟ್ಟಣದಲ್ಲಿ ಮಹಾಸಭಾದ ನೂತನ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ವಿಶ್ವಕ್ಕೆ ಮಾದರಿ ಸಂವಿಧಾನ ನೀಡಿದ ಅಂಬೇಡ್ಕರ್ ಅವರಿಗೆ ಘನತೆ ತರುವಂತೆ ಕಾಂಗ್ರೆಸ್ ಪಕ್ಷ ನಡೆದು ಕೊಂಡಿಲ್ಲ. ಆದರೆ ಕೇವಲ ಚುನಾವಣೆಗಲ್ಲಿ ಹಿಂದುಳಿದ ವರ್ಗಗಳ ಮತಕ್ಕಾಗಿ ಓಲೈಕೆ ಮಾಡಲು ಬರುತ್ತಾರೆ’ ಎಂದು ಆರೋಪಿಸಿದರು. ಬಿಜೆಪಿ ಅಧಿಕಾರಕ್ಕೆ ಬಂದಾಗ ಹಿಂದುಳಿದ ವರ್ಗಗಳ ಮೀಸಲಾತಿ ಹೆಚ್ಚಳ ಮಾಡಿದೆ. ಆದರೆ ಕಾಂಗ್ರೆಸ್ ಸ್ವಾರ್ಥ ರಾಜಕಾರಣಕ್ಕಾಗಿ ಈ ಜನರನ್ನು ಉಪಯೋಗಿಸುತ್ತಿದೆ ಎಂದರು.
ಹಿಂದುಳಿದ ಸಮುದಾಯಗಳನು ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಅಭಿವೃದ್ಧಿ ನಮ್ಮ ಉದ್ದೇಶಎಂದರು.
ತಾಲ್ಲೂಕು ಘಟಕದ ಗೌರವಾಧ್ಯಕ್ಷ ಕೃಷ್ಣ, ಅಧ್ಯಕ್ಷ ಶಂಕರ್, ಉಪಾಧ್ಯಕ್ಷ ಗುರುಲಿಂಗಯ್ಯ, ಸುಮಾವತಿ, ಪ್ರಧಾನ ಕಾರ್ಯದರ್ಶಿ ಯೋಗೇಶ್, ನಿರ್ದೇಶಕರಾದ ಹುಲಿಗೆರೆಪುರ ಮಹದೇವು, ನಾಗಭೂಷಣ್, ರಾಮಾನಂದ್, ಮಹಾದೇವಯ್ಯ, ಹೊಂಬಾಳಯ್ಯ ಇದ್ದರು.