‘ಮನೆ, ಕಚೇರಿ, ವಿವಿಧ ಇಲಾಖೆ, ಶಾಲೆ ಮತ್ತು ನಾಗರಿಕರು ತಾವು ಕೆಲಸ ಮಾಡುವ ಸ್ಥಳಗಳಲ್ಲಿ ನೀರು ನಿಲ್ಲದಂತೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಪ್ರಸ್ತುತ ಯಾವುದೇ ರೋಗ-ರುಜಿನ ಬಂದರೆ ವೈಯಕ್ತಿಕ ಎಚ್ಚರಿಕೆ ಮತ್ತು ಜಾಗೃತಿ ಹೊಂದಬೇಕು. ಮಳೆಗಾಲದಂತಹ ಸಂದರ್ಭದಲ್ಲಿ ನೀರು ಒಂದು ಕಡೆ ನಿಂತು ಅಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗಿ, ಚಿಕೂನ್ಗುನ್ಯಾ, ಮಲೇರಿಯಾದಂತಹ ಕಾಯಿಲೆಗಳು ಹರಡಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ವಯಸ್ಸಾದವರು, ಗರ್ಭಿಣಿಯರು ಮತ್ತು ಮಕ್ಕಳ ಮೇಲೆ ನಿಗಾ ಇಟ್ಟು ಅವರ ಆರೋಗ್ಯ ಕಾಪಾಡಬೇಕು’ ಎಂದರು.