<p><strong>ಶ್ರೀರಂಗಪಟ್ಟಣ:</strong> ಈಜಲು ಕಾವೇರಿ ನದಿಯಲ್ಲಿ ಇಳಿದ ವ್ಯಕ್ತಿಯೊಬ್ಬರು ಮುಳುಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮಹದೇವಪುರ ಬಳಿಯ ರಾಜಪರಮೇಶ್ವರಿ ಅಣೆಕಟ್ಟೆ ಬಳಿ ಶುಕ್ರವಾರ ಸಂಜೆ ನಡೆದಿದೆ.</p>.<p>ಹುಣಸೂರು ತಾಲ್ಲೂಕು ಗಾಗೇನಹಳ್ಳಿ ಗ್ರಾಮದ ವೀರಾಜಪ್ಪ ಅವರ ಪುತ್ರರಾದ ಮೈಸೂರು ವಿಕ್ರಾಂತ್ (ಜೆ.ಕೆ. ಟೈರ್ಸ್) ಕಾರ್ಖಾನೆ ನೌಕರ ಮಹೇಶ್ (35) ಮೃತಪಟ್ಟವರು.</p>.<p>ತಾಲ್ಲೂಕಿನ ತರೀಪುರ ಗ್ರಾಮದ ಸ್ನೇಹಿತನ ಮನೆಯ ಗೃಹಪ್ರವೇಶಕ್ಕೆ ಬಂದಿದ್ದ ಮಹೇಶ್, ಬಳಿಕ ಈಜಾಡಲು ಅಣೆಕಟ್ಟೆ ಬಳಿಗೆ ಬಂದಿದ್ದರು ಎಂದು ತಿಳಿದು ಬಂದಿದೆ.</p>.<p>ಶವವನ್ನು ಶನಿವಾರ ನದಿಯಿಂದ ಮೇಲೆ ತೆಗೆದು ವಾರಸುದಾರರಿಗೆ ಒಪ್ಪಿಸಲಾಗಿದೆ. ಸ್ಥಳಕ್ಕೆ ಪಿಎಸ್ಐ ವಿನೋದಕುಮಾರ್ ಎನ್, ಭೇಟಿ ನೀಡಿದ್ದರು. ಅರಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀರಂಗಪಟ್ಟಣ:</strong> ಈಜಲು ಕಾವೇರಿ ನದಿಯಲ್ಲಿ ಇಳಿದ ವ್ಯಕ್ತಿಯೊಬ್ಬರು ಮುಳುಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮಹದೇವಪುರ ಬಳಿಯ ರಾಜಪರಮೇಶ್ವರಿ ಅಣೆಕಟ್ಟೆ ಬಳಿ ಶುಕ್ರವಾರ ಸಂಜೆ ನಡೆದಿದೆ.</p>.<p>ಹುಣಸೂರು ತಾಲ್ಲೂಕು ಗಾಗೇನಹಳ್ಳಿ ಗ್ರಾಮದ ವೀರಾಜಪ್ಪ ಅವರ ಪುತ್ರರಾದ ಮೈಸೂರು ವಿಕ್ರಾಂತ್ (ಜೆ.ಕೆ. ಟೈರ್ಸ್) ಕಾರ್ಖಾನೆ ನೌಕರ ಮಹೇಶ್ (35) ಮೃತಪಟ್ಟವರು.</p>.<p>ತಾಲ್ಲೂಕಿನ ತರೀಪುರ ಗ್ರಾಮದ ಸ್ನೇಹಿತನ ಮನೆಯ ಗೃಹಪ್ರವೇಶಕ್ಕೆ ಬಂದಿದ್ದ ಮಹೇಶ್, ಬಳಿಕ ಈಜಾಡಲು ಅಣೆಕಟ್ಟೆ ಬಳಿಗೆ ಬಂದಿದ್ದರು ಎಂದು ತಿಳಿದು ಬಂದಿದೆ.</p>.<p>ಶವವನ್ನು ಶನಿವಾರ ನದಿಯಿಂದ ಮೇಲೆ ತೆಗೆದು ವಾರಸುದಾರರಿಗೆ ಒಪ್ಪಿಸಲಾಗಿದೆ. ಸ್ಥಳಕ್ಕೆ ಪಿಎಸ್ಐ ವಿನೋದಕುಮಾರ್ ಎನ್, ಭೇಟಿ ನೀಡಿದ್ದರು. ಅರಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>