ಈ ದಂಪತಿಯಲ್ಲಿ ಪತಿ ತನ್ನ ಪತ್ನಿ ಮುಡಿಗೆ ಮೈಸೂರು ಮಲ್ಲಿಗೆ ಹೂ ಮುಡಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಮಾದರಿಯಾಗಿರುವ ದಂಪತಿಯನ್ನು ಈ ಕಾರ್ಯಕ್ಕೆ ಆಯ್ಕೆ ಮಾಡಲಾಗಿದೆ. ಸಾಹಿತಿಗಳು, ಕಲಾವಿದರು, ವೈದ್ಯರು, ಸೈನಿಕರು, ಚಿತ್ರ ನಟ–ನಟಿಯರು, ನಿರ್ದೇಶಕರು ತಮ್ಮ ಪತ್ನಿಯರ ಮುಡಿಗೆ ಹೂ ಮುಡಿಸಿ ‘ಒಲವೇ ನಮ್ಮ ಬದುಕು’ ಎಂದು ಸಂದೇಶ ನೀಡಲಿದ್ದಾರೆ.