‘ಅಮೃತ ಮಹೋತ್ಸವದ ಲೆಕ್ಕ ಸಿಕ್ಕಿಲ್ಲ’
2015ರಲ್ಲಿ ಆಚರಿಸಿದ್ದ ‘ಅಮೃತ ಮಹೋತ್ಸವ’ಕ್ಕೆ ಮತ್ತು ಸ್ಮರಣ ಸಂಚಿಕೆಗೆ ಸರ್ಕಾರ ಎಷ್ಟು ಅನುದಾನ ನೀಡಿತ್ತು? ಸಾರ್ವಜನಿಕರಿಂದ ಎಷ್ಟು ದೇಣಿಗೆ ಸಂಗ್ರಹಿಸಲಾಗಿತ್ತು? ಖರ್ಚಾದ ಮತ್ತು ಉಳಿಕೆ ಹಣ ಎಷ್ಟು? ಇದ್ಯಾವ ಮಾಹಿತಿಯನ್ನೂ ಮಂಡ್ಯ ಜನರಿಗೆ ತಿಳಿಸಿಲ್ಲ. ಮಂಡ್ಯ ಜಿಲ್ಲೆಗೆ 75 ವರ್ಷ ತುಂಬಿದ ಸವಿನೆನಪಿನ ‘ಅಮೃತ ಭವನ’ ನಿರ್ಮಾಣಕ್ಕೆ ಇನ್ನಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮವಹಿಸಬೇಕು – ಪ್ರೊ.ಬಿ.ಜಯಪ್ರಕಾಶಗೌಡ ಅಧ್ಯಕ್ಷ ಕರ್ನಾಟಕ ಸಂಘ ಮಂಡ್ಯ