ಮೈಸೂರಿ ಕಾಲೇಜೊಂದರಲ್ಲಿ ದ್ವಿತೀಯ ಬಿ.ಎ ವ್ಯಾಸಂಗ ಮಾಡುತ್ತಿದ್ದ ಯುವತಿ ಮೇಲೆ 2015ರಲ್ಲಿ ಪಾಂಡವಪುರ ತಾಲ್ಲೂಕು, ಬೇಬಿಬೆಟ್ಟದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಯುವತಿಯನ್ನು ಪ್ರೀತಿಸುತ್ತಿದ್ದ ಕೀರ್ತಿ ಗೌಡ ಎಂಬಾತ ಆಕೆಯನ್ನು ಕೆಆರ್ಎಸ್ಗೆ ಕರೆದುಕೊಂಡು ಬಂದಿದ್ದ. ನಂತರ ಬೇಬಿಬೆಟ್ಟಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಸ್ಥಳಕ್ಕೆ ತನ್ನ ಸ್ನೇಹಿತರನ್ನು ಕರೆಸಿಕೊಂಡಿದ್ದ. ಕೀರ್ತಿಗೌಡ ನಂತರ ಕಿರಣ್ಗೌಡ, ಮೋಹನ್ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದರು.