ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ನಾರಾಯಣಗೌಡರ ಅದ್ಧೂರಿ ಜನ್ಮದಿನ; ಸಿಎಂ ಕಟೌಟ್‌ಗೆ ಕ್ಷೀರಾಭಿಷೇಕ

Last Updated 21 ಜುಲೈ 2021, 14:53 IST
ಅಕ್ಷರ ಗಾತ್ರ

ಮಂಡ್ಯ: ಸಚಿವ ಕೆ.ಸಿ.ನಾರಾಯಣಗೌಡರ 59ನೇ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ಬುಧವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಅವರ ಪುತ್ರ ಬಿ.ವೈ.ವಿಜಯೇಂದ್ರ ಹಾಗೂ ನಾರಾಯಣಗೌಡರ ಬೃಹತ್‌ ಕಟೌಟ್‌ಗಳಿಗೆ ಕ್ರೇನ್‌ ಮೂಲಕ ಕ್ಷೀರಾಭಿಷೇಕ ನಡೆಸಿದರು.

ನಾರಾಯಣಗೌಡ ಅವರು ಹುಟ್ಟೂರು ಕೈಗೋನಹಳ್ಳಿ ಗ್ರಾಮದಲ್ಲಿ ನಾರಾಯಣಗೌಡ ದಂಪತಿ, ಮಗಳು, ಅಳಿಯನನ್ನು ಎತ್ತಿನಗಾಡಿಯ ಮೂಲಕ ಮೆರವಣಿಗೆ ನಡೆಸಲಾಯಿತು. ಕೆ.ಆರ್.ಪೇಟೆ ಪಟ್ಟಣದ ಅವರ ನಿವಾಸದಲ್ಲಿ 59 ಕೆ.ಜಿ ತೂಕದ ಕೇಕ್‌ ಕತ್ತರಿಸಲಾಯಿತು. ಮನೆಯಲ್ಲಿ ನಡೆದ ವಿವಿಧ ಧಾರ್ಮಿಕ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಸಚಿವರು ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ ₹ 51 ಸಾವಿರ ಮಂಗಳನಿಧಿ ಸಮರ್ಪಿಸಿದರು.

ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಅಳವಡಿಸಲಾಗಿದ್ದ 20 ಅಡಿ ಎತ್ತರದ ಯಡಿಯೂರಪ್ಪ, ವಿಜಯೇಂದ್ರ, ನಾರಾಯಣಗೌಡರ ಬೃಹತ್‌ ಕಟೌಟ್‌ಗಳಿಗೆ ಕ್ರೇನ್ ಮೂಲಕ ಮೇಲಕ್ಕೆ ತೆರಳಿ ಹಾರ ಹಾಕಿ, ಹಾಲಿನ ಅಭಿಷೇಕ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT