ಈ ವೇಳೆ ಮಾತನಾಡಿದ ಆಶಿಕೆ ಮೌಲ ಸಮಿತಿ ಅಧ್ಯಕ್ಷ ಜಾವೀದ್ ಬಾಯ್, ‘ಮೊಹರಂ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಇಮಾಂ ಹಸನ್ ಮತ್ತು ಇಮಾಂ ಹುಸೇನ್ ಅವರ ದುರಂತ ಕತೆಯನ್ನು ಆಧರಿಸಿದ್ದಾಗಿದೆ. ಇಸ್ಲಾಂ ಧರ್ಮವನ್ನು ಬೆಂಬಲಿಸಿದ ಈ ಇಬ್ಬರು ಯುವಕರ ಅಕಾಲಿಕ ಮರಣವನ್ನು ಸ್ಮರಿಸಲು, ಮೊಹರಂ ಆಚರಿಸಲಾಗುತ್ತದೆ. ಇದು ತ್ಯಾಗ ಬಲಿದಾನದ ಸಂಕೇತವಾಗಿದೆ. ಮೊಹರಂ ಹಬ್ಬದಲ್ಲಿ ಮುಸಲ್ಮಾನರು ಉಪವಾಸವನ್ನು ಆಚರಿಸುತ್ತಾರೆ ಮತ್ತು ಅತ್ಯಂತ ಶಾಂತಿಯುತ ಜೀವವನ್ನು ನಡೆಸುತ್ತಾರೆ. ಇಮಾಂ ಹುಸೇನ್ ಅವರ ಸ್ಮರಣೆಯಿಂದ ದು:ಖಿತರಾಗಿ ದೇವರನ್ನು ಪ್ರಾರ್ಥಿಸುತ್ತಾರೆ’ ಎಂದು ಹೇಳಿದರು.