ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತ್ಯಕ್ರಿಯೆಗೆ ವಿರೋಧ: ಶವ ವಾಪಸ್‌

Last Updated 13 ಮೇ 2020, 18:58 IST
ಅಕ್ಷರ ಗಾತ್ರ

ಭಾರತೀನಗರ (ಮಂಡ್ಯ): ಅಂತ್ಯ ಸಂಸ್ಕಾರ ನಡೆಸಲೆಂದು, ಸಮೀಪದ ಎಸ್‌.ಐ ಹೊನ್ನಲಗೆರೆ ಗ್ರಾಮಕ್ಕೆ ಬೆಂಗಳೂರಿನಿಂದ ತಂದಿದ್ದ ಮಹಿಳೆಯೊಬ್ಬರ ಮೃತದೇಹ ವನ್ನು ಗ್ರಾಮಸ್ಥರು ಬುಧವಾರ ವಾಪಸ್‌ ಕಳುಹಿಸಿದ್ದಾರೆ.

ಬೆಂಗಳೂರಿನ ಕೆಂಗೇರಿಯ ಆಸ್ಪತ್ರೆಯೊಂದರಲ್ಲಿ ಹೃದಯಾಘಾತದಿಂದ ಮೃತಪಟ್ಟ ಗೌರಮ್ಮ (68) ಅವರ ಶವವನ್ನು, ಪೊಲೀಸರ ಕಣ್ಣುತಪ್ಪಿಸಿ ಬುಧವಾರ ಸಂಜೆ ಗ್ರಾಮಕ್ಕೆ ತರಲಾಗಿತ್ತು. ಶವ ತರುತ್ತಿರುವ ಸುದ್ದಿ ತಿಳಿದ ಗ್ರಾಮಸ್ಥರು, ಭಾರತೀನಗರ ಪೊಲೀಸರಿಗೆ ವಿಷಯ ತಿಳಿಸಿದರು. ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದು, ಮೃತದೇಹವನ್ನು ವಾಪಸ್‌ ಬೆಂಗಳೂರಿಗೇ ಕಳುಹಿಸಿದ್ದಾರೆ.

ಆಸ್ಪತ್ರೆಯ ಪ್ರಮಾಣಪತ್ರವೊಂದನ್ನು ಬಿಟ್ಟರೆ, ಜಿಲ್ಲಾಧಿಕಾರಿಯಿಂದಾಗಲೀ, ಪೊಲೀಸ್‌ ಅಧಿಕಾರಿಗಳಿಂದಾಗಲೀ ಅನುಮತಿ ಪಡೆದಿರಲಿಲ್ಲ. ಜೊತೆಗೆ ಕೊವಿಡ್‌ ಪರೀಕ್ಷೆಯನ್ನೂ ಮಾಡಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT