ಬೆಂಗಳೂರಿನ ಕೆಂಗೇರಿಯ ಆಸ್ಪತ್ರೆಯೊಂದರಲ್ಲಿ ಹೃದಯಾಘಾತದಿಂದ ಮೃತಪಟ್ಟ ಗೌರಮ್ಮ (68) ಅವರ ಶವವನ್ನು, ಪೊಲೀಸರ ಕಣ್ಣುತಪ್ಪಿಸಿ ಬುಧವಾರ ಸಂಜೆ ಗ್ರಾಮಕ್ಕೆ ತರಲಾಗಿತ್ತು. ಶವ ತರುತ್ತಿರುವ ಸುದ್ದಿ ತಿಳಿದ ಗ್ರಾಮಸ್ಥರು, ಭಾರತೀನಗರ ಪೊಲೀಸರಿಗೆ ವಿಷಯ ತಿಳಿಸಿದರು. ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದು, ಮೃತದೇಹವನ್ನು ವಾಪಸ್ ಬೆಂಗಳೂರಿಗೇ ಕಳುಹಿಸಿದ್ದಾರೆ.