ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಡವಪುರ : ಲಾರಿಗೆ ಬೆದರಿ ಹಳ್ಳಕ್ಕೆ ಬಿದ್ದು ಗಾಡಿ ಎತ್ತು ಸಾವು

Published 29 ಮೇ 2023, 16:31 IST
Last Updated 29 ಮೇ 2023, 16:31 IST
ಅಕ್ಷರ ಗಾತ್ರ

ಪಾಂಡವಪುರ: ತಾಲ್ಲೂಕಿನ ಚಿಕ್ಕಮರಳಿ ಗೇಟ್ ಬಳಿ ಲಾರಿ ಚಾಲಕ ಮಾಡಿದ ಹಾರನ್‌ ಹಾಗೂ ಎಂಜಿನ್‌ ರೇಸ್‌ ಶಬ್ದಕ್ಕೆ ಬೆದರಿದ ಎತ್ತಿನ ಗಾಡಿ ಅಡ್ಡದಿಡ್ಡಿ ಚಲಿಸಿ ಹಳ್ಳಕ್ಕೆ ಬಿದ್ದ ಪರಿಣಾಮ ಒಂದು ಎತ್ತು ಸ್ಥಳದಲ್ಲೇ ಮೃತಪಟ್ಟಿದೆ.

ಗ್ರಾಮದ ರೈತ ಮಹಾದೇವು ಅವರು ಚಿಕ್ಕಾಡೆ ಗ್ರಾಮದಿಂದ ಚಿಕ್ಕಮರಳಿ ಗ್ರಾಮಕ್ಕೆ ಮಂಡ್ಯ–ಪಾಂಡವಪುರ ಮುಖ್ಯ ರಸ್ತೆಯ ಮೂಲಕ 2 ಟನ್ ಕಬ್ಬು ತುಂಬಿಕೊಂಡು ಹೋಗುತ್ತಿದ್ದರು. ಲಾರಿಯ ಹಾರನ್‌ ಶಬ್ದಕ್ಕೆ ಎತ್ತುಗಳು ಗಾಬರಿಗೊಂಡಿ ದುರಂತ ಸಂಭವಿಸಿದೆ.

ಶಾಸಕ ಭೇಟಿ: ಘಟನಾ ಸ್ಥಳಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎತ್ತು ಕಳೆದುಕೊಂಡ ರೈತನಿಗೆ ಸರ್ಕಾರದಿಂದ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT