ಪುನೀತ್ ಅವರ ಸಮಾಧಿಯ ಮೃತ್ತಿಕೆ (ಮಣ್ಣು)ಯ ಕುಡಿಕೆ ಇಟ್ಟು ಪುಣ್ಯ ತಿಥಿಯ ವಿಧಿ, ವಿಧಾನಗಳನ್ನು ವಿನೋದ್ರಾಜ್ ಪೂರೈಸಿದರು. ತಿಲ ತರ್ಪಣ, ನಾರಾಯಣಬಲಿ, ಪುಣ್ಯಾಹ, ಗಣಪತಿ ಪೂಜೆ ಮತ್ತು ಹೋಮ ದೇವರಾಜ ದೀಕ್ಷಿತ್ ಮಾರ್ಗದರ್ಶನದಲ್ಲಿ ನಡೆಯಿತು. ಮೃತ್ತಿಕೆಯನ್ನು ಪೂಜಿಸಿದ ಬಳಿಕ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು. ಹಿರಿಯ ನಟಿ ಲೀಲಾವತಿ ಕಾರಿನಲ್ಲೇ ಕುಳಿತು ವೀಕ್ಷಿಸಿದರು. ವಿನೋದ್ರಾಜ್ ಕುಟುಂಬದ ಹತ್ತಿರದ ಬಂಧುಗಳು ಹಾಜರಿದ್ದರು.