ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನೀತ್‌ ಹೆಸರಿನಲ್ಲಿ ವಿನೋದ್‌ರಾಜ್‌ ಪಿಂಡ ಪ್ರದಾನ

Last Updated 9 ನವೆಂಬರ್ 2021, 19:44 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ದಿವಂಗತ ನಟ ಪುನೀತ್‌ ರಾಜಕುಮಾರ್‌ ಪುಣ್ಯ ತಿಥಿಯ ಪ್ರಯುಕ್ತ ಹಿರಿಯ ನಟ ವಿನೋದ್‌ ರಾಜ್ ಸೋಮವಾರ ಸಮೀಪದ ಕಾವೇರಿ ಸಂಗಮದ ಕಾವೇರಿ ನದಿ ದಡದ ಲೋಕೇಶ್‌ ಅವರ ತೋಟದ ಕುಟೀರ ದಲ್ಲಿ ಪಿಂಡ ಪ್ರದಾನ ಮಾಡಿದರು.

ಪುನೀತ್‌ ಅವರ ಸಮಾಧಿಯ ಮೃತ್ತಿಕೆ (ಮಣ್ಣು)ಯ ಕುಡಿಕೆ ಇಟ್ಟು ಪುಣ್ಯ ತಿಥಿಯ ವಿಧಿ, ವಿಧಾನಗಳನ್ನು ವಿನೋದ್‌ರಾಜ್‌ ಪೂರೈಸಿದರು. ತಿಲ ತರ್ಪಣ, ನಾರಾಯಣಬಲಿ, ಪುಣ್ಯಾಹ, ಗಣಪತಿ ಪೂಜೆ ಮತ್ತು ಹೋಮ ದೇವರಾಜ ದೀಕ್ಷಿತ್‌ ಮಾರ್ಗದರ್ಶನದಲ್ಲಿ ನಡೆಯಿತು. ಮೃತ್ತಿಕೆಯನ್ನು ಪೂಜಿಸಿದ ಬಳಿಕ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು. ಹಿರಿಯ ನಟಿ ಲೀಲಾವತಿ ಕಾರಿನಲ್ಲೇ ಕುಳಿತು ವೀಕ್ಷಿಸಿದರು. ವಿನೋದ್‌ರಾಜ್‌ ಕುಟುಂಬದ ಹತ್ತಿರದ ಬಂಧುಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT