ಮಂಡ್ಯ: ನಗರದ ವಿವಿಧೆಡೆ ಒಬ್ಬಂಟಿಯಾಗಿ ಓಡಾಡುವ ಒಂಟಿ ಮಹಿಳೆಯರ ಮೈಸ್ಪರ್ಶಿಸಿ , ಬಟ್ಟೆ ಎಳೆದು ಕಿರುಕುಳ ನೀಡುತ್ತಿದ್ದ ಕಿಡಿಗೇಡಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ತಾಲ್ಲೂಕಿನ ಕೆರಗೋಡು ಗ್ರಾಮದ ಚಂದ್ರಶೇಖರ ಆರಾಧ್ಯ ಬಂಧಿತ ಆರೋಪಿ. ಕಾವೇರಿ ನಗರ, ಅನ್ನಪೂರ್ಣೇಶ್ವರಿ ನಗರ, ಕುವೆಂಪು ನಗರ ಸೇರಿ ವಿವಿಧೆಡೆ ಬೈಕ್ನಲ್ಲಿ ತೆರಳುವಾಗ ಒಂಟಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ. ಈತನನ್ನು ಜನರೇ ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈತನ ವರ್ತನೆಯ ಬಗ್ಗೆ ವಿವಿಧ ಸಂಘಟನೆಗ ಸದಸ್ಯರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯೊಂದಿಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ‘ಮಂಡ್ಯದಲ್ಲಿ ಬೀದಿ ಕಾಮಣ್ಣರ ಕಾಟ’ ವರದಿ ಈಚೆಗೆ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು.