ಮೇಲುಕೋಟೆ: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಅವರ ಪತ್ನಿ ಸಾಧ್ನಾ ಮೇಲುಕೋಟೆಗೆ ಬುಧವಾರ ಭೇಟಿ ನೀಡಿ ಬೆಟ್ಟದೊಡೆಯ ಯೋಗಾನರಸಿಂಹಸ್ವಾಮಿಗೆ ಅಭಿಷೇಕ ಮಾಡಿಸಿದರು.
ಬೆಳಿಗ್ಗೆ 11 ಗಂಟೆ ಸುಮಾರಿಗೆ ಕುಟುಂಬ ಸಮೇತರಾಗಿ ಬಂದ ಚೌಹಾಣ್, ಚೆಲುವನಾರಾಯಣ ಸ್ವಾಮಿಯ ದರ್ಶನ ಪಡೆದರು. ತಿರುನಾರಾಯಣಸ್ವಾಮಿ ಮತ್ತು ಯದುಗಿರಿ ನಾಯಕಿ ಅಮ್ಮನವರು, ರಾಮಾನುಜರ ದರ್ಶನ ಪಡೆದರು.
‘ಇಲ್ಲಿ ನಡೆಯುವ ಪ್ರಮುಖ ಉತ್ಸವ ಅಥವಾ ಮಹೋತ್ಸವಗಳಲ್ಲಿ ಸೇವೆ ಮಾಡುವ ಮೂಲಕ ಚೆಲುವನಾರಾಯಣನ ಕೈಂಕರ್ಯದಲ್ಲಿ ಭಾಗಿಯಾಗುವ ಬಯಕೆ ಇದೆ. ರಾಮಾನುಜರ ದಿವ್ಯಕ್ಷೇತ್ರದ ದರ್ಶನದಿಂದ ಪುನೀತ ಭಾವ ಉಂಟಾಗಿದೆ’ ಎಂದು ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದರು
ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ನಂಜೇಗೌಡ, ಅರ್ಚಕರಾದ ವಿದ್ವಾನ್ ಆನಂದಾಳ್ವಾರ್, ಸ್ವಾಮಿ ಸನ್ನಿಧಿಯ ಪರಿಚಾರಕ ಪಾರ್ಥಸಾರಥಿ, ಅರ್ಚಕ ನಾರಾಯಣಭಟ್ಟರ್, ಚಿನ್ನಜೀಯರ್ ಮಠದ ಹರಿಕೃಷ್ಣ ಇದ್ದರು.