<p><strong>ಶ್ರೀರಂಗಪಟ್ಟಣ: </strong>ಜೀವ ವಿರೋಧಿ ಕ್ರೌರ್ಯದ ಸಂಗತಿಗಳನ್ನು ವೈಭವೀ ಕರಿಸುವ ಪುರಾಣದ ಕತೆಗಳು ಮತ್ತು ದೇವರ ಹೆಸರಿನಲ್ಲಿ ಶೂದ್ರ ವರ್ಗದ ಜನರನ್ನು ಶತ ಶತಮಾನಗಳಿಂದ ವಂಚಿಸಲಾಗುತ್ತಿದೆ ಎಂದು ಹಿರಿಯ ರಂಗಕರ್ಮಿ ಎಚ್.ಜನಾರ್ದನ್ (ಜನ್ನಿ) ವಿಷಾದ ವ್ಯಕ್ತಪಡಿಸಿದರು.</p>.<p>ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಕವಿ ಡಾ.ಸಿದ್ದಲಿಂಗಯ್ಯ ಅವರ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಡಾ.ಸಿದ್ದಲಿಂಗಯ್ಯ ಅವರು ತಮ್ಮ ಕವಿತೆಗಳ ಮೂಲಕ ಜಾಗೃತಿ ಮೂಡಿಸಿದರು. ಸಿದ್ದಲಿಂಗಯ್ಯ ಅವರದ್ದು ನೈಜ ಕಾವ್ಯ. ಅನ್ಯಾಯ, ಅಸಮಾನತೆ, ಜಾತೀಯತೆ, ಕ್ರೌರ್ಯ, ಮೌಢ್ಯ ಇರುವವರೆಗೆ ಸಿದ್ದಲಿಂಗಯ್ಯ ಜೀವಂತ ಇರುತ್ತಾರೆ ಎಂದರು.</p>.<p>ಅಂಬೇಡ್ಕರ್ ಚಿಂತನೆಗಳ ಮೂಸೆ ಯಲ್ಲಿ ಡಾ.ಸಿದ್ದಲಿಂಗಯ್ಯ ಅವರು ಕಾವ್ಯ ಚಳವಳಿ ಕಟ್ಟಿದರು. ಒಂದು ಕಾಲದಲ್ಲಿ ದಲಿತ ಚಳವಳಿ ವಿಧಾನಸೌಧವನ್ನೇ ನಡುಗಿಸುವಷ್ಟು ಗಟ್ಟಿಯಾಗಿತ್ತು. ಅದನ್ನು ಸಹಿಸದ ರಾಜಕಾರಣಿಗಳು ಈ ಸಮಾಜವನ್ನು ಎಡ, ಬಲ ಎಂದು ಒಡೆದು ಹೋಳು ಮಾಡಿದರು ಎಂದರು.</p>.<p class="Subhead">ಕಣ್ಣೀರೇ ಕಾವ್ಯವಾಯಿತು: ವಿಮ ರ್ಶಕ ಡಾ.ಎಸ್.ತುಕಾರಾಂ ಮಾತ ನಾಡಿ, ಡಾ.ಸಿದ್ದಲಿಂಗಯ್ಯ ಕಾವ್ಯದ ಮೂಲಕ ಜನರ ನೋವನ್ನು ಪರಿಣಾ ಮಕಾರಿಯಾಗಿ ತೋರಿಸಿದರು. 70ರ ದಶಕದಲ್ಲಿ ಬಡತನ ಮತ್ತು ಪ್ರತಿಭೆಯ ಸಂಗಮವಾಗಿದ್ದ ಸಿದ್ದಲಿಂಗಯ್ಯ ಅವರ ಸಾಹಿತ್ಯದಲ್ಲಿ ವರ್ತಮಾನದ ಸಂಕಟ ಗಳಿಗೆ ಪರಿಹಾರವಿದೆ ಎಂದು ಹೇಳಿದರು.</p>.<p>ಅಧ್ಯಕ್ಷತೆ ವಹಿಸಿದ್ದ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಗುರುಪ್ರಸಾದ್ ಕೆರಗೋಡು, ಸಿದ್ದಲಿಂಗಯ್ಯ ಅವರ ಕಾವ್ಯದ ಆಶಯ ಈಡೇರಬೇಕು ಎಂದರು.</p>.<p>ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್, ಗಾಂಧಿವಾದಿ ಡಾ.ಬಿ.ಸುಜಯಕುಮಾರ್, ಡಿವೈಎಸ್ಪಿ ಸಂದೇಶ್ಕುಮಾರ್ ಮಾತನಾಡಿದರು.</p>.<p>ಡಾ.ಸಿದ್ದಲಿಂಗಯ್ಯ ಹೆಸರಿನಲ್ಲಿ ಅಧ್ಯಯನ ಪೀಠ ಮತ್ತು ಸ್ಮಾರಕ ಸ್ಥಾಪನೆಗೆ ಪ್ರಯತ್ನ ನಡೆಯುತ್ತಿದ್ದು, ಸಹಕರಿಸಬೇಕು ಎಂದು ಸಿದ್ದಲಿಂಗಯ್ಯ ಅವರ ಪುತ್ರಿ ಡಾ.ಮಾನಸ ಕೋರಿದರು.</p>.<p>ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಶ್ಗೌಡ, ರಮಾ ಸಿದ್ದಲಿಂಗಯ್ಯ, ಗಂಜಾಂ ರವಿಚಂದ್ರ, ಕೆಎಎಸ್ ಅಧಿಕಾರಿ ಲಾಲಿಪಾಳ್ಯ ಶಿವಣ್ಣ, ಕುಬೇರಪ್ಪ, ಕ್ಯಾತನಹಳ್ಳಿ ಚಂದ್ರಣ್ಣ, ಪಾಂಡು, ವೀಣಾಕುಮಾರಿ, ಮಹದೇವಸ್ವಾಮಿ ಇದ್ದರು.</p>.<p class="Subhead"><strong>ಕಾವ್ಯ ನಮನ: </strong>ಡಾ.ಸಿದ್ದಲಿಂಗಯ್ಯ ಅವರಿಗೆ ಕವಿಗಳಾದ ಅನಾರ್ಕಲಿ ಸಲೀಂ, ಮಜ್ಜಿಗೆಪುರ ಶಿವರಾಂ, ಶರ್ಮಿಳಾ ಅಪ್ಪಾಜಿ, ವೇದವತಿ, ಪುಟ್ಟು ಬೆಳಗೊಳ, ಗಾನಸುಮಾ ಪಟ್ಟಸೋಮನಹಳ್ಳಿ ಇತರರು ಕಾವ್ಯ ನಮನ ಸಲ್ಲಿಸಿದರು. ಯರಹಳ್ಳಿ ಪುಟ್ಟಸ್ವಾಮಿ, ಹರಳಹಳ್ಳಿ ಗೋವಿಂದರಾಜು ಅವರಿಂದ ಗೀತ ನಮನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀರಂಗಪಟ್ಟಣ: </strong>ಜೀವ ವಿರೋಧಿ ಕ್ರೌರ್ಯದ ಸಂಗತಿಗಳನ್ನು ವೈಭವೀ ಕರಿಸುವ ಪುರಾಣದ ಕತೆಗಳು ಮತ್ತು ದೇವರ ಹೆಸರಿನಲ್ಲಿ ಶೂದ್ರ ವರ್ಗದ ಜನರನ್ನು ಶತ ಶತಮಾನಗಳಿಂದ ವಂಚಿಸಲಾಗುತ್ತಿದೆ ಎಂದು ಹಿರಿಯ ರಂಗಕರ್ಮಿ ಎಚ್.ಜನಾರ್ದನ್ (ಜನ್ನಿ) ವಿಷಾದ ವ್ಯಕ್ತಪಡಿಸಿದರು.</p>.<p>ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಕವಿ ಡಾ.ಸಿದ್ದಲಿಂಗಯ್ಯ ಅವರ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಡಾ.ಸಿದ್ದಲಿಂಗಯ್ಯ ಅವರು ತಮ್ಮ ಕವಿತೆಗಳ ಮೂಲಕ ಜಾಗೃತಿ ಮೂಡಿಸಿದರು. ಸಿದ್ದಲಿಂಗಯ್ಯ ಅವರದ್ದು ನೈಜ ಕಾವ್ಯ. ಅನ್ಯಾಯ, ಅಸಮಾನತೆ, ಜಾತೀಯತೆ, ಕ್ರೌರ್ಯ, ಮೌಢ್ಯ ಇರುವವರೆಗೆ ಸಿದ್ದಲಿಂಗಯ್ಯ ಜೀವಂತ ಇರುತ್ತಾರೆ ಎಂದರು.</p>.<p>ಅಂಬೇಡ್ಕರ್ ಚಿಂತನೆಗಳ ಮೂಸೆ ಯಲ್ಲಿ ಡಾ.ಸಿದ್ದಲಿಂಗಯ್ಯ ಅವರು ಕಾವ್ಯ ಚಳವಳಿ ಕಟ್ಟಿದರು. ಒಂದು ಕಾಲದಲ್ಲಿ ದಲಿತ ಚಳವಳಿ ವಿಧಾನಸೌಧವನ್ನೇ ನಡುಗಿಸುವಷ್ಟು ಗಟ್ಟಿಯಾಗಿತ್ತು. ಅದನ್ನು ಸಹಿಸದ ರಾಜಕಾರಣಿಗಳು ಈ ಸಮಾಜವನ್ನು ಎಡ, ಬಲ ಎಂದು ಒಡೆದು ಹೋಳು ಮಾಡಿದರು ಎಂದರು.</p>.<p class="Subhead">ಕಣ್ಣೀರೇ ಕಾವ್ಯವಾಯಿತು: ವಿಮ ರ್ಶಕ ಡಾ.ಎಸ್.ತುಕಾರಾಂ ಮಾತ ನಾಡಿ, ಡಾ.ಸಿದ್ದಲಿಂಗಯ್ಯ ಕಾವ್ಯದ ಮೂಲಕ ಜನರ ನೋವನ್ನು ಪರಿಣಾ ಮಕಾರಿಯಾಗಿ ತೋರಿಸಿದರು. 70ರ ದಶಕದಲ್ಲಿ ಬಡತನ ಮತ್ತು ಪ್ರತಿಭೆಯ ಸಂಗಮವಾಗಿದ್ದ ಸಿದ್ದಲಿಂಗಯ್ಯ ಅವರ ಸಾಹಿತ್ಯದಲ್ಲಿ ವರ್ತಮಾನದ ಸಂಕಟ ಗಳಿಗೆ ಪರಿಹಾರವಿದೆ ಎಂದು ಹೇಳಿದರು.</p>.<p>ಅಧ್ಯಕ್ಷತೆ ವಹಿಸಿದ್ದ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಗುರುಪ್ರಸಾದ್ ಕೆರಗೋಡು, ಸಿದ್ದಲಿಂಗಯ್ಯ ಅವರ ಕಾವ್ಯದ ಆಶಯ ಈಡೇರಬೇಕು ಎಂದರು.</p>.<p>ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್, ಗಾಂಧಿವಾದಿ ಡಾ.ಬಿ.ಸುಜಯಕುಮಾರ್, ಡಿವೈಎಸ್ಪಿ ಸಂದೇಶ್ಕುಮಾರ್ ಮಾತನಾಡಿದರು.</p>.<p>ಡಾ.ಸಿದ್ದಲಿಂಗಯ್ಯ ಹೆಸರಿನಲ್ಲಿ ಅಧ್ಯಯನ ಪೀಠ ಮತ್ತು ಸ್ಮಾರಕ ಸ್ಥಾಪನೆಗೆ ಪ್ರಯತ್ನ ನಡೆಯುತ್ತಿದ್ದು, ಸಹಕರಿಸಬೇಕು ಎಂದು ಸಿದ್ದಲಿಂಗಯ್ಯ ಅವರ ಪುತ್ರಿ ಡಾ.ಮಾನಸ ಕೋರಿದರು.</p>.<p>ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಶ್ಗೌಡ, ರಮಾ ಸಿದ್ದಲಿಂಗಯ್ಯ, ಗಂಜಾಂ ರವಿಚಂದ್ರ, ಕೆಎಎಸ್ ಅಧಿಕಾರಿ ಲಾಲಿಪಾಳ್ಯ ಶಿವಣ್ಣ, ಕುಬೇರಪ್ಪ, ಕ್ಯಾತನಹಳ್ಳಿ ಚಂದ್ರಣ್ಣ, ಪಾಂಡು, ವೀಣಾಕುಮಾರಿ, ಮಹದೇವಸ್ವಾಮಿ ಇದ್ದರು.</p>.<p class="Subhead"><strong>ಕಾವ್ಯ ನಮನ: </strong>ಡಾ.ಸಿದ್ದಲಿಂಗಯ್ಯ ಅವರಿಗೆ ಕವಿಗಳಾದ ಅನಾರ್ಕಲಿ ಸಲೀಂ, ಮಜ್ಜಿಗೆಪುರ ಶಿವರಾಂ, ಶರ್ಮಿಳಾ ಅಪ್ಪಾಜಿ, ವೇದವತಿ, ಪುಟ್ಟು ಬೆಳಗೊಳ, ಗಾನಸುಮಾ ಪಟ್ಟಸೋಮನಹಳ್ಳಿ ಇತರರು ಕಾವ್ಯ ನಮನ ಸಲ್ಲಿಸಿದರು. ಯರಹಳ್ಳಿ ಪುಟ್ಟಸ್ವಾಮಿ, ಹರಳಹಳ್ಳಿ ಗೋವಿಂದರಾಜು ಅವರಿಂದ ಗೀತ ನಮನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>