ಜಾತ್ರೆಗೆ 3 ದಿನಗಳು ಬಾಕಿ ಇವೆ. ಭಕ್ತರು ವಿವಿಧ ಕಡೆಗಳಿಂದ ಬರುತ್ತಾರೆ. ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲ ದರ್ಶನಕ್ಕೂ ಮುನ್ನ ಇಲ್ಲಿನ ಪುಷ್ಕರಣಿಯಲ್ಲಿ ಸ್ನಾನ ಮಾಡಿ ಹೋಗುವುದು ಸಂಪ್ರದಾಯ. ಸರ್ಪಸುತ್ತು, ಚರ್ಮದೋಷದಂತಹ ಕಾಯಿಲೆಗಳು ಗುಣಮುಖವಾಗಲಿದೆ ಎಂಬ ನಂಬಿಕೆ ಇದೆ. ಹಿಂದೂ, ಮುಸ್ಲಿಂ, ಕ್ರೈಸ್ತರು ಎನ್ನದೆ ಸರ್ವಧರ್ಮದವರು ಸ್ನಾನ ಮಾಡುತ್ತಾರೆ. ಆದರೆ, ನೀರಿಲ್ಲದೆ ಭಕ್ತರಿಗೆ ತೊಂದರೆ ಆಗಲಿದೆ.