ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಕ್ರೀದ್‌: ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಶಾಸಕ ರಮೇಶ ಬಂಡಿಸಿದ್ದೇಗೌಡ

Published 29 ಜೂನ್ 2023, 14:06 IST
Last Updated 29 ಜೂನ್ 2023, 14:06 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ:  ಬಕ್ರೀದ್‌ ಪ್ರಯುಕ್ತ ಪಟ್ಟಣದ ಈದ್ಗಾ ಮೈದಾನದಲ್ಲಿ ಗುರುವಾರ ನಡೆದ ಮುಸ್ಲಿಮರ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ಪಾಲ್ಗೊಂಡರು.

ಶಾಸಕರು ಮುಸ್ಲಿಂ ಸಮುದಾಯದವರಿಗೆ ಶುಭಾಶಯ ಕೋರಿದರು. ರಮೇಶ ಬಂಡಿಸಿದ್ದೇಗೌಡ ಅವರನ್ನು ಸನ್ಮಾನಿಸಲಾಯಿತು. ಧಾರ್ಮಿಕ ಮುಖಂಡರು ಪವಿತ್ರ ಕುರಾನ್‌ ವಾಕ್ಯಗಳನ್ನು ಪಠಿಸಿದರು.  ಮುಖಂಡರಾದ ಮಹಮದ್‌ ರವೂಫ್‌, ಮಜರ್‌ ಪಾಷ, ಮುಜೀಬ್‌, ಗಂಜಾಂ ಸಲೀಂ ಇದ್ದರು.

ಪಟ್ಟಣದ ಟಿಪ್ಪು ಸುಲ್ತಾನ್‌ (ಜಾಮಿಯಾ) ಮಸೀದಿಯಲ್ಲಿ  ಸಾಮೂಹಿಕ ಪ್ರಾರ್ಥನೆ  ನಡೆಯಿತು. ಕುರಾನ್‌ ಪಠನ ನಡೆಯಿತು.  ಮಕ್ಕಳು ಕೂಡ ಪಾಲ್ಗೊಂಡಿದ್ದರು.  ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ತಾಲ್ಲೂಕಿನ ಕೆಆರ್‌ಎಸ್‌, ಹೆಬ್ಬಾಡಿಹುಂಡಿ, ಮೇಳಾಪುರ, ಮಹದೇವಪುರ, ಅರಕೆರೆ, ಕೊಡಿಯಾಲ, ಕೆ.ಶೆಟ್ಟಹಳ್ಳಿ, ಪಾಲಹಳ್ಳಿ ಗ್ರಾಮಗಳಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT