ಪಟ್ಟಣದ ಟಿಪ್ಪು ಸುಲ್ತಾನ್ (ಜಾಮಿಯಾ) ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಕುರಾನ್ ಪಠನ ನಡೆಯಿತು. ಮಕ್ಕಳು ಕೂಡ ಪಾಲ್ಗೊಂಡಿದ್ದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ತಾಲ್ಲೂಕಿನ ಕೆಆರ್ಎಸ್, ಹೆಬ್ಬಾಡಿಹುಂಡಿ, ಮೇಳಾಪುರ, ಮಹದೇವಪುರ, ಅರಕೆರೆ, ಕೊಡಿಯಾಲ, ಕೆ.ಶೆಟ್ಟಹಳ್ಳಿ, ಪಾಲಹಳ್ಳಿ ಗ್ರಾಮಗಳಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.