‘ಮುಚ್ಚಲ್ಪಟ್ಟಿರುವ ಗರ್ಭಗುಡಿ ತೆರೆಯಬೇಕು, ಬಾವಿ, ಕಲ್ಯಾಣಿಯಲ್ಲಿ ಧಾರ್ಮಿಕ ಚಟುವಟಿಕೆಗಳು ನಡೆಯಬೇಕು. ಒಳಾಂಗಣ ಹಾಗೂ ಹೊರಾಂಗಣದಲ್ಲಿ ವಿಡಿಯೊ ಸರ್ವೆ, ಉತ್ಖನನ ನಡೆಯಬೇಕು’ ಎಂದು ಎಂದು ವಿಎಚ್ಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಚಿಕ್ಕಬಳ್ಳಿ ಬಾಲು, ಸಂಯೋಜಕ ಹೊಸ ಆನಂದೂರು ಬಸವರಾಜು, ಉಪಾಧ್ಯಕ್ಷ ಬಲರಾಮೇಗೌಡ ತಿಳಿಸಿದ್ದಾರೆ.