<p><strong>ಕಿಕ್ಕೇರಿ:</strong> ಮದ್ಯವ್ಯಸನ ಬಿಟ್ಟು ನವಜೀವನಕ್ಕೆ ಕಾಲಿಟ್ಟಿರುವ ಬದುಕು ಹಸನಾಗಿರಲಿ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಜಿಲ್ಲಾಧ್ಯಕ್ಷ ಆರ್ಟಿಒ ಮಲ್ಲಿಕಾರ್ಜುನ ಹೇಳಿದರು.</p>.<p>ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬ್ರಹ್ಮೇಶ್ವರ ದೇಗುಲ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ’ನವಜೀವನೋತ್ಸವ ಹಾಗೂ ಬ್ರಹ್ಮೇಶ್ವರಸ್ವಾಮಿ’ಗೆ ಬಿಲ್ವಾರ್ಚನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p><p>‘ಸಂಸ್ಥೆಯ ಮದ್ಯವರ್ಜನೆ ಶಿಬಿರ ಹಮ್ಮಿಕೊಂಡು ಯೋಗ, ಧ್ಯಾನ, ಭಜನೆಗಳಿಂದ ಮನಪರಿವರ್ತಿಸಿ ಹೊಸಮನುಷ್ಯರನ್ನಾಗಿ ಮಾಡುತ್ತಿದೆ’ ಎಂದರು.</p><p>ಸಾಹಿತಿ ಮಾರೇನಹಳ್ಳಿ ಲೋಕೇಶ್ ನವಜೀವನೋತ್ಸವಕ್ಕೆ ಕಾಲಿಟ್ಟವರಿಗೆ ಕವಿತೆ ಮೂಲಕ ವಿಶೇಷ ಉಪನ್ಯಾಸ ನೀಡಿದರು.</p><p>ಯೋಜನೆ ಜಿಲ್ಲಾ ನಿರ್ದೇಶಕ ಎ. ಯೋಗೇಶ್ ಮಾತನಾಡಿದರು. ಕಿಕ್ಕೇರಿ ಯೋಜನಾಧಿಕಾರಿ ಪ್ರಸಾದ್ ಮಾತನಾಡಿ, ಮದ್ಯವರ್ಜಿಸಿದ ನವಜೀವನದಾರರಿಗೆ ಸಂಸ್ಥೆ ಸದಾ ಮಾರ್ಗದರ್ಶಕರಾಗಿ ನಿಲ್ಲುವುದಾಗಿ ನುಡಿದರು.</p><p>ಶಿಬಿರದಿಂದ ಮದ್ಯವರ್ಜಿಸಿದ ಹತ್ತಾರು ಮಂದಿ ಕುಡಿತದಿಂದ ಹಾಳಾಗಿದ್ದ ತಮ್ಮ ಬದುಕಿನ ಚಿತ್ರಣ ತಿಳಿಸಿಕೊಟ್ಟರು.</p><p>ಬ್ರಹ್ಮೇಶ್ವರಸ್ವಾಮಿಗೆ ಬಿಲ್ವಾರ್ಚನೆ, ಅನ್ನಪ್ರಸಾದ ಏರ್ಪಡಿಸಲಾಗಿತ್ತು. ವಿವಿಧ ಕ್ರೀಡೆಯಲ್ಲಿ ವಿಜೇತರಾದ ನವಜೀವನದಾರಿಗಳಿಗೆ ಬಹುಮಾನ ವಿತರಿಸಲಾಯಿತು.</p><p>ಜನಜಾಗೃತಿ ವೇದಿಕೆ ಮೈಸೂರು ಪ್ರಾದೇಶಿಕ ಯೋಜನಾಧಿಕಾರಿ ಮುಖೇಶ್, ಜನಜಾಗೃತಿ ವೇದಿಕೆ ಉಪಾಧ್ಯಕ್ಷೆ ನಳಿನಿ, ಸಾಹಿತಿ ಮಾರೇನಹಳ್ಳಿ ಲೋಕೇಶ್, ಸದಸ್ಯರಾದ ಸುನೀತಾ, ಮೊಟ್ಟೆ ಮಂಜು, ಶಿವರಾಂ, ಕುಮಾರ್, ರಂಗೇಗೌಡ, ವಿಮಲಾ, ಮಣಿ, ಮೇಲ್ವಿಚಾರಿಕೆ ಯಶೋಧಾ, ನವಜೀವನ ಸದಸ್ಯರು, ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಿಕ್ಕೇರಿ:</strong> ಮದ್ಯವ್ಯಸನ ಬಿಟ್ಟು ನವಜೀವನಕ್ಕೆ ಕಾಲಿಟ್ಟಿರುವ ಬದುಕು ಹಸನಾಗಿರಲಿ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಜಿಲ್ಲಾಧ್ಯಕ್ಷ ಆರ್ಟಿಒ ಮಲ್ಲಿಕಾರ್ಜುನ ಹೇಳಿದರು.</p>.<p>ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬ್ರಹ್ಮೇಶ್ವರ ದೇಗುಲ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ’ನವಜೀವನೋತ್ಸವ ಹಾಗೂ ಬ್ರಹ್ಮೇಶ್ವರಸ್ವಾಮಿ’ಗೆ ಬಿಲ್ವಾರ್ಚನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p><p>‘ಸಂಸ್ಥೆಯ ಮದ್ಯವರ್ಜನೆ ಶಿಬಿರ ಹಮ್ಮಿಕೊಂಡು ಯೋಗ, ಧ್ಯಾನ, ಭಜನೆಗಳಿಂದ ಮನಪರಿವರ್ತಿಸಿ ಹೊಸಮನುಷ್ಯರನ್ನಾಗಿ ಮಾಡುತ್ತಿದೆ’ ಎಂದರು.</p><p>ಸಾಹಿತಿ ಮಾರೇನಹಳ್ಳಿ ಲೋಕೇಶ್ ನವಜೀವನೋತ್ಸವಕ್ಕೆ ಕಾಲಿಟ್ಟವರಿಗೆ ಕವಿತೆ ಮೂಲಕ ವಿಶೇಷ ಉಪನ್ಯಾಸ ನೀಡಿದರು.</p><p>ಯೋಜನೆ ಜಿಲ್ಲಾ ನಿರ್ದೇಶಕ ಎ. ಯೋಗೇಶ್ ಮಾತನಾಡಿದರು. ಕಿಕ್ಕೇರಿ ಯೋಜನಾಧಿಕಾರಿ ಪ್ರಸಾದ್ ಮಾತನಾಡಿ, ಮದ್ಯವರ್ಜಿಸಿದ ನವಜೀವನದಾರರಿಗೆ ಸಂಸ್ಥೆ ಸದಾ ಮಾರ್ಗದರ್ಶಕರಾಗಿ ನಿಲ್ಲುವುದಾಗಿ ನುಡಿದರು.</p><p>ಶಿಬಿರದಿಂದ ಮದ್ಯವರ್ಜಿಸಿದ ಹತ್ತಾರು ಮಂದಿ ಕುಡಿತದಿಂದ ಹಾಳಾಗಿದ್ದ ತಮ್ಮ ಬದುಕಿನ ಚಿತ್ರಣ ತಿಳಿಸಿಕೊಟ್ಟರು.</p><p>ಬ್ರಹ್ಮೇಶ್ವರಸ್ವಾಮಿಗೆ ಬಿಲ್ವಾರ್ಚನೆ, ಅನ್ನಪ್ರಸಾದ ಏರ್ಪಡಿಸಲಾಗಿತ್ತು. ವಿವಿಧ ಕ್ರೀಡೆಯಲ್ಲಿ ವಿಜೇತರಾದ ನವಜೀವನದಾರಿಗಳಿಗೆ ಬಹುಮಾನ ವಿತರಿಸಲಾಯಿತು.</p><p>ಜನಜಾಗೃತಿ ವೇದಿಕೆ ಮೈಸೂರು ಪ್ರಾದೇಶಿಕ ಯೋಜನಾಧಿಕಾರಿ ಮುಖೇಶ್, ಜನಜಾಗೃತಿ ವೇದಿಕೆ ಉಪಾಧ್ಯಕ್ಷೆ ನಳಿನಿ, ಸಾಹಿತಿ ಮಾರೇನಹಳ್ಳಿ ಲೋಕೇಶ್, ಸದಸ್ಯರಾದ ಸುನೀತಾ, ಮೊಟ್ಟೆ ಮಂಜು, ಶಿವರಾಂ, ಕುಮಾರ್, ರಂಗೇಗೌಡ, ವಿಮಲಾ, ಮಣಿ, ಮೇಲ್ವಿಚಾರಿಕೆ ಯಶೋಧಾ, ನವಜೀವನ ಸದಸ್ಯರು, ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>