<p><strong>ಕೆ.ಆರ್.ಪೇಟೆ: </strong>ಕೊರೊನಾ ಸಂಕಷ್ಟದ ಕಾಲದಲ್ಲಿ ಗ್ರಾಮಾಂತರ ಪ್ರದೇಶದ ಜನರನ್ನು ಸೋಂಕಿನಿಂದ ಕಾಪಾಡಿ ಆರೋಗ್ಯ ಶಿಕ್ಷಣ ನೀಡುತ್ತಿರುವ ಕೊರೊನಾ ವಾರಿಯರ್ಗಳಿಗೆ ತಾಲ್ಲೂಕಿನ ಭೂವರಾಹನಾಥ ಸ್ವಾಮಿ ದೇವಸ್ಥಾನ ಟ್ರಸ್ಟ್ ನೆರವಾಗುತ್ತಿದೆ.</p>.<p>ವೈದ್ಯಕೀಯ ಉಪಕರಣಗಳಾದ ರಕ್ತದೊತ್ತಡ, ಆಕ್ಸಿಜನ್ ಮಟ್ಟ, ಪಲ್ಸ್ ಪ್ರಮಾಣ, ಜ್ವರದ ವಿವರ ತಿಳಿಯಲು ಅಗತ್ಯ ಇರುವ ಉಪಕರಣಗಳನ್ನು 230 ಆಶಾ ಕಾರ್ಯಕರ್ತೆಯರು ಸೇರಿ 250 ಕ್ಕೂ ಅಧಿಕ ಮಂದಿಗೆ ಟ್ರಸ್ಟ್ ನೀಡುತ್ತಿದೆ.</p>.<p>ಆಶಾ, ಅಂಗನವಾಡಿ ಮತ್ತು ಶಿಕ್ಷಕರು ಮನೆ ಬಾಗಿಲಿಗೆ ತೆರಳಿ ಕೊರೊನಾ ನಿಯಂತ್ರಣದಲ್ಲಿ ಕೆಲಸ ಮಾಡುತ್ತಿದ್ದರೂ ಇಂಥ ಉಪಕರಣಗಳ ಕೊರತೆ ಇತ್ತು. ಜನರ ಆರೋಗ್ಯದ ಬಗ್ಗೆ ನಿಖರ ಮಾಹಿತಿ ನೀಡಲು ಸಾಧ್ಯವಾಗದೆ ತೊಂದರೆ ಪಡುತ್ತಿರುವುದನ್ನು ಗಮನಿಸಿದ ದೇವಸ್ಥಾನ ಆಡಳಿತ ಮಂಡಳಿ ಈ ಸಾಧನಗಳನ್ನು ತಾಲ್ಲೂಕು ಆಡಳಿತಕ್ಕೆ ಹಸ್ತಾಂತರಿಸಿದೆ.</p>.<p>ಮೈಸೂರಿನ ಪರಕಾಲಮಠದ ನಿಯಂತ್ರಣದಲ್ಲಿರುವ ತಾಲ್ಲೂಕಿನ ಭೂವರಾಹನಾಥ ಸ್ವಾಮಿ ದೇವಸ್ಥಾನ ಆಡಳಿತ ಮಂಡಳಿ ಕಳೆದ ವರ್ಷ ಮೂರು ತಿಂಗಳು ಅನ್ನ ದಾಸೋಹ ಮಾಡಿತ್ತು. ಈ ಬಾರಿ ಕೊರೊನಾ ಸಂಕಷ್ಟದ ತೀವ್ರತೆ ಅರಿತುಕೊಂಡ ದೇವಸ್ಥಾನದ ಆಡಳಿತ ಮಂಡಳಿ, ಮೈಸೂರಿನ ಪರಕಾಲ ಮಠದ ಭಕ್ತರ ನೆರವಿನಿಂದ ಜಿಲ್ಲೆಗೆ ಈ ಕೊಡುಗೆ ನೀಡಲು ನಿಶ್ಚಯಿಸಿದೆ. ಪ್ರಾಥಮಿಕ ಹಂತವಾಗಿ ತಾಲ್ಲೂಕಿನ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ನೀಡಿದೆ. ದೇವಸ್ಥಾನದ ಕೊಡುಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಅವರೂ ಪ್ರಶಂಶಿಸಿದ್ದಾರೆ.</p>.<p>ಈ ಸಾಧನಗಳ ಸೆಟ್ಗೆ ₹ 5 ಸಾವಿರದಂತೆ ಒಟ್ಟು ₹ 15 ಲಕ್ಷ ಮೌಲ್ಯದ ವೈದ್ಯಕೀಯ ಸಾಧನಗಳನ್ನು ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗುತ್ತಿದೆ. ದಾನಿಗಳು ಸಹಕರಿಸಿದರೆ ಇಡೀ ಜಿಲ್ಲೆಗೆ ಈ ಕಾರ್ಯ ವಿಸ್ತರಿಸಲಿದ್ದೇವೆ ಎನ್ನುತ್ತಾರೆ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸ ರಾಘವನ್.</p>.<p>ದೇವಸ್ಥಾನದವರು ಕಳೆದ ಬಾರಿ ಅನ್ನದಾಸೋಹ ಮಾಡಿದ್ದರು. ಈ ಬಾರಿ ವೈದ್ಯಕೀಯ ಸಾಧನಗಳನ್ನು ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿರುವುದು ಉತ್ತಮ ಕಾರ್ಯ ಎಂದು ತಹಶೀಲ್ದಾರ್ ಎಂ.ಶಿವಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂಧನ್ ತಿಳಿಸಿದರು.</p>.<p>ದೇವಸ್ಥಾನದವರು ಪರಿಕರ ನೀಡಿರು ವುದರಿಂದ ನಮ್ಮ ಕೆಲಸಕ್ಕೆ ಬಲ ಬಂದಿದೆ ಎಂದು ಆಶಾ ಕಾರ್ಯಕರ್ತೆಯರು ಖುಷಿ ಪಡುತ್ತಾರೆ.</p>.<p>ದಾನಿಗಳಾದ ಟ್ರಸ್ಟಿ ಶ್ರೀನಿವಾಸ ರಾಘವನ್, ವಿತರಕರಾದ ಪ್ರತಾಪ್, ಸಿದ್ದೇಶ್, ನಿರ್ವಾಹಕ ಬೋರೇಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಆರ್.ಪೇಟೆ: </strong>ಕೊರೊನಾ ಸಂಕಷ್ಟದ ಕಾಲದಲ್ಲಿ ಗ್ರಾಮಾಂತರ ಪ್ರದೇಶದ ಜನರನ್ನು ಸೋಂಕಿನಿಂದ ಕಾಪಾಡಿ ಆರೋಗ್ಯ ಶಿಕ್ಷಣ ನೀಡುತ್ತಿರುವ ಕೊರೊನಾ ವಾರಿಯರ್ಗಳಿಗೆ ತಾಲ್ಲೂಕಿನ ಭೂವರಾಹನಾಥ ಸ್ವಾಮಿ ದೇವಸ್ಥಾನ ಟ್ರಸ್ಟ್ ನೆರವಾಗುತ್ತಿದೆ.</p>.<p>ವೈದ್ಯಕೀಯ ಉಪಕರಣಗಳಾದ ರಕ್ತದೊತ್ತಡ, ಆಕ್ಸಿಜನ್ ಮಟ್ಟ, ಪಲ್ಸ್ ಪ್ರಮಾಣ, ಜ್ವರದ ವಿವರ ತಿಳಿಯಲು ಅಗತ್ಯ ಇರುವ ಉಪಕರಣಗಳನ್ನು 230 ಆಶಾ ಕಾರ್ಯಕರ್ತೆಯರು ಸೇರಿ 250 ಕ್ಕೂ ಅಧಿಕ ಮಂದಿಗೆ ಟ್ರಸ್ಟ್ ನೀಡುತ್ತಿದೆ.</p>.<p>ಆಶಾ, ಅಂಗನವಾಡಿ ಮತ್ತು ಶಿಕ್ಷಕರು ಮನೆ ಬಾಗಿಲಿಗೆ ತೆರಳಿ ಕೊರೊನಾ ನಿಯಂತ್ರಣದಲ್ಲಿ ಕೆಲಸ ಮಾಡುತ್ತಿದ್ದರೂ ಇಂಥ ಉಪಕರಣಗಳ ಕೊರತೆ ಇತ್ತು. ಜನರ ಆರೋಗ್ಯದ ಬಗ್ಗೆ ನಿಖರ ಮಾಹಿತಿ ನೀಡಲು ಸಾಧ್ಯವಾಗದೆ ತೊಂದರೆ ಪಡುತ್ತಿರುವುದನ್ನು ಗಮನಿಸಿದ ದೇವಸ್ಥಾನ ಆಡಳಿತ ಮಂಡಳಿ ಈ ಸಾಧನಗಳನ್ನು ತಾಲ್ಲೂಕು ಆಡಳಿತಕ್ಕೆ ಹಸ್ತಾಂತರಿಸಿದೆ.</p>.<p>ಮೈಸೂರಿನ ಪರಕಾಲಮಠದ ನಿಯಂತ್ರಣದಲ್ಲಿರುವ ತಾಲ್ಲೂಕಿನ ಭೂವರಾಹನಾಥ ಸ್ವಾಮಿ ದೇವಸ್ಥಾನ ಆಡಳಿತ ಮಂಡಳಿ ಕಳೆದ ವರ್ಷ ಮೂರು ತಿಂಗಳು ಅನ್ನ ದಾಸೋಹ ಮಾಡಿತ್ತು. ಈ ಬಾರಿ ಕೊರೊನಾ ಸಂಕಷ್ಟದ ತೀವ್ರತೆ ಅರಿತುಕೊಂಡ ದೇವಸ್ಥಾನದ ಆಡಳಿತ ಮಂಡಳಿ, ಮೈಸೂರಿನ ಪರಕಾಲ ಮಠದ ಭಕ್ತರ ನೆರವಿನಿಂದ ಜಿಲ್ಲೆಗೆ ಈ ಕೊಡುಗೆ ನೀಡಲು ನಿಶ್ಚಯಿಸಿದೆ. ಪ್ರಾಥಮಿಕ ಹಂತವಾಗಿ ತಾಲ್ಲೂಕಿನ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ನೀಡಿದೆ. ದೇವಸ್ಥಾನದ ಕೊಡುಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಅವರೂ ಪ್ರಶಂಶಿಸಿದ್ದಾರೆ.</p>.<p>ಈ ಸಾಧನಗಳ ಸೆಟ್ಗೆ ₹ 5 ಸಾವಿರದಂತೆ ಒಟ್ಟು ₹ 15 ಲಕ್ಷ ಮೌಲ್ಯದ ವೈದ್ಯಕೀಯ ಸಾಧನಗಳನ್ನು ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗುತ್ತಿದೆ. ದಾನಿಗಳು ಸಹಕರಿಸಿದರೆ ಇಡೀ ಜಿಲ್ಲೆಗೆ ಈ ಕಾರ್ಯ ವಿಸ್ತರಿಸಲಿದ್ದೇವೆ ಎನ್ನುತ್ತಾರೆ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸ ರಾಘವನ್.</p>.<p>ದೇವಸ್ಥಾನದವರು ಕಳೆದ ಬಾರಿ ಅನ್ನದಾಸೋಹ ಮಾಡಿದ್ದರು. ಈ ಬಾರಿ ವೈದ್ಯಕೀಯ ಸಾಧನಗಳನ್ನು ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿರುವುದು ಉತ್ತಮ ಕಾರ್ಯ ಎಂದು ತಹಶೀಲ್ದಾರ್ ಎಂ.ಶಿವಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂಧನ್ ತಿಳಿಸಿದರು.</p>.<p>ದೇವಸ್ಥಾನದವರು ಪರಿಕರ ನೀಡಿರು ವುದರಿಂದ ನಮ್ಮ ಕೆಲಸಕ್ಕೆ ಬಲ ಬಂದಿದೆ ಎಂದು ಆಶಾ ಕಾರ್ಯಕರ್ತೆಯರು ಖುಷಿ ಪಡುತ್ತಾರೆ.</p>.<p>ದಾನಿಗಳಾದ ಟ್ರಸ್ಟಿ ಶ್ರೀನಿವಾಸ ರಾಘವನ್, ವಿತರಕರಾದ ಪ್ರತಾಪ್, ಸಿದ್ದೇಶ್, ನಿರ್ವಾಹಕ ಬೋರೇಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>