ಶುಕ್ರವಾರ, 25 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯ: ರೈತ ಸಂಘ ಆತಂಕ

Published : 2 ಜುಲೈ 2024, 2:45 IST
Last Updated : 2 ಜುಲೈ 2024, 2:45 IST
ಫಾಲೋ ಮಾಡಿ
Comments
ಜುಲೈ 3ರಂದು ‘ಪರೀಕ್ಷಾರ್ಥ ಸ್ಫೋಟ’ ಸರ್ಕಾರದ ಕ್ರಮಕ್ಕೆ ಹಿಂದಿನಿಂದಲೂ ತೀವ್ರ ವಿರೋಧ ಗಣಿಗಾರಿಕೆ ನಿಷೇಧಿಸಿ ನೀಡಿದ ವರದಿ ಜಾರಿಗೆ ಒತ್ತಾಯ
ಬೇಬಿ ಬೆಟ್ಟದಲ್ಲಿ ‘ಪರೀಕ್ಷಾರ್ಥ ಸ್ಫೋಟ’ ನಡೆಸಿ ವರದಿ ನೀಡುವಂತೆ ಹೈಕೋರ್ಟ್‌ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಜುಲೈ 3ರಂದು ತಜ್ಞರ ತಂಡದಿಂದ ಪ್ರಯೋಗಕ್ಕೆ ಸಿದ್ಧತೆ ನಡೆಸಿದ್ದೇವೆ
ಎಚ್‌.ಎಲ್‌. ನಾಗರಾಜ್‌ ಹೆಚ್ಚುವರಿ ಜಿಲ್ಲಾಧಿಕಾರಿ ಮಂಡ್ಯ
‘ಟ್ರಯಲ್‌ ಬ್ಲಾಸ್ಟ್‌’ ವಿರೋಧಿಸಿ ‘ಗಣಿಗಾರಿಕೆ ನಿಲ್ಲಿಸಿ ಕನ್ನಂಬಾಡಿ ರಕ್ಷಿಸಿ’ ಎಂಬ ಧ್ಯೇಯದೊಂದಿಗೆ ಕೆ.ಆರ್‌.ಎಸ್‌. ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ಇದೇ ಜುಲೈ 2ರಂದು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ
ಎ.ಎಲ್‌. ಕೆಂಪೂಗೌಡ ಜಿಲ್ಲಾ ಘಟಕದ ಅಧ್ಯಕ್ಷ ರೈತಸಂಘ
‘ವಿಚಾರಣೆಗೂ ಮುನ್ನವೇ ಸ್ಫೋಟಕ್ಕೆ ಸಂಚು’
‘2007ರಿಂದ ಬೇಬಿಬೆಟ್ಟದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಆರಂಭವಾಯಿತು. 2017ರಲ್ಲಿ ಜಿಲ್ಲಾಧಿಕಾರಿ ಮತ್ತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ ನಂತರ 2018ರಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿತು. 48 ಕ್ರಷರ್‌ ಮಾಲೀಕರ ವಿರುದ್ಧ ಪಾಂಡವಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಕ್ರಷರ್‌ ಮಾಲೀಕರು ಸಲ್ಲಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಜುಲೈ 5ರಂದು ನಡೆಯಬೇಕಿದೆ. ಅದಕ್ಕೂ ಮುನ್ನವೇ ತರಾತುರಿಯಲ್ಲಿ ‘ಪರೀಕ್ಷಾರ್ಥ ಸ್ಫೋಟ’ ನಡೆಸಲು ಮುಂದಾಗಿರುವುದು ಏತಕ್ಕೆ?’ ಈ ಹಿಂದೆ ನಡೆದ ಗಣಿಗಾರಿಕೆಯಿಂದ ಕೆ.ಆರ್‌.ಎಸ್‌. ಅಣೆಕಟ್ಟೆಯ ಸೈಜುಗಲ್ಲುಗಳು ಉದುರಿಬಿದ್ದಿದ್ದವು. ಇಷ್ಟಾದರೂ ಅಧಿಕಾರಿಗಳು ಬುದ್ಧಿ ಕಲಿತಿಲ್ಲ’ ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ಆಕ್ರೋಶ ವ್ಯಕ್ತಪಡಿಸಿದರು.
‘ಶಿಲಾಪದರ ಕಂಪಿಸಿದರೆ ಅಣೆಕಟ್ಟೆಗೆ ಧಕ್ಕೆ’
ಶಿಲಾ ಪದರದ ಮೇಲೆ ಕೆ.ಆರ್‌.ಎಸ್‌ ಅಣೆಕಟ್ಟೆ ನಿಂತಿದೆ. ಗಣಿಗಾರಿಕೆಯಿಂದ ಶಿಲಾ ಪದರ ಕಂಪಿಸುತ್ತದೆ. ಕಂಪನದ ಅಲೆಗಳು ಅಣೆಕಟ್ಟೆಗೆ ಧಕ್ಕೆ ತರುತ್ತವೆ. ‘ಟ್ರಯಲ್‌ ಬ್ಲಾಸ್ಟ್‌’ ನಡೆಸಿ ಅಣೆಕಟ್ಟೆಗೆ ಧಕ್ಕೆ ಇಲ್ಲ ಎಂದು ಸಾಬೀತು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಗಣಿಗಾರಿಕೆಗೆ ಅನುಮತಿ ಸಿಕ್ಕರೆ ನೂರಾರು ಅಡಿ ಆಳದ ಕಂದಕ ತೋಡುತ್ತಾರೆ. ಈಗ ಅಣೆಕಟ್ಟೆಯಲ್ಲಿ 96 ಅಡಿ ನೀರಿದ್ದು ‘ಹೈಡ್ರಾಲಿಕ್‌ ಪ್ರೆಷರ್‌’ ಇದೆ. ಈ ಸಮಯದಲ್ಲಿ ಪರೀಕ್ಞಾರ್ಥ ಸ್ಫೋಟ ನಡೆಸುವುದು ಸರಿಯಲ್ಲ. ಇದೊಂದು ಕಣ್ಣೊರೆಸುವ ತಂತ್ರ’ ಎಂದು ನಿವೃತ್ತ ಹಿರಿಯ ಭೂವಿಜ್ಞಾನಿ ಎಚ್‌.ಟಿ. ಬಸವರಾಜಪ್ಪ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT