‘ನಾರಾಯಣಗೌಡ ಸಜ್ಜನ, ಅಪರೂಪದ ರಾಜಕಾರಣಿ. ನಾನು ಬಹಳ ಜನ ಶಾಸಕರು, ಮುಖಂಡರನ್ನು ನೋಡಿದ್ದೇನೆ, ಆದರೆ ರಾಜಕಾರಣದಲ್ಲಿ ಇಂತಹ ಪ್ರಾಮಾಣಿಕ ವ್ಯಕ್ತಿತ್ವವುಳ್ಳವರು ಸಿಗುವುದು ಕಷ್ಟ. ಇಂತಹ ವ್ಯಕ್ತಿಯನ್ನು ನೀವು ಶಾಸಕರಾಗಿ ಆಯ್ಕೆ ಮಾಡಿದ್ದಿರಿ. ಆದರೆ ಬೇರೆಬೇರೆ ಕಾರಣಗಳಿಂದ ವ್ಯತ್ಯಾಸ ಉಂಟಾಗಿದೆ. ಮುಂದಿನ ದಿನಗಳಲ್ಲಿ ಇವರಿಗೆ ನಿಮ್ಮೆಲ್ಲರ ಆಶೀರ್ವಾದ ಬೇಕು. ಮುಂದೆ 25 ಸಾವಿರ ಜನರನ್ನು ಸೇರಿಸಿ, ನಾರಾಯಣಗೌಡರ ಜೊತೆ ಮತ್ತೆ ಬರುತ್ತೇನೆ’ ಎಂದರು.