<p><strong>ನಾಗಮಂಗಲ: </strong>ಮಾಂಸದಂಗಡಿ ಮಾಲೀಕನೊಬ್ಬ ಸಾಲ ನೀಡಿ, ಮರುಪಾವತಿ ಆಗುವವರೆಗೂ ಯುವಕನೊಬ್ಬನನ್ನು ಜೀತಕ್ಕೆ ಇಟ್ಟುಕೊಂಡಿದ್ದ ಪ್ರಕರಣ ಬೆಳ್ಳೂರು ಕ್ರಾಸ್ನಲ್ಲಿ ಬೆಳಕಿಗೆ ಬಂದಿದೆ.</p>.<p>ಈ ಕುರಿತು ಸಾರ್ವಜನಿಕರಿಂದ ದೂರು ಬಂದ ಪರಿಣಾಮ ತಹಶೀಲ್ದಾರ್ ಕುಂಞಿ ಅಹಮದ್ ಬುಧವಾರ ಯುವಕನನ್ನು ರಕ್ಷಿಸಿ, ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.</p>.<p>ಬೆಳ್ಳೂರು ಕ್ರಾಸ್ನ ಶೇಖರ್ ಮಟನ್ ಸ್ಟಾಲ್ ಮಾಲೀಕ ಶೇಖರ್ 23 ವರ್ಷದ ಯುವಕನೊಬ್ಬನಿಗೆ ₹ 40 ಸಾವಿರ ಸಾಲ ನೀಡಿದ್ದ. ಜೀತ ಮಾಡಿ ಸಾಲ ತೀರಿಸುವಂತೆ ಯುವಕನನನ್ನು ಅಂಗಡಿಯಲ್ಲೇ ಇಟ್ಟುಕೊಂಡಿದ್ದ. ಕಳೆದ 8 ವರ್ಷಗಳಿಂದ ಕೆಲಸ ಮಾಡಿದ್ದರೂ ಸಾಲ ತೀರಿರಲಿಲ್ಲ. ಈ ಕುರಿತು ಜೀವಜ್ಯೋತಿ ಸಂಸ್ಥೆಯ ಸದಸ್ಯರು ತಹಶೀಲ್ದಾರ್ಗೆ ದೂರು ಕೊಟ್ಟಿದ್ದರು.</p>.<p>ತಹಶೀಲ್ದಾರ್ ಕುಂಞಿ ಅಹಮದ್ ನೇತೃತ್ವದಲ್ಲಿ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಅನಂತರಾಜು, ಕಾರ್ಮಿಕ ನಿರೀಕ್ಷಕ ಮಹೇಶ್, ಸಮಾಜ ಕಲ್ಯಾಣ ಇಲಾಖೆಯ ರಾಜಶೇಖರ್, ಬೆಳ್ಳೂರು ಪಪಂ ಮುಖ್ಯಾಧಿಕಾರಿ ಮಂಜುನಾಥ್ ದಾಳಿ ನಡೆಸಿ ಯುವಕನನ್ನು ರಕ್ಷಿಸಿದರು. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಮಂಗಲ: </strong>ಮಾಂಸದಂಗಡಿ ಮಾಲೀಕನೊಬ್ಬ ಸಾಲ ನೀಡಿ, ಮರುಪಾವತಿ ಆಗುವವರೆಗೂ ಯುವಕನೊಬ್ಬನನ್ನು ಜೀತಕ್ಕೆ ಇಟ್ಟುಕೊಂಡಿದ್ದ ಪ್ರಕರಣ ಬೆಳ್ಳೂರು ಕ್ರಾಸ್ನಲ್ಲಿ ಬೆಳಕಿಗೆ ಬಂದಿದೆ.</p>.<p>ಈ ಕುರಿತು ಸಾರ್ವಜನಿಕರಿಂದ ದೂರು ಬಂದ ಪರಿಣಾಮ ತಹಶೀಲ್ದಾರ್ ಕುಂಞಿ ಅಹಮದ್ ಬುಧವಾರ ಯುವಕನನ್ನು ರಕ್ಷಿಸಿ, ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.</p>.<p>ಬೆಳ್ಳೂರು ಕ್ರಾಸ್ನ ಶೇಖರ್ ಮಟನ್ ಸ್ಟಾಲ್ ಮಾಲೀಕ ಶೇಖರ್ 23 ವರ್ಷದ ಯುವಕನೊಬ್ಬನಿಗೆ ₹ 40 ಸಾವಿರ ಸಾಲ ನೀಡಿದ್ದ. ಜೀತ ಮಾಡಿ ಸಾಲ ತೀರಿಸುವಂತೆ ಯುವಕನನನ್ನು ಅಂಗಡಿಯಲ್ಲೇ ಇಟ್ಟುಕೊಂಡಿದ್ದ. ಕಳೆದ 8 ವರ್ಷಗಳಿಂದ ಕೆಲಸ ಮಾಡಿದ್ದರೂ ಸಾಲ ತೀರಿರಲಿಲ್ಲ. ಈ ಕುರಿತು ಜೀವಜ್ಯೋತಿ ಸಂಸ್ಥೆಯ ಸದಸ್ಯರು ತಹಶೀಲ್ದಾರ್ಗೆ ದೂರು ಕೊಟ್ಟಿದ್ದರು.</p>.<p>ತಹಶೀಲ್ದಾರ್ ಕುಂಞಿ ಅಹಮದ್ ನೇತೃತ್ವದಲ್ಲಿ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಅನಂತರಾಜು, ಕಾರ್ಮಿಕ ನಿರೀಕ್ಷಕ ಮಹೇಶ್, ಸಮಾಜ ಕಲ್ಯಾಣ ಇಲಾಖೆಯ ರಾಜಶೇಖರ್, ಬೆಳ್ಳೂರು ಪಪಂ ಮುಖ್ಯಾಧಿಕಾರಿ ಮಂಜುನಾಥ್ ದಾಳಿ ನಡೆಸಿ ಯುವಕನನ್ನು ರಕ್ಷಿಸಿದರು. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>