ಕೀರ್ತಿರಾಜ್ ಎಂಬುವರಿಗೆ ಸೇರಿದ ’ಆತ್ಮಾನಂದ ಸ್ಟೋನ್ ಕ್ರಷರ್’ನಲ್ಲಿ ರಾತ್ರಿ ಈ ಕೃತ್ಯ ನಡೆದಿದೆ. ಪೂರ್ಣಚಂದ್ರ ಊಟ ಮಾಡುತ್ತಿದ್ದ ವೇಳೆ ಐದಾರು ಜನರ ಗುಂಪು ದಾಳಿ ನಡೆಸಿ ತಲೆ, ಕತ್ತು, ಹೊಟ್ಟೆಯ ಭಾಗಕ್ಕೆ ಮಚ್ಚಿನಿಂದ ಹೊಡೆದಿದೆ. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.