<p><strong>ಶ್ರೀರಂಗಪಟ್ಟಣ: </strong>ತಾಲ್ಲೂಕಿನ ಗಣಂಗೂರು ಬಳಿ ಶುಕ್ರವಾರ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ.<br />ಮಂಡ್ಯ ತಾಲ್ಲೂಕು ಉಮ್ಮಡಹಳ್ಳಿ ಗ್ರಾಮದ ದಿವಂಗತ ಶ್ರೀನಿವಾಸಯ್ಯ ಅವರ ಮಗ ಯು.ಎಸ್. ಪೂರ್ಣಚಂದ್ರ (28) ಹತ್ಯೆಯಾದ ಯುವಕ.</p>.<p>ಕೀರ್ತಿರಾಜ್ ಎಂಬುವರಿಗೆ ಸೇರಿದ ’ಆತ್ಮಾನಂದ ಸ್ಟೋನ್ ಕ್ರಷರ್’ನಲ್ಲಿ ರಾತ್ರಿ ಈ ಕೃತ್ಯ ನಡೆದಿದೆ. ಪೂರ್ಣಚಂದ್ರ ಊಟ ಮಾಡುತ್ತಿದ್ದ ವೇಳೆ ಐದಾರು ಜನರ ಗುಂಪು ದಾಳಿ ನಡೆಸಿ ತಲೆ, ಕತ್ತು, ಹೊಟ್ಟೆಯ ಭಾಗಕ್ಕೆ ಮಚ್ಚಿನಿಂದ ಹೊಡೆದಿದೆ. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.</p>.<p>ಹಲ್ಲೆ ತಡೆಯಲು ಮುಂದಾದ ಜಕ್ಕನಹಳ್ಳಿ ಗ್ರಾಮದ ಪವನ್ ಎಂಬಾತ ಬಲ ತೊಡೆಗೆ ಮಚ್ಚಿನ ಏಟು ಬಿದ್ದಿದೆ. ಜತೆಯಲ್ಲಿದ್ದ ಚಾಮರಾಜ, ನಂಜುಂಡ ಮತ್ತು ರಾಜೇಶ್ ತಪ್ಪಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಸ್ಥಳಕ್ಕೆ ಎಸ್ಪಿ ಕೆ. ಪರಶುರಾಂ, ಡಿವೈಎಸ್ಪಿ ಅರುಣ್ ನಾಗೇಗೌಡ, ಸಿಪಿಐ ಡಿ. ಯೋಗೇಶ್, ಎಸ್ಐ ಗಿರೀಶ್ ಭೇಟಿ ನೀಡಿದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಮೃತ ಪೂರ್ಣಚಂದ್ರ ಹತ್ತು ವರ್ಷಗಳಿಂದ ಜಕ್ಕನಹಳ್ಳಿಯ ತಮ್ಮ ಸಂಬಂಧಿಕರ ಮನೆಯಲ್ಲಿ ವಾಸವಿದ್ದು,<br />ಜಲ್ಲಿ ಕ್ರಷರ್ನಲ್ಲಿ ರೈಟರ್ ಕೆಲಸ ಮಾಡಿಕೊಂಡಿದ್ದ. ಕಲ್ಲಿನ ಪುಡಿ ತುಂಬುವ ವಿಷಯಕ್ಕೆ ಕೆಲವರೊಂದಿಗೆ ಗಲಾಟೆ ಆಗಿತ್ತು. ಇದೇ ವಿಷಯಕ್ಕೆ ಈ ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀರಂಗಪಟ್ಟಣ: </strong>ತಾಲ್ಲೂಕಿನ ಗಣಂಗೂರು ಬಳಿ ಶುಕ್ರವಾರ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ.<br />ಮಂಡ್ಯ ತಾಲ್ಲೂಕು ಉಮ್ಮಡಹಳ್ಳಿ ಗ್ರಾಮದ ದಿವಂಗತ ಶ್ರೀನಿವಾಸಯ್ಯ ಅವರ ಮಗ ಯು.ಎಸ್. ಪೂರ್ಣಚಂದ್ರ (28) ಹತ್ಯೆಯಾದ ಯುವಕ.</p>.<p>ಕೀರ್ತಿರಾಜ್ ಎಂಬುವರಿಗೆ ಸೇರಿದ ’ಆತ್ಮಾನಂದ ಸ್ಟೋನ್ ಕ್ರಷರ್’ನಲ್ಲಿ ರಾತ್ರಿ ಈ ಕೃತ್ಯ ನಡೆದಿದೆ. ಪೂರ್ಣಚಂದ್ರ ಊಟ ಮಾಡುತ್ತಿದ್ದ ವೇಳೆ ಐದಾರು ಜನರ ಗುಂಪು ದಾಳಿ ನಡೆಸಿ ತಲೆ, ಕತ್ತು, ಹೊಟ್ಟೆಯ ಭಾಗಕ್ಕೆ ಮಚ್ಚಿನಿಂದ ಹೊಡೆದಿದೆ. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.</p>.<p>ಹಲ್ಲೆ ತಡೆಯಲು ಮುಂದಾದ ಜಕ್ಕನಹಳ್ಳಿ ಗ್ರಾಮದ ಪವನ್ ಎಂಬಾತ ಬಲ ತೊಡೆಗೆ ಮಚ್ಚಿನ ಏಟು ಬಿದ್ದಿದೆ. ಜತೆಯಲ್ಲಿದ್ದ ಚಾಮರಾಜ, ನಂಜುಂಡ ಮತ್ತು ರಾಜೇಶ್ ತಪ್ಪಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಸ್ಥಳಕ್ಕೆ ಎಸ್ಪಿ ಕೆ. ಪರಶುರಾಂ, ಡಿವೈಎಸ್ಪಿ ಅರುಣ್ ನಾಗೇಗೌಡ, ಸಿಪಿಐ ಡಿ. ಯೋಗೇಶ್, ಎಸ್ಐ ಗಿರೀಶ್ ಭೇಟಿ ನೀಡಿದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಮೃತ ಪೂರ್ಣಚಂದ್ರ ಹತ್ತು ವರ್ಷಗಳಿಂದ ಜಕ್ಕನಹಳ್ಳಿಯ ತಮ್ಮ ಸಂಬಂಧಿಕರ ಮನೆಯಲ್ಲಿ ವಾಸವಿದ್ದು,<br />ಜಲ್ಲಿ ಕ್ರಷರ್ನಲ್ಲಿ ರೈಟರ್ ಕೆಲಸ ಮಾಡಿಕೊಂಡಿದ್ದ. ಕಲ್ಲಿನ ಪುಡಿ ತುಂಬುವ ವಿಷಯಕ್ಕೆ ಕೆಲವರೊಂದಿಗೆ ಗಲಾಟೆ ಆಗಿತ್ತು. ಇದೇ ವಿಷಯಕ್ಕೆ ಈ ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>