<p><strong>ಮಂಡ್ಯ:</strong> ನಗರಸಭೆಯು ಬಜೆಟ್ ಅನುಮೋದನೆಗಾಗಿ ಇದೇ 10ರಂದು ವಿಶೇಷ ಸಭೆಯನ್ನು ಕರೆದಿದೆ. ಆದರೆ, ಸಭೆಯ ದಿನಾಂಕ ಹೊರಬಿದ್ದ ಹಿಂದೆಯೇ ಸಭೆ ಕರೆಯುವ ಅಧ್ಯಕ್ಷರ ಅಧಿಕಾರವನ್ನೇ ಪ್ರಶ್ನಿಸಿ ತಕರಾರು ವ್ಯಕ್ತವಾಗಿದೆ.<br /> <br /> ಇನ್ನೊಂದೆಡೆ, ಒಟ್ಟು 35 ಸದಸ್ಯ ಬಲದ ಮಂಡ್ಯ ನಗರಸಭೆಯಲ್ಲಿ 18 ಮಂದಿ ಸದನದಿಂದ ಹೊರಗಿದ್ದು, ನಿರೀಕ್ಷೆಯಂತೆ ಬಜೆಟ್ ಸಭೆ ನಡೆದರೆ ಕೇವಲ 17 ಮಂದಿ ಚುನಾಯಿತ ಸದಸ್ಯರು ಮಾತ್ರವೇ 2012-13ನೇ ಸಾಲಿನ ಬಜೆಟ್ ಸಾಧಕ-ಬಾಧಕಗಳನ್ನು ಚರ್ಚಿಸಬೇಕಾಗಿದೆ.<br /> <br /> ಈ ಸದಸ್ಯರೊಂದಿಗೆ ಸರ್ಕಾರ ಈಚೆಗೆ ಹೊಸದಾಗಿ ನಾಮಕರಣ ಮಾಡಿರುವ ಐವರು ಸದಸ್ಯರು ಸೇರಲಿದ್ದಾರೆ. ಆಪರೇಷನ್ ಕಮಲ ಕಾರ್ಯಾಚರಣೆಯ ಪರಿಣಾಮ ಜೆಡಿಎಸ್ನ 13 ಸದಸ್ಯರು ಸದಸ್ಯತ್ವ ಕಳೆದುಕೊಂಡಿದ್ದರೆ, ಕಳೆದ ಸಭೆಯಲ್ಲಿ ಅನುಚಿತ ವರ್ತನೆಗಾಗಿ ಐವರು ಸದಸ್ಯರು ಆರು ತಿಂಗಳ ಅವಧಿಗೆ ಅಮಾನತುಗೊಂಡಿದ್ದಾರೆ.<br /> <br /> ಜೆಡಿಎಸ್ನ ಒಳಜಗಳದ ಪರಿಣಾಮ ನಗರಸಭೆಯಲ್ಲಿ ಆಡಳಿತ ವೈಫಲವಾಗಿದೆ ಎಂಬ ಟೀಕೆಗಳು ವ್ಯಾಪಕವಾಗಿ ಕೇಳಿಬರುತ್ತಿದ್ದು, ಅದರ ನಡುವೆಯೇ ನಗರಸಭೆಯ ವಾರ್ಷಿಕ ಬಜೆಟ್ಗೆ ಸಿದ್ಧತೆ ನಡೆಸಿದೆ. ಕಳೆದ ವರ್ಷವೂ ಆರ್ಥಿಕ ವರ್ಷ ಶುರುವಾದ ನಂತರವೇ ಏಪ್ರಿಲ್ನಲ್ಲಿ ಬಜೆಟ್ ಅನುಮೋದನೆಯಾಗಿತ್ತು.<br /> <br /> ಸಭೆಗೆ ತಕರಾರು: ಈ ನಡುವೆ, ಅವಿಶ್ವಾಸ ನಿಲುವಳಿ ಮಂಡಿಸಲು ಸಭೆ ಕರೆಯಬೇಕು ಎಂಬ ಒತ್ತಾಯ ಕುರಿತ ಮನವಿ ಸಲ್ಲಿಸಿರುವ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರು ಇದೇ 7ರಂದು ವಿಶೇಷ ಸಭೆ ಮತ್ತು 10ರಂದು ಬಜೆಟ್ ಅನುಮೋದನೆಗೆ ಸಭೆ ಕರೆದಿರುವುದು ಅಸಿಂಧುವಾಗಿದೆ ಎಂದು ಮಾಜಿ ಸದಸ್ಯ ನಾಗೇಶ್ ಆರೋಪಿಸಿದ್ದಾರೆ.<br /> <br /> ಈಗಾಗಲೇ ಜೆಡಿಎಸ್ನ ಕೆಲ ಸದಸ್ಯರೇ ಅವಿಶ್ವಾಸ ನಿಲುವಳಿಗೆ ಮಂಡನೆಗಾಗಿ ಸಭೆ ಕರೆಯಲು ಒತ್ತಾಯಿಸಿದ್ದಾರೆ. ಆ ಮನವಿಗೆ ಸ್ಪಂದಿಸದೇ ಈಗ ಬಜೆಟ್ಗಾಗಿ ಸಭೆ ಕರೆದಿರುವುದು ಸರಿಯಲ್ಲ. ಅವಿಶ್ವಾಸ ನಿಲುವಳಿ ಚರ್ಚೆಗಾಗಿ ಸಭೆ ಕರೆಯದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.<br /> <br /> ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಎಂ.ಜೆ.ಚಿಕ್ಕಣ್ಣ ಅವರು, `ಈಗ 7 ಮತ್ತು 10ರಂದು ಕರೆದಿರುವ ನಗರಸಭೆಯ ವಿಶೇಷ ಸಭೆಗಳು ಅಸಿಂಧು ಆಗಲಿವೆ. ಅಧ್ಯಕ್ಷರಿಗೆ ಈಗಿನ ಸ್ಥಿತಿಯಲ್ಲಿ ಸಭೆ ಕರೆಯುವ ಅಧಿಕಾರವೇ ಇಲ್ಲ~ ಎಂದು ಪ್ರತಿಪಾದಿಸಿದ್ದಾರೆ.<br /> <br /> ಈಗಾಗಲೇ 10 ಮಂದಿ ಸದಸ್ಯರು ಅವಿಶ್ವಾಸ ನಿಲುವಳಿ ಮಂಡಿಸಲು ಸಭೆ ಕರೆಯಲು ಕೋರಿ ಮನವಿ ಸಲ್ಲಿಸಿದ್ದೇವೆ. ಅದು ಇನ್ನೂ ಇತ್ಯರ್ಥವಾಗಬೇಕು. ಹೀಗಾಗಿ, ಪುರಸಭೆ ಕಾಯ್ದೆ 51/3ರ ಅನ್ವಯ ಇವರು ಸಭೆ ಕರೆಯಲು ಬರುವುದಿಲ್ಲ ಎಂದು ವಾದಿಸಿದರು.<br /> <br /> ಈ ಕುರಿತು ಪ್ರತಿಕ್ರಿಯಿಸಿರುವ ಅಧ್ಯಕ್ಷ ಎಂ.ಪಿ.ಅರುಣ್ಕುಮಾರ್ ಅವರು, `ಅವಿಶ್ವಾಸ ನಿಲುವಳಿ ಕುರಿತು ನನಗೆ ನೇರವಾಗಿ ಯಾವುದೇ ಅರ್ಜಿ ಬಂದಿಲ್ಲ. ಈಗ ಬಜೆಟ್ ಸಭೆಯನ್ನು ಆಯುಕ್ತರ ಜೊತೆಗೆ ಚರ್ಚಿಸಿ, ನಿಯಮಗಳ ಅನುಸಾರವೇ ಕರೆಯಲಾಗಿದೆ. ಇಲ್ಲಿ ನಿಯಮಗಳ ಉಲ್ಲಂಘನೆಯಾಗಿಲ್ಲ~ ಎಂದು ಸಮರ್ಥಿಸಿಕೊಂಡರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ನಗರಸಭೆಯು ಬಜೆಟ್ ಅನುಮೋದನೆಗಾಗಿ ಇದೇ 10ರಂದು ವಿಶೇಷ ಸಭೆಯನ್ನು ಕರೆದಿದೆ. ಆದರೆ, ಸಭೆಯ ದಿನಾಂಕ ಹೊರಬಿದ್ದ ಹಿಂದೆಯೇ ಸಭೆ ಕರೆಯುವ ಅಧ್ಯಕ್ಷರ ಅಧಿಕಾರವನ್ನೇ ಪ್ರಶ್ನಿಸಿ ತಕರಾರು ವ್ಯಕ್ತವಾಗಿದೆ.<br /> <br /> ಇನ್ನೊಂದೆಡೆ, ಒಟ್ಟು 35 ಸದಸ್ಯ ಬಲದ ಮಂಡ್ಯ ನಗರಸಭೆಯಲ್ಲಿ 18 ಮಂದಿ ಸದನದಿಂದ ಹೊರಗಿದ್ದು, ನಿರೀಕ್ಷೆಯಂತೆ ಬಜೆಟ್ ಸಭೆ ನಡೆದರೆ ಕೇವಲ 17 ಮಂದಿ ಚುನಾಯಿತ ಸದಸ್ಯರು ಮಾತ್ರವೇ 2012-13ನೇ ಸಾಲಿನ ಬಜೆಟ್ ಸಾಧಕ-ಬಾಧಕಗಳನ್ನು ಚರ್ಚಿಸಬೇಕಾಗಿದೆ.<br /> <br /> ಈ ಸದಸ್ಯರೊಂದಿಗೆ ಸರ್ಕಾರ ಈಚೆಗೆ ಹೊಸದಾಗಿ ನಾಮಕರಣ ಮಾಡಿರುವ ಐವರು ಸದಸ್ಯರು ಸೇರಲಿದ್ದಾರೆ. ಆಪರೇಷನ್ ಕಮಲ ಕಾರ್ಯಾಚರಣೆಯ ಪರಿಣಾಮ ಜೆಡಿಎಸ್ನ 13 ಸದಸ್ಯರು ಸದಸ್ಯತ್ವ ಕಳೆದುಕೊಂಡಿದ್ದರೆ, ಕಳೆದ ಸಭೆಯಲ್ಲಿ ಅನುಚಿತ ವರ್ತನೆಗಾಗಿ ಐವರು ಸದಸ್ಯರು ಆರು ತಿಂಗಳ ಅವಧಿಗೆ ಅಮಾನತುಗೊಂಡಿದ್ದಾರೆ.<br /> <br /> ಜೆಡಿಎಸ್ನ ಒಳಜಗಳದ ಪರಿಣಾಮ ನಗರಸಭೆಯಲ್ಲಿ ಆಡಳಿತ ವೈಫಲವಾಗಿದೆ ಎಂಬ ಟೀಕೆಗಳು ವ್ಯಾಪಕವಾಗಿ ಕೇಳಿಬರುತ್ತಿದ್ದು, ಅದರ ನಡುವೆಯೇ ನಗರಸಭೆಯ ವಾರ್ಷಿಕ ಬಜೆಟ್ಗೆ ಸಿದ್ಧತೆ ನಡೆಸಿದೆ. ಕಳೆದ ವರ್ಷವೂ ಆರ್ಥಿಕ ವರ್ಷ ಶುರುವಾದ ನಂತರವೇ ಏಪ್ರಿಲ್ನಲ್ಲಿ ಬಜೆಟ್ ಅನುಮೋದನೆಯಾಗಿತ್ತು.<br /> <br /> ಸಭೆಗೆ ತಕರಾರು: ಈ ನಡುವೆ, ಅವಿಶ್ವಾಸ ನಿಲುವಳಿ ಮಂಡಿಸಲು ಸಭೆ ಕರೆಯಬೇಕು ಎಂಬ ಒತ್ತಾಯ ಕುರಿತ ಮನವಿ ಸಲ್ಲಿಸಿರುವ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರು ಇದೇ 7ರಂದು ವಿಶೇಷ ಸಭೆ ಮತ್ತು 10ರಂದು ಬಜೆಟ್ ಅನುಮೋದನೆಗೆ ಸಭೆ ಕರೆದಿರುವುದು ಅಸಿಂಧುವಾಗಿದೆ ಎಂದು ಮಾಜಿ ಸದಸ್ಯ ನಾಗೇಶ್ ಆರೋಪಿಸಿದ್ದಾರೆ.<br /> <br /> ಈಗಾಗಲೇ ಜೆಡಿಎಸ್ನ ಕೆಲ ಸದಸ್ಯರೇ ಅವಿಶ್ವಾಸ ನಿಲುವಳಿಗೆ ಮಂಡನೆಗಾಗಿ ಸಭೆ ಕರೆಯಲು ಒತ್ತಾಯಿಸಿದ್ದಾರೆ. ಆ ಮನವಿಗೆ ಸ್ಪಂದಿಸದೇ ಈಗ ಬಜೆಟ್ಗಾಗಿ ಸಭೆ ಕರೆದಿರುವುದು ಸರಿಯಲ್ಲ. ಅವಿಶ್ವಾಸ ನಿಲುವಳಿ ಚರ್ಚೆಗಾಗಿ ಸಭೆ ಕರೆಯದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.<br /> <br /> ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಎಂ.ಜೆ.ಚಿಕ್ಕಣ್ಣ ಅವರು, `ಈಗ 7 ಮತ್ತು 10ರಂದು ಕರೆದಿರುವ ನಗರಸಭೆಯ ವಿಶೇಷ ಸಭೆಗಳು ಅಸಿಂಧು ಆಗಲಿವೆ. ಅಧ್ಯಕ್ಷರಿಗೆ ಈಗಿನ ಸ್ಥಿತಿಯಲ್ಲಿ ಸಭೆ ಕರೆಯುವ ಅಧಿಕಾರವೇ ಇಲ್ಲ~ ಎಂದು ಪ್ರತಿಪಾದಿಸಿದ್ದಾರೆ.<br /> <br /> ಈಗಾಗಲೇ 10 ಮಂದಿ ಸದಸ್ಯರು ಅವಿಶ್ವಾಸ ನಿಲುವಳಿ ಮಂಡಿಸಲು ಸಭೆ ಕರೆಯಲು ಕೋರಿ ಮನವಿ ಸಲ್ಲಿಸಿದ್ದೇವೆ. ಅದು ಇನ್ನೂ ಇತ್ಯರ್ಥವಾಗಬೇಕು. ಹೀಗಾಗಿ, ಪುರಸಭೆ ಕಾಯ್ದೆ 51/3ರ ಅನ್ವಯ ಇವರು ಸಭೆ ಕರೆಯಲು ಬರುವುದಿಲ್ಲ ಎಂದು ವಾದಿಸಿದರು.<br /> <br /> ಈ ಕುರಿತು ಪ್ರತಿಕ್ರಿಯಿಸಿರುವ ಅಧ್ಯಕ್ಷ ಎಂ.ಪಿ.ಅರುಣ್ಕುಮಾರ್ ಅವರು, `ಅವಿಶ್ವಾಸ ನಿಲುವಳಿ ಕುರಿತು ನನಗೆ ನೇರವಾಗಿ ಯಾವುದೇ ಅರ್ಜಿ ಬಂದಿಲ್ಲ. ಈಗ ಬಜೆಟ್ ಸಭೆಯನ್ನು ಆಯುಕ್ತರ ಜೊತೆಗೆ ಚರ್ಚಿಸಿ, ನಿಯಮಗಳ ಅನುಸಾರವೇ ಕರೆಯಲಾಗಿದೆ. ಇಲ್ಲಿ ನಿಯಮಗಳ ಉಲ್ಲಂಘನೆಯಾಗಿಲ್ಲ~ ಎಂದು ಸಮರ್ಥಿಸಿಕೊಂಡರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>