<p><strong>ಮಂಡ್ಯ: </strong>ಹೊಳಲು ರಸ್ತೆಯಲ್ಲಿನ ಸ್ಮಶಾನ ಒತ್ತುವರಿ ತೆರವು ಕಾರ್ಯದ ಹಿಂದೆಯೇ ಒತ್ತುವರಿ ಆಗಿದೆ ಎನ್ನಲಾಗಿರುವ ಇನ್ನು ಕೆಲ ಸ್ಮಶಾನ ಭೂಮಿಯ ತೆರವು ಕಾರ್ಯಕ್ಕೆ ನಗರಸಭೆ ಮತ್ತು ತಾಲ್ಲೂಕು ಆಡಳಿತ ಚಾಲನೆ ನೀಡಿದೆ.<br /> <br /> ಅದರ ಕಾರ್ಯಕ್ರಮವಾಗಿ ಶುಕ್ರವಾರ ನಾಲಬಂದವಾಡಿ ಸ್ಮಶಾನದ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಈ ಸ್ಮಶಾನ ವ್ಯಾಪ್ತಿ 1.26 ಎಕರೆ ಎನ್ನಲಾಗಿದ್ದು, ಈ ಪೈಕಿ 15 ಗುಂಟೆ ಭೂಮಿ ಒತ್ತುವರಿಯಾಗಿದೆ ಎಂದು ಹೇಳಲಾಗಿದೆ.<br /> <br /> ತಹಶೀಲ್ದಾರ್ ಡಾ. ರಾಜೇಂದ್ರ ಪ್ರಸಾದ್ ಮತ್ತು ಸಿಬ್ಬಂದಿ ಇಂದು ಪೂರ್ವಭಾವಿ ಸಮೀಕ್ಷೆ ನಡೆಸಿದರು. ಒತ್ತುವರಿ ಹಿನ್ನೆಲೆಯಲ್ಲಿ ಈ ಸ್ಮಶಾನಕ್ಕೆ ಸುತ್ತುಗೋಡೆ ನಿರ್ಮಿಸುವ ಕಾರ್ಯವು ನೆನೆಗುದಿಗೆ ಬಿದ್ದಿತ್ತು.<br /> <br /> ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಹಿಂದೆ ಸುಮಾರು4 ಲಕ್ಷ ರೂಪಾಯಿ ಸುತ್ತುಗೋಡೆ ನಿರ್ಮಿಸಲು ಮಂಜೂರಾಗಿತ್ತು. ಆದರೆ, ಆಸು ಪಾಸಿನ ಜನರು ಗೋಡೆ ನಿರ್ಮಿಸುವ ಕಾರ್ಯಕ್ಕೆ ತಕರಾರು ತೆಗೆದಿದ್ದ ಹಿನ್ನೆಲೆಯಲ್ಲಿ ಕೈಗೂಡಿರಲಿಲ್ಲ.<br /> <br /> ಈಗ ಮತ್ತೆ ಸಮೀಕ್ಷೆ ನಡೆಸಲಾಗುತ್ತಿದ್ದು, ಹದ್ದುಬಸ್ತು ನಿಗದಿಪಡಿಸಿದ ಬಳಿಕ ಹಣಕಾಸು ಲಭ್ಯತೆ ಆಧರಿಸಿ ಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ನಗರಸಭೆ ಅಧ್ಯಕ್ಷ ಅರುಣ್ಕುಮಾರ್ ಹೇಳಿದರು.<br /> <br /> <strong>ಇನ್ನು ಎರಡು ಸ್ಮಶಾನ:</strong> ಜೊತೆಗೆ, ಶಂಕರಮಠ ಮತ್ತು ಯತ್ತಗದಹಳ್ಳಿ ಸ್ಮಶಾನದ ಭೂಮಿಯ ವ್ಯಾಪ್ತಿ ಕುರಿತಂತೆಯೂ ಸಮೀಕ್ಷೆ ಕಾರ್ಯ ನಡೆಯಬೇಕಿದ್ದು, ಹದ್ದು ಬಸ್ತು ಗುರುತಿಸಿ ಸುತ್ತು ಗೋಡೆಯನ್ನು ನಿರ್ಮಾಣ ಮಾಡಬೇಕಿದೆ ಎಂದರು.<br /> <br /> ಶಂಕರಮಠ ಸ್ಮಶಾನವು ಭಾಗಶಃ ಒತ್ತುವರಿಯಾಗಿದೆ. ಅದನ್ನು ಇತ್ಯರ್ಥಪಡಿಸ ಬೇಕಾಗಿದೆ. ಯತ್ತಗದಹಳ್ಳಿ ಸ್ಮಶಾನ ಬಳಿಯೂ ಸ್ವಲ್ಪ ಭೂಮಿ ಒತ್ತುವರಿಯಾಗಿದೆ. ಅಲ್ಲಿ, ರಸ್ತೆ ಅಭಿವೃದ್ಧಿಯೂ ಸೇರಿದಂತೆ ಸುತ್ತುಗೋಡೆ ನಿರ್ಮಾಣ ಮಾಡಬೇಕಿದೆ ಎಂದರು.<br /> <br /> ಈ ನಡುವೆ, ಇತ್ತೀಚೆಗೆ ಒತ್ತುವರಿ ತೆರವು ಕಾರ್ಯ ಆಗಿರುವ ಹೊಳಲು ರಸ್ತೆಯ ಸ್ಮಶಾನಕ್ಕೆ ಸುತ್ತುಗೋಡೆ ನಿರ್ಮಾಣ ಮತ್ತು ಇತರ ಕಾಮಗಾರಿ ಕುರಿತಂತೆ ಅಂದಾಜು ರೂಪುರೇಷೆಯನ್ನು ಅನುಮೋದನೆಗೆ ಕಳುಹಿಸಲಾಗಿದೆ ಎಂದು ನಗರಸಭೆ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ: </strong>ಹೊಳಲು ರಸ್ತೆಯಲ್ಲಿನ ಸ್ಮಶಾನ ಒತ್ತುವರಿ ತೆರವು ಕಾರ್ಯದ ಹಿಂದೆಯೇ ಒತ್ತುವರಿ ಆಗಿದೆ ಎನ್ನಲಾಗಿರುವ ಇನ್ನು ಕೆಲ ಸ್ಮಶಾನ ಭೂಮಿಯ ತೆರವು ಕಾರ್ಯಕ್ಕೆ ನಗರಸಭೆ ಮತ್ತು ತಾಲ್ಲೂಕು ಆಡಳಿತ ಚಾಲನೆ ನೀಡಿದೆ.<br /> <br /> ಅದರ ಕಾರ್ಯಕ್ರಮವಾಗಿ ಶುಕ್ರವಾರ ನಾಲಬಂದವಾಡಿ ಸ್ಮಶಾನದ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಈ ಸ್ಮಶಾನ ವ್ಯಾಪ್ತಿ 1.26 ಎಕರೆ ಎನ್ನಲಾಗಿದ್ದು, ಈ ಪೈಕಿ 15 ಗುಂಟೆ ಭೂಮಿ ಒತ್ತುವರಿಯಾಗಿದೆ ಎಂದು ಹೇಳಲಾಗಿದೆ.<br /> <br /> ತಹಶೀಲ್ದಾರ್ ಡಾ. ರಾಜೇಂದ್ರ ಪ್ರಸಾದ್ ಮತ್ತು ಸಿಬ್ಬಂದಿ ಇಂದು ಪೂರ್ವಭಾವಿ ಸಮೀಕ್ಷೆ ನಡೆಸಿದರು. ಒತ್ತುವರಿ ಹಿನ್ನೆಲೆಯಲ್ಲಿ ಈ ಸ್ಮಶಾನಕ್ಕೆ ಸುತ್ತುಗೋಡೆ ನಿರ್ಮಿಸುವ ಕಾರ್ಯವು ನೆನೆಗುದಿಗೆ ಬಿದ್ದಿತ್ತು.<br /> <br /> ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಹಿಂದೆ ಸುಮಾರು4 ಲಕ್ಷ ರೂಪಾಯಿ ಸುತ್ತುಗೋಡೆ ನಿರ್ಮಿಸಲು ಮಂಜೂರಾಗಿತ್ತು. ಆದರೆ, ಆಸು ಪಾಸಿನ ಜನರು ಗೋಡೆ ನಿರ್ಮಿಸುವ ಕಾರ್ಯಕ್ಕೆ ತಕರಾರು ತೆಗೆದಿದ್ದ ಹಿನ್ನೆಲೆಯಲ್ಲಿ ಕೈಗೂಡಿರಲಿಲ್ಲ.<br /> <br /> ಈಗ ಮತ್ತೆ ಸಮೀಕ್ಷೆ ನಡೆಸಲಾಗುತ್ತಿದ್ದು, ಹದ್ದುಬಸ್ತು ನಿಗದಿಪಡಿಸಿದ ಬಳಿಕ ಹಣಕಾಸು ಲಭ್ಯತೆ ಆಧರಿಸಿ ಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ನಗರಸಭೆ ಅಧ್ಯಕ್ಷ ಅರುಣ್ಕುಮಾರ್ ಹೇಳಿದರು.<br /> <br /> <strong>ಇನ್ನು ಎರಡು ಸ್ಮಶಾನ:</strong> ಜೊತೆಗೆ, ಶಂಕರಮಠ ಮತ್ತು ಯತ್ತಗದಹಳ್ಳಿ ಸ್ಮಶಾನದ ಭೂಮಿಯ ವ್ಯಾಪ್ತಿ ಕುರಿತಂತೆಯೂ ಸಮೀಕ್ಷೆ ಕಾರ್ಯ ನಡೆಯಬೇಕಿದ್ದು, ಹದ್ದು ಬಸ್ತು ಗುರುತಿಸಿ ಸುತ್ತು ಗೋಡೆಯನ್ನು ನಿರ್ಮಾಣ ಮಾಡಬೇಕಿದೆ ಎಂದರು.<br /> <br /> ಶಂಕರಮಠ ಸ್ಮಶಾನವು ಭಾಗಶಃ ಒತ್ತುವರಿಯಾಗಿದೆ. ಅದನ್ನು ಇತ್ಯರ್ಥಪಡಿಸ ಬೇಕಾಗಿದೆ. ಯತ್ತಗದಹಳ್ಳಿ ಸ್ಮಶಾನ ಬಳಿಯೂ ಸ್ವಲ್ಪ ಭೂಮಿ ಒತ್ತುವರಿಯಾಗಿದೆ. ಅಲ್ಲಿ, ರಸ್ತೆ ಅಭಿವೃದ್ಧಿಯೂ ಸೇರಿದಂತೆ ಸುತ್ತುಗೋಡೆ ನಿರ್ಮಾಣ ಮಾಡಬೇಕಿದೆ ಎಂದರು.<br /> <br /> ಈ ನಡುವೆ, ಇತ್ತೀಚೆಗೆ ಒತ್ತುವರಿ ತೆರವು ಕಾರ್ಯ ಆಗಿರುವ ಹೊಳಲು ರಸ್ತೆಯ ಸ್ಮಶಾನಕ್ಕೆ ಸುತ್ತುಗೋಡೆ ನಿರ್ಮಾಣ ಮತ್ತು ಇತರ ಕಾಮಗಾರಿ ಕುರಿತಂತೆ ಅಂದಾಜು ರೂಪುರೇಷೆಯನ್ನು ಅನುಮೋದನೆಗೆ ಕಳುಹಿಸಲಾಗಿದೆ ಎಂದು ನಗರಸಭೆ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>