ಉದ್ಯಾನದಲ್ಲಿ ಜನ ಜಾತ್ರೆ ಏರ್ಪಟ್ಟಿತ್ತು. ಸುತ್ತಲು ವಿವಿಧ ತಿನಿಸುಗಳನ್ನು ಮಾರಾಟ ಮಾಡುವ ಅಂಗಡಿಗಳು ತಲೆ ಎತ್ತಿದ್ದವು. ಬೇಯಿಸಿದ ಬಿಸಿಬಿಸಿ ಕಡಲೆಕಾಯಿ, ಚುರುಮುರಿ, ಗೋಬಿ ಮಂಚೂರಿ, ಪಾನಿಪುರಿ ಅಂಗಡಿಗಳು ಎಲ್ಲೆಂದರಲ್ಲಿ ತಲೆ ಎತ್ತಿದ್ದವು. ದಿನವಿಡೀ ಮೋಡಮುಚ್ಚಿದ ವಾತಾವರಣ ಇದ್ದ ಕಾರಣ ಜನರು ತಂಗಾಳಿ ಸವಿದರು. ಉದ್ಯಾನವಿಡೀ ಮಕ್ಕಳ ಜಾತ್ರೆಯಂತಾಗಿತ್ತು. ಅಲ್ಲಿದ್ದ ಪರಿಕರಗ
ಳೊಂದಿಗೆ ಆಟವಾಡಿದ ಮಕ್ಕಳು ಆನಂದ ಅನುಭವಿದರು. ಮಹಿಳೆಯರು, ಹಿರಿಯರು, ಯುವಕರು ಎಲ್ಲರೂ ಸೇರಿ ಹಸಿರು ವಾತಾವರಣದಲ್ಲಿ ದಿನ ಕಳೆದರು.